ಚಾಮರಾಜನಗರ: ಹೆಚ್.ಡಿ ಕುಮಾರಸ್ವಾಮಿ (HD Kumaraswamy) ರಾಜ್ಯದ ಸಿಎಂ ಆಗಲಿ ಎಂದು ಅಭಿಮಾನಿ ಹರಕೆ ಹೊತ್ತು ಶಬರಿಮಲೆ (Sabarimala) ಯಾತ್ರೆ ಕೈಗೊಂಡಿದ್ದಾರೆ.
ಬಾಗಳಿ ರೇವಣ್ಣ ಎಂಬ ಅಭಿಮಾನಿ ಹೆಚ್ಡಿಕೆ ಫೋಟೋ ಹೊತ್ತು ಶಬರಿಮಲೆ ಯಾತ್ರೆ ಮಾಡಿದ್ದಾರೆ. ಜೆಡಿಎಸ್ ರಾಜ್ಯ ಕಾರ್ಯದರ್ಶಿಯು ಆಗಿರುವ ಚಾಮರಾಜನಗರ ಜಿಲ್ಲೆಯ ಬಾಗಳಿ ರೇವಣ್ಣ, ಅಯ್ಯಪ್ಪಸ್ವಾಮಿ ಮಾಲೆ ಧರಿಸಿ ತಲೆ ಮೇಲೆ ಹೆಚ್ಡಿಕೆ ಫೋಟೋ ಹೊತ್ತು ಶಬರಿಮಲೆ ಯಾತ್ರೆ ಹೊರಟಿದ್ದಾರೆ.
ಜೆಡಿಎಸ್ (JDS) ನ ವಿಷನ್ 123 ಯಶಸ್ವಿಯಾಗಬೇಕು ಕುಮಾರಸ್ವಾಮಿ ಸಿಎಂ ಆಗಬೇಕು ಎಂದು ಅಭಿಮಾನಿ ಹರಕೆ ಹೊತ್ತಿದ್ದಾರೆ. ಹೆಚ್ಡಿಕೆ ಭಾವಚಿತ್ರ ಹೊತ್ತು ಶಬರಿಮಲೆ ಏರಿರುವ ಅಭಿಮಾನಿ ಸದ್ಯ ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ: ಲಿಫ್ಟ್ ಗುಂಡಿಗೆ ಬಿದ್ದು ಮಗು ಸಾವು- ಕಟ್ಟಡದ ಮಾಲೀಕನ ವಿರುದ್ಧ ಪ್ರಕರಣ ದಾಖಲು