ರವಿಚಂದ್ರನ್ ಮಗಳ ಆರತಕ್ಷತೆಯಲ್ಲಿ ಗಣ್ಯರ ದಂಡು

Public TV
1 Min Read
ravi

ಬೆಂಗಳೂರು: ನಟ ರವಿಚಂದ್ರನ್ ಮಗಳು ಗೀತಾಂಜಲಿ ಮದುವೆಯ ಆರತಕ್ಷತೆ ಕಾರ್ಯಕ್ರಮ ಮಂಗಳವಾರ ರಾತ್ರಿ ಅದ್ಧೂರಿಯಾಗಿ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರು ಬಂದು ನವಜೋಡಿಗೆ ಶುಭಾ ಹಾರೈಸಿದ್ದಾರೆ.

ಅರಮನೆ ಮೈದಾನದಲ್ಲಿ ವೈಟ್ ಪೆಟಲ್ಸ್ ಆವರಣದಲ್ಲಿ ನಿರ್ಮಿಸಲಾಗಿದ್ದ ಗಾಜಿನ `ರಾಜಹಂಸದ ವೇದಿಕೆ’ಯಲ್ಲಿ ಗೀತಾಂಜಲಿ ಮತ್ತು ಅಜಯ್ ಸಖತ್ ಮಿಂಚುತ್ತಿದ್ದರು. ಆರತಕ್ಷತೆಯಲ್ಲಿ ಗೀತಾಂಜಲಿ ಕಡು ಹಸಿರು ಬಣ್ಣದ ಗೌನ್‍ನಲ್ಲಿ ಧರಿಸಿ ಮಿಂಚುತ್ತಿದ್ದರೆ, ಇತ್ತ ವರ ಅಜಯ್ ಕೂಡ ಕಪ್ಪು ಬಣ್ಣದ ಶೂಟ್ ತೊಟ್ಟು ಮಿಂಚಿದ್ದಾರೆ. ಈ ಆರತಕ್ಷತೆ ಕಾರ್ಯಕ್ರಮಕ್ಕೆ ಸೂಪರ್ ಸ್ಟಾರ್ ರಜಿನಿಕಾಂತ್ ಆಗಮಿಸಿ ನವಜೋಡಿಗೆ ಹಾರೈಸಿದ್ದಾರೆ.

WhatsApp Image 2019 05 28 at 8.09.32 PM

ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ, ನಟ ಸುದೀಪ್ ದಂಪತಿ, ನಿರ್ದೇಶಕ ಪ್ರೇಮ್, ರಕ್ಷಿತಾ, ರಾಕ್‍ಲೈನ್ ವೆಂಕಟೇಶ್, ಸುಮಲತಾ ಇನ್ನೂ ಮುಂತಾದ ನಟಿ-ನಟಿರು, ನಿರ್ದೇಶಕರು ಮತ್ತು ಗಣ್ಯರು ಆಗಮಿಸಿದ್ದರು. ರವಿಚಂದ್ರನ ಮಗಳ ಆರತಕ್ಷತೆಯಲ್ಲಿ ಮಿಂಚಿದ್ದು, ಸಖತ್ ಖುಷಿ ಪಟ್ಟಿದ್ದಾರೆ.

r

ವಿಶೇಷ ವೈಟ್ ಪೆಟಲ್ಸ್ ಆವರಣದಲ್ಲಿ ನಿರ್ಮಿಸಲಾಗಿದ್ದ ಗಾಜಿನ ‘ರಾಜಹಂಸದ ವೇದಿಕೆ’ ಯನ್ನ ರವಿಚಂದ್ರನ್ ಅವರೇ ಡಿಸೈನ್ ಮಾಡಿದ್ದಾರೆ. ಜೊತೆಗೆ ಗಣ್ಯರನ್ನ ರಂಜಿಸಲು ನಾದಬ್ರಹ್ಮ ಹಂಸಲೇಖ ಅವರ ತಂಡ ಸಂಗೀತಗೋಷ್ಠಿ ನಡೆಸಿದೆ. ಇಂದು ಬೆಳಗ್ಗೆ ಗೀತಾಂಜಲಿ ಮತು ಅಜಯ್ ಅವರು ಮದುವೆ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *