ನವದೆಹಲಿ: ಚಪಾತಿ ನೀಡಲು ನಿರಾಕರಿಸಿದಕ್ಕೆ ರಿಕ್ಷಾ ಚಾಲಕನನ್ನು ವ್ಯಕ್ತಿಯೋರ್ವ ಬರ್ಬರವಾಗಿ ಹತ್ಯೆಗೈದಿರುವ ಘಟನೆ ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ನಡೆದಿದೆ.
ಮುನ್ನಾ(40) ಮೃತವ್ಯಕ್ತಿಯಾಗಿದ್ದು, ಆರೋಪಿಯನ್ನು ಚಿಂದಿ ಆಯುವ ಫಿರೋಜ್ ಖಾನ್ ಎಂದು ಗುರುತಿಸಲಾಗಿದೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ 26ರ ಮಂಗಳವಾರ, ವ್ಯಕ್ತಿಯೋರ್ವ ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆಯಲ್ಲಿ ಬಿದ್ದಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿ ನಂತರ ಸ್ಥಳೀಯರು ವ್ಯಕ್ತಿಯನ್ನು ಆಟೋದಲ್ಲಿ ಆರ್ಎಂಎಲ್ ಆಸ್ಪತ್ರೆಗೆ ಕರೆದೊಯ್ದರು. ಆದರೆ ಮಾರ್ಗ ಮಧ್ಯದಲ್ಲಿಯೇ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ನೀವು ಊರಿಗೆ ಹಿರಿಯರು, ಕೋಳಿ ಅಂಗಡಿ ಉದ್ಘಾಟನೆಗೆ ತಂದೆಯನ್ನು ಆಹ್ವಾನಿಸಿದ್ದರು: ಪ್ರವೀಣ್ ಬಗ್ಗೆ ಆರೀಫ್ ಮಾತು
ರಾತ್ರಿ 10 ಗಂಟೆ ಸುಮಾರಿಗೆ ವಿಷ್ಣು ಮಂದಿರ ಮಾರ್ಗದಲ್ಲಿ ಮುನ್ನಾ ಕುಳಿತಿದ್ದ. ಈ ವೇಳೆ ಹೋಟೆಲ್ನಿಂದ ತಂದಿದ್ದ ಚಪಾತಿಯನ್ನು ಮುನ್ನ ತಿನ್ನತೊಡಗಿದ. ನಂತರ ಅಲ್ಲಿಗೆ ಬಂದ ಕುಡುಕನೋರ್ವ ಚಪಾತಿ ತನಗೂ ನೀಡುವಂತೆ ಕೇಳಿದಾಗ ಮುನ್ನಾ ಚಪಾತಿ ಕೊಟ್ಟಿದ್ದಾನೆ. ನಂತರ ಆರೋಪಿ ಮತ್ತೊಂದು ಚಪಾತಿ ನೀಡುವಂತೆ ಕೇಳಿದ್ದಾನೆ. ಆಗ ಚಪಾತಿ ನೀಡಲು ನಿರಾಕರಿಸಿದ್ದಕ್ಕೆ ಹರಿತವಾದ ಚಾಕುವನ್ನು ಹೊರತಂದು ಮುನ್ನಾನನ್ನು ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರಿಗೆ ತಿಳಿಸಿದ್ದರು.
ಬಳಿಕ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ಆರಂಭಿಸಿದ ಪೊಲೀಸರು, ಕೊನೆಗೆ ರಸ್ತೆ ಬದಿಯ ಪಾರ್ಕ್ ಒಂದರಲ್ಲಿ ತಂಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಜನರ ಕಣ್ಣೀರು ಒರೆಸುವುದು ಬಿಟ್ಟು ಗೃಹ ಸಚಿವರೇ ಕಣ್ಣೀರು ಹಾಕ್ತಿದ್ದಾರೆ – ರಾಜೀನಾಮೆ ಕೊಟ್ಟು ಹೊರಡಲಿ: ಶ್ರೀನಿವಾಸ್ ಬಿ.ವಿ