ಉಡುಪಿ: ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅಸಹಜ ಸಾವು ಕುರಿತು ನನ್ನನ್ನು ಬೇಕಾದರೂ ಪೊಲೀಸರು ವಿಚಾರಣೆ ನಡೆಸಲಿ. ಈ ಕುರಿತು ಮುಕ್ತವಾಗಿ ತನಿಖೆ ಮಾಡಬಹುದು. ಒಟ್ಟಿನಲ್ಲಿ ನಿಷ್ಪಕ್ಷಪಾತ ತನಿಖೆಯಾಗಲಿ ಎಂಬುದೇ ನಮ್ಮ ಆಶಯ ಅಂತ ಪೇಜಾವರ ಶ್ರೀಗಳು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿರೂರು ಶ್ರೀಗೆ ಮೊದಲಿಂದಲೂ ಅನಾರೋಗ್ಯ ಇತ್ತು. ಹೀಗಾಗಿ ಅವರ ಸಾವು ಕೊಲೆಯಲ್ಲ. ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕಿತ್ತು ಅಂದ್ರು. ಇದೇ ವೇಳೆ ಕರಾವಳಿಯ ಸ್ವಾಮೀಜಿಗಳಾದ ಸಂತೋಷ್ ಗುರೂಜಿ, ಕೇಮಾರು ಸ್ವಾಮೀಜಿ, ವಿಶ್ವ ವಿಜಯರು ಸರಿಯಾಗಿ ವಿಚಾರ ಮಾಡಿ ಜವಾಬ್ದಾರಿಯುತ ಹೇಳಿಕೆ ಕೊಡಬೇಕೆಂದು ವಿನಂತಿ ಮಾಡಿಕೊಂಡರು. ಇದನ್ನೂ ಓದಿ: ಶಿರೂರು ಶ್ರೀಗಳಿಗೆ ಮದ್ಯಪಾನ, ಸ್ತ್ರೀ ಸಂಪರ್ಕ ಇದ್ದಿರೋದಕ್ಕೆ ಹೀಗಾಯ್ತೋ ಏನೋ ಗೊತ್ತಿಲ್ಲ: ಪೇಜಾವರ ಶ್ರೀ
- Advertisement 2
ಮಠದವ್ರಿಂದಲೇ ಕೃತ್ಯ ಶಂಕೆ:
ಶ್ರೀಗಳ ನಿಧನದಂದು ನಾನು ಉಡುಪಿಯಲ್ಲಿ ಇರಲಿಲ್ಲ. ಅನ್ನಾಹಾರ ವಿಷವಾಗಿದೆಯೋ ಗೊತ್ತಿಲ್ಲ. ಕಿಡ್ನಿ, ಲಿವರ್ ಸಮಸ್ಯೆ ಅಂತ ಕೆಲವರು ಹೇಳುತ್ತಾರೆ. ಮಹಿಳೆ ಜೊತೆ ಜಗಳ ಆಗಿದೆ ಎಂಬ ಊಹಾಪೋಹ ಇದೆ. ಜೊತೆಗಿರುವವರಿಂದ ಸಮಸ್ಯೆಯಾಯ್ತೋ ಗೊತ್ತಿಲ್ಲ. ಪಲಾವ್ ತಿಂದಿರುವ ಬಗ್ಗೆ ಸಹೋದರ ಹೇಳಿದ್ದಾರೆ. ಬೇರೆ ಯಾವ ಮಠದಿಂದ ಯಾವುದೇ ಕೃತ್ಯ ನಡೆದಿಲ್ಲ. ಅವರ ಮಠದವರಿಂದಲೇ ಕೃತ್ಯ ನಡೆದಿರಬಹುದು ಅಂತ ಶಂಕೆ ವ್ಯಕ್ತಪಡಿಸಿದ್ರು.
- Advertisement 3
ಶಿರೂರು ಸ್ವಾಮೀಜಿಗೆ ಮದ್ಯಪಾನದಿಂದ ಹೀಗಾಯ್ತೋ ಗೊತ್ತಿಲ್ಲ. ವನ ಮಹೋತ್ಸವಕ್ಕೆ ಬಂದ ವಿದ್ಯಾರ್ಥಿಗಳಿಗೂ ಇರಿಸು ಮುರುಸಾಗಿತ್ತು. ಈ ಬಗ್ಗೆ ಕೂಡಾ ಮರಣೋತ್ತರ ಪರೀಕ್ಷೆಯಲ್ಲಿ ಮಾಹಿತಿ ಸಿಗಬಹುದು ಅಂದ್ರು. ಇದನ್ನೂ ಓದಿ: ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಧನಕ್ಕೆ ಟ್ವಿಸ್ಟ್!
- Advertisement 4
ಸನ್ಯಾಸ ಧರ್ಮ ಪಾಲಿಸಿಲ್ಲ:
ಶಿರೂರು ಶ್ರೀ ಹಲವಾರು ಒಳ್ಳೆಯ ಕಾರ್ಯ ಮಾಡಿದ್ದಾರೆ. ಸಾಮಾಜಿಕ, ಸಾಂಸ್ಕೃತಿಕ ಕೆಲಸ ಮಾಡಿದ್ದಾರೆ. ಆದ್ರೆ ಅವರು ಸನ್ಯಾಸ ಧರ್ಮ ಪಾಲಿಸಿಲ್ಲ. ಶಿರೂರು ಸ್ವಾಮೀಜಿ ಪುಂಡಾಟಿಕೆ ಮಾಡುತ್ತಿದ್ದರು. ಕೆಲವೊಂದು ದುರ್ವ್ಯಸನಗಳು ಇತ್ತು. ಸ್ತ್ರೀಯರ ಮೇಲಿನ ಆಸಕ್ತಿ ಅವರಿಗೆ ಇತ್ತು. ಈ ಬಗ್ಗೆ ಪರ್ಯಾಯ ಸಭೆಯಲ್ಲೇ ಶ್ರೀಗಳನ್ನು ತಿದ್ದಿಕೊಳ್ಳಲು ಹೇಳಿದ್ದೆ. ಅಲ್ಲದೇ ಹಲವು ಬಾರಿ ವೈಯಕ್ತಿಕವಾಗಿಯೂ ನಾನು ಸಲಹೆ ನೀಡಿದ್ದೇನೆ. ಆದ್ರೆ ಲಕ್ಷ್ಮೀವರರು ಯಾವುದನ್ನೂ ಪಾಲಿಸಿಲ್ಲ ಅಂತ ಹೇಳಿದ್ರು. ಇದನ್ನೂ ಓದಿ: ಎಲ್ಲಿ ಹುಡುಕಿದ್ರೂ ಸ್ವಾಮೀಜಿ ಇಲ್ಲ – ಶಿರೂರು ಮಠದಲ್ಲಿ ರೂಬಿಯ ಮೂಕ ರೋಧನ!