ಕಾಳಿ ರಕ್ಷಿತಾರಣ್ಯದಲ್ಲಿ ಸರಣಿ ಕಾಡುಕೋಣಗಳ ಸಾವು – ಸಾಂಕ್ರಾಮಿಕ ರೋಗಕ್ಕೆ ಬಲಿ?

Public TV
1 Min Read
CKM KADUKONA copy

– ನಿಗೂಢವಾಗಿ ಉಳಿದ ಸಾವಿನ ಸರಣಿ
– ಮನುಷ್ಯರಿಗೂ ರೋಗ ಭಾದಿಸುವ ಭಯ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕಾಳಿ ಹುಲಿ ರಕ್ಷಿತ ಪ್ರದೇಶಗಳಲ್ಲಿ ಕಾಡುಕೋಣಗಳು ನಿರಂತರವಾಗಿ ಸಾವನ್ನಪ್ಪುತ್ತಿದ್ದು, ಕಾಡುಕೋಣಗಳಲ್ಲಿ ಸಾಂಕ್ರಾಮಿಕ ರೋಗದ ವಾಸನೆ ಹೊಡೆಯಲು ಆರಂಭವಾಗಿದೆ.

ಕಳೆದ ಒಂದು ತಿಂಗಳಿಂದ 15 ಕಾಡುಕೋಣಗಳು ಸಾವನ್ನಪ್ಪಿವೆ. ಇದರಲ್ಲಿ ಈಗಾಗಲೇ ನಾಲ್ಕು ಕಾಡುಕೋಣಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ ಅರಣ್ಯ ಇಲಾಖೆ ಮಾತ್ರ ದಾಖಲೆಯಲ್ಲಿ ಕೇವಲ ನಾಲ್ಕು ಕಾಡುಕೋಣಗಳು ಸಾವನ್ನಪ್ಪಿರುವ ಕುರಿತು ಉಲ್ಲೇಖಿಸಿದೆ.

DVG KADUKONA 2

ಕಾಡುಕೋಣಗಳ ಕಳೆ ಬರಹಗಳು ಜೋಯಿಡಾ ಅರಣ್ಯ ಭಾಗವಾದಕಟ್ಟೆ, ಕೋಡುಗಾಳಿ, ಕಡಗರ್ಣಿ, ದಿಗಾಳಿ ಕಾಡಿನಲ್ಲಿ ಸಿಕ್ಕಿವೆ. ಇನ್ನು ಕುಂಬಾರವಾಡ, ಕ್ಯಾಸಲ್ ರಾಕ್ ಭಾಗದಲ್ಲಿಯೂ ಕಾಡುಕೋಣಗಳು ಅಸುನೀಗಿರುವ ಕುರಿತು ಸಂದೇಹಗಳು ವ್ಯಕ್ತವಾಗಿದೆ.

ದಿಗಾಳಿ ಕಾಡಿನಲ್ಲಿ ಮೃತಪಟ್ಟ ಕಾಡುಕೋಣದ ಮರಣೋತ್ತರ ಪರೀಕ್ಷೆಯನ್ನು ಶಿವಮೊಗ್ಗ ವನ್ಯಜೀವಿ ವಲಯದ ಪಶುವೈದ್ಯಾಧಿಕಾರಿ ಡಾ.ವಿನಯ್ ನೇತ್ರತ್ವದಲ್ಲಿ ನಡೆಸಲಾಗಿದ್ದು, ಅಂಗಾಂಗ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ.

ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಕಾಡುಗಳಲ್ಲಿ ಮಂಗಗಳು ಕ್ಯಾಸನೂರು ಕಾಯಿಲೆಗೆ ತುತ್ತಾಗಿ ಹಲವು ಮಂಗಗಳು ಸಾವನ್ನಪ್ಪಿದ್ದವು. ಇದರಿಂದಾಗಿ ಮನುಷ್ಯನಿಗೂ ರೋಗಾಣುಗಳು ಪಸರಿಸಿ ಅನೇಕರು ಮಂಗನಕಾಯಿಲೆಗೆ ತುತ್ತಾಗಿದ್ದರು.

DVG KADUKONA 3

ಈಗ ಕಾಡುಕೋಣಗಳು ಸರಣಿ ಸಾವನ್ನಪ್ಪುತಿದ್ದು, ಮೊದಲು ನೀರಿನ ಕೊರತೆ ಎನ್ನಲಾಗಿತ್ತು. ಆದರೆ ಕಾಡುಕೋಣಗಳ ಕಳೇಬರಹ ಸಿಕ್ಕ ಸುತ್ತಮುತ್ತ ಅರಣ್ಯ ಇಲಾಖೆ ಪ್ರಾಣಿಗಳಿಗಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿತ್ತು ಹಾಗೂ ಹೇಳುವಂತಹ ಸಮಸ್ಯೆ ಕೂಡ ಇರಲಿಲ್ಲ. ಆದರೂ ಕಾಡುಕೋಣಗಳು ಸಾಯುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಯಾವುದೋ ಸಾಂಕ್ರಾಮಿಕ ರೋಗದಿಂದ ಸತ್ತಿರಬಹುದೇ ಎಂಬ ಅನುಮಾನ ಮೂಡತೊಡಗಿದೆ.

ಸಾವುಕಂಡ ಕಾಡುಕೋಣದ ಗಂಟಲು ಹಾಗೂ ದೇಹದ ಒಳಭಾಗದಲ್ಲಿ ಹುಣ್ಣುಗಳು ಕಾಣಿಸಿಕೊಂಡಿದ್ದು, ಸಾಂಕ್ರಾಮಿಕ ರೋಗ ಭಾದಿಸಿರಬಹುದು ಎಂದು ಸಂಶಯ ವ್ಯಕ್ತಪಡಿಸಲಾಗಿದೆ. ಕಾಡುಕೋಣದ ಮರಣೋತ್ತರ ಪರೀಕ್ಷೆಯಿಂದ ವಿಷಯ ಬಹಿರಂಗಗೊಳ್ಳಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *