ಬೆಂಗಳೂರು: ಶಕ್ತಿ ಯೋಜನೆಯಿಂದ (Shakti Scheme) ಗಂಡಸರಿಗೆ ಸಮಸ್ಯೆ ಆಗುತ್ತಿದೆ ಎಂದು ವಿಧಾನಸೌಧದಲ್ಲಿ ಮಾಜಿ ಸಚಿವ ಆರ್.ವಿ. ದೇಶಪಾಂಡೆ (RV Deshpande) ಹೇಳಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಕ್ತಿ ಯೋಜನೆ ಚೆನ್ನಾಗಿದೆ. ಸಮಸ್ಯೆಯನ್ನು ಸ್ವಲ್ಪ ಸರಿ ಮಾಡಬೇಕು. ಶಕ್ತಿ ಯೋಜನೆಯಿಂದ ಬಸ್ನಲ್ಲಿ ಬರೀ ಹೆಂಗಸರೇ ತುಂಬಿರುತ್ತಾರೆ. ಗಂಡಸರ ಸಂಖ್ಯೆ ಕಡಿಮೆ ಆಗುತ್ತಿದೆ. ಇದರಿಂದ ಬಸ್ನಲ್ಲಿ ಗಂಡಸರಿಗೆ ಸಮಸ್ಯೆ ಆಗುತ್ತಿದೆ. ಅಪ್ಪಿತಪ್ಪಿ ಹೆಂಗಸರಿಗೆ ಕೈ ತಾಗಿದರೆ ಏನೆಲ್ಲಾ ಸಮಸ್ಯೆ ಆಗಬಹುದು. ಇದನ್ನು (ಯೋಜನೆ) ಸೀಮಿತಗೊಳಿಸಿದರೆ ಸಮಸ್ಯೆ ಸರಿ ಹೋಗಬಹುದು ಎಂದರು. ಇದನ್ನೂ ಓದಿ: ಕದನ ವಿರಾಮ ಉಲ್ಲಂಘನೆ; ‘ಫ..’ 4 ಪದದ ಆಕ್ಷೇಪಾರ್ಹ ಪದ ಬಳಸಿ ಇಸ್ರೇಲ್-ಇರಾನ್ಗೆ ಟ್ರಂಪ್ ತರಾಟೆ
ಶಾಸಕರು ಸಚಿವರನ್ನು ಭೇಟಿಯಾಗಬೇಕು. ಶಾಸಕರ ಸಮಸ್ಯೆ ಇದ್ದರೆ ಅದನ್ನ ಸರಿ ಮಾಡಬೇಕು. ಬಿಆರ್ ಪಾಟೀಲ್ (BR Patil) ಹಿರಿಯರು. ಅವರು ಅಭಿಪ್ರಾಯ ಪಡೆಯಲು ಮಾಧ್ಯಮಗಳಲ್ಲಿ ಹೇಳಬಾರದಿತ್ತು. ಸಿಎಂ ಗಮನಕ್ಕೆ ತಂದು ಈ ತರಹ ಆಗುತ್ತಿದೆ ಎಂದು ಹೇಳಬೇಕಿತ್ತು. ಸಿಎಂಗೆ ಈ ಬಗ್ಗೆ ಮಾಹಿತಿ ಕೊಡಬೇಕಿತ್ತು. ಆಗಲೂ ಸಿಎಂ, ಮಂತ್ರಿಗಳು ಸ್ಪಂದನೆ ಮಾಡದೇ ಹೋದರೆ ಹೀಗೆ ಮಾಡಬಹುದಿತ್ತು. ಸಿಎಂ ಮತ್ತು ಸಂಬಂಧಿಸಿದ ಸಚಿವರ ಜೊತೆ ಮಾತಾಡಬೇಕು. ಇದಕ್ಕೆ ಆಡಳಿತ ವ್ಯವಸ್ಥೆ ಕೆಟ್ಟಿದೆ ಎಂದು ಹೇಳೋದು ಸರಿಯಲ್ಲ ಎಂದು ಹೇಳಿದರು. ಇದನ್ನೂ ಓದಿ: ಬಾತ್ರೂಮಲ್ಲೇ ವ್ಯಕ್ತಿಯ ಬರ್ಬರ ಹತ್ಯೆ – ಕೊಲೆ ಫೋಟೋ ಇನ್ಸ್ಟಾದಲ್ಲಿ ಹಾಕಿ ‘ಜಾಲಿ ಜಾಲಿ’ ಎಂದು ಬರೆದ ಆರೋಪಿ
ಶಾಸಕ ಅಧಿಕಾರ ಚಲಾವಣೆ ಮಾಡೋಕೆ ಕ್ರಮಬದ್ಧ ಇದೆ. ಬಿಜೆಪಿಗೂ ನಮಗೂ ಬಹಳ ವ್ಯತ್ಯಾಸ ಇದೆ. ನಮ್ಮ ಶಾಸಕರು ಬಹಿರಂಗವಾಗಿ ಹೇಳಿರೋದು ಸರಿಯಲ್ಲ. ಮೊದಲು ಸಿಎಂ ಬಳಿ ಮಾತನಾಡಬೇಕು ಎಂದು ಸೂಚಿಸಿದರು. ಇದನ್ನೂ ಓದಿ: ವಿಜಯ್ ಜೊತೆ ಲವ್ ವದಂತಿಗೆ ತ್ರಿಷಾ ಕೆಂಡ – ಹೊಲಸು ಮನಸ್ಥಿತಿಯ ಜನ ಎಂದ ನಟಿ