ರಾಯಚೂರಿನಲ್ಲಿ ಅದ್ಧೂರಿ ಮುಂಗಾರು ಹಬ್ಬ – ಆನೆ ಭಾರದ ಕಲ್ಲು ಎಳೆದು ಎತ್ತುಗಳ ಓಟ

Public TV
1 Min Read
rcr habba 2

ರಾಯಚೂರು: ರಾಜ್ಯಕ್ಕೆ ಮುಂಗಾರು ಮಳೆ ಕಾಲಿಡುತ್ತಿದ್ದಂತೆ ರಾಯಚೂರು ರೈತರು ಹಬ್ಬದ ಸಂಭ್ರಮದಲ್ಲಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಕಾರಹುಣ್ಣಿಮೆಯನ್ನ ಮುಂಗಾರು ಸಾಂಸ್ಕೃತಿಕ ಹಬ್ಬವಾಗಿ ರೈತರು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ.

rcr habba 3

ವರುಣದೇವ ರೈತರ ಮೇಲೆ ಕರುಣೆ ತೋರಲಿ ಅನ್ನೋದು ಈ ಹಬ್ಬದ ಉದ್ದೇಶ. ಮೂರು ದಿನಗಳ ಕಾಲ ನಡೆಯಲಿರುವ ಈ ಸಂಭ್ರಮದಲ್ಲಿ ಮೊದಲ ದಿನವಾದ ಗುರುವಾರ ಎತ್ತುಗಳು ಭಾರದ ಕಲ್ಲನ್ನ ಎಳೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಈ ಬಾರಿ ಒಟ್ಟು 67 ಜೋಡಿ ಎತ್ತುಗಳು ಭಾಗವಹಿಸಿದ್ವು. ವಿಜೇತ ಎತ್ತುಗಳ ಜೋಡಿಗೆ 7.5 ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತೆ.

ಕಳೆದ 17 ವರ್ಷಗಳಿಂದ ನಡೆಯುತ್ತಿರುವ ಸ್ಪರ್ಧೆಯಲ್ಲಿ ರಾಜ್ಯ ಮಾತ್ರವಲ್ಲದೆ ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಜೋಡಿ ಎತ್ತುಗಳು ಭಾಗಿಯಾಗುತ್ತವೆ.

rcr habba 1

RCR HABBA

vlcsnap 2017 06 09 10h20m46s102

vlcsnap 2017 06 09 10h21m13s139

Share This Article
Leave a Comment

Leave a Reply

Your email address will not be published. Required fields are marked *