ಹೊಸ ಚಿಹ್ನೆ ಪಡೆದು ಕೆಲಸ ಮಾಡಿ – ಉದ್ಧವ್‌ ಠಾಕ್ರೆಗೆ ಶರದ್ ಪವಾರ್ ಸಲಹೆ

Public TV
1 Min Read
Sharad Pawar Uddhav Thackeray

ಮುಂಬೈ: ಚುನಾವಣಾ ಆಯೋಗದ ಕ್ರಮವು ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ. ಜನರು ಹೊಸ ಚಿಹ್ನೆಯನ್ನು ಸ್ವೀಕರಿಸುತ್ತಾರೆ, ಹೊಸ ಚಿಹ್ನೆ ಪಡೆದು ಕಾರ್ಯ ಆರಂಭಿಸುವಂತೆ ಮಾಜಿ ಸಿಎಂ ಉದ್ಧವ್‌ ಠಾಕ್ರೆಗೆ (Uddhav Thackeray) ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ (Sharad Pawar) ಸಲಹೆ ನೀಡಿದರು.

ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಬಣಕ್ಕೆ ಶಿವಸೇನೆಯ (Shiv Sena) ಬಿಲ್ಲು ಬಾಣ ಚಿಹ್ನೆ ನೀಡಿದ ಚುನಾವಣೆ ಆಯೋಗ ನಿರ್ಧಾರದ ಬಳಿಕ ಶರದ್ ಪವಾರ್ ಭೇಟಿ ಮಾಡಿದ ಉದ್ಧವ್‌ ಠಾಕ್ರೆಗೆ ಧೃತಿಗೆಡದಂತೆ ಹೇಳಿದ್ದಾರೆ. ಚುನಾವಣಾ ಆಯೋಗದ ನಿರ್ಧಾರದ ಬಗ್ಗೆ ಮಾತನಾಡುವಂತಿಲ್ಲ. ಹೀಗಾಗಿ ಆದೇಶ ಒಪ್ಪಿಕೊಂಡು ಹೊಸ ಚಿಹ್ನೆ ಪಡೆಯುವಂತೆ ಸಲಹೆ ನೀಡಿದರು.

Eknath Shinde faction to get Shiv Sena name and bow arrow symbol orders election commission

ಇಂದಿರಾಗಾಂಧಿ ಕಾಲದಲ್ಲಿ ನಡೆದ ಕಾಂಗ್ರೆಸ್ (Congress) ಪರಿಸ್ಥಿತಿಯನ್ನು ಉದಾಹರಣೆಯಾಗಿ ಹೇಳಿದ ಅವರು, ಕಾಂಗ್ರೆಸ್‌ನಲ್ಲಿ ಮೊದಲು ನೊಗವಿರುವ ಎರಡು ಎತ್ತುಗಳು ಚಿಹ್ನೆ ಇತ್ತು. ನಂತರ ಅದನ್ನು ಕಳೆದುಕೊಂಡು ‘ಕೈ’ಯನ್ನು ಹೊಸ ಚಿಹ್ನೆಯಾಗಿ ಕಾಂಗ್ರೆಸ್ ಸ್ವೀಕರಿಸಿತು. ಬಳಿಕ ಜನರು ಹೊಸ ಚಿಹ್ನೆಯನ್ನು ದೊಡ್ಡ ಪ್ರಮಾಣದಲ್ಲಿ ಸ್ವೀಕರಿಸಿದರು. ಇದನ್ನೂ ಓದಿ: ಕಾಡಾನೆ ರಕ್ಷಿಸಿದ ಬಂಡೀಪುರದ ಅರಣ್ಯ ಸಿಬ್ಬಂದಿ, ವೈದ್ಯರ ಕಾರ್ಯಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ

congress flag

ಚುನಾವಣಾ ಆಯೋಗದ ಈ ನಿರ್ಧಾರವನ್ನು ಏಕನಾಥ್‌ ಶಿಂಧೆ ಬಣ ಸಂಭ್ರಮಿಸಿದರೆ, ಠಾಕ್ರೆ ಬಣ ವಿರೋಧ ವ್ಯಕ್ತಪಡಿಸಿದೆ. ಉದ್ಧವ್ ಠಾಕ್ರೆ ಬಣವು ಸುಪ್ರೀಂ ಕೋರ್ಟ್‌ಗೆ ಹೋಗುವುದಾಗಿ ಹೇಳಿದೆ ಮತ್ತು ಚುನಾವಣಾ ಆಯೋಗವು ಬಿಜೆಪಿ ಏಜೆಂಟ್‌ನಂತೆ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದೆ. ಇದನ್ನೂ ಓದಿ: `ಸಾಕಪ್ಪ ಸಾಕು, ಕಿವಿ ಮೇಲೆ ಹೂ’; ಬಜೆಟ್ ಬಗ್ಗೆ ಕಾಂಗ್ರೆಸ್ ವ್ಯಂಗ್ಯ – ಪೋಸ್ಟರ್ ಅಂಟಿಸಿ ಅಭಿಯಾನ

LIVE TV
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *