ಶಿವಮೊಗ್ಗ: ಕಾರು (Car) ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಿವೃತ್ತ ಸೈನಿಕರೊಬ್ಬರು (Retired Soldier) ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ಪತ್ನಿ ಹಾಗೂ ಮಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗದ (Shivamogga) ತುಪ್ಪೂರು ಬಳಿ ನಡೆದಿದೆ.
ಘಟನೆಯಲ್ಲಿ ಮೃತಪಟ್ಟ ನಿವೃತ್ತ ಸೈನಿಕನನ್ನು ಜಿಲ್ಲೆಯ ಹೊಸನಗರ ತಾಲೂಕಿನ ಮಾವಿನಹೊಳೆ ನಿವಾಸಿ ಚಿನ್ನಪ್ಪ(50) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡ ಅವರ ಪತ್ನಿ (Wife) ಹಾಗೂ ಮಗಳನ್ನು (Daughter) ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಉದ್ಘಾಟನೆಗೊಂಡ ನಾಲ್ಕೇ ದಿನಕ್ಕೆ ಗುಂಡಿ ಬಿದ್ದ 18 ಕೋಟಿಯ ಮೇಲ್ಸೇತುವೆ
ಹೊಸನಗರದ ಶಾಸಕರ ಮಾದರಿ ಶಾಲೆಯ ಸರ್ಕಾರಿ ಹಿರಿಯ ಬಾಲಕಿಯರ ಪಾಠ ಶಾಲೆಯಲ್ಲಿ ಓದುತ್ತಿದ್ದ ಚಿನ್ನಪ್ಪ ಅವರ ಪುತ್ರಿ ದಿಶಾರಾಣಿ ಈ ವರ್ಷ ವಾಲಿಬಾಲ್ ಪಂದ್ಯಾವಳಿಯಲ್ಲಿ (Volleyball)ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಳು. ಶಾಲೆಯಿಂದ ವಿಭಾಗ ಮಟ್ಟದಲ್ಲಿ ವಾಲಿಬಾಲ್ ಆಟವಾಡಲು ವಿದ್ಯಾರ್ಥಿನಿಯರನ್ನು ವಾಹನದ ಮೂಲಕ ಗೌರಿಬಿದನೂರಿಗೆ ಕಳುಹಿಸಿಕೊಡಲಾಗಿತ್ತು. ಚಿನ್ನಪ್ಪ ಅವರ ಮಗಳು ವಾಲಿಬಾಲ್ ಪಂದ್ಯದಲ್ಲಿ ಆಟವಾಡುತ್ತಿದ್ದು, ಮಗಳ ಆಟ ನೋಡಲು ಗೌರಿಬಿದನೂರಿಗೆ ತಮ್ಮ ಸ್ವಂತ ಮಾರುತಿ ಆಲ್ಟೊ 800 ಕಾರಿನಲ್ಲಿ ಕುಟುಂಬ ಸಮೇತರಾಗಿ ತೆರಳಿದ್ದರು. ಇದನ್ನೂ ಓದಿ: ಮೀನು ಹಿಡಿದು, ಬಟ್ಟೆ ಒಗೆಯುವ ಸ್ಥಳವಾದ ರಾಷ್ಟ್ರೀಯ ಹೆದ್ದಾರಿ – ಇದು ನಮ್ಮ ದುಸ್ಥಿತಿ
ಆಟ ಮುಗಿಸಿಕೊಂಡು ತಮ್ಮ ಮಗಳನ್ನು ಕಾರಿನಲ್ಲಿ ವಾಪಸ್ ಕರೆದುಕೊಂಡು ಬರುತ್ತಿದ್ದಾಗ ಮಧ್ಯರಾತ್ರಿ 2 ಗಂಟೆ ಸಮಯದಲ್ಲಿ ತುಪ್ಪೂರು ಬಳಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಕುರಿತು ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.