ತುಮಕೂರು: ಕೈ ಪಕ್ಷದ ಬಂಡಾಯ ಶಾಸಕರ ಪೈಕಿ ಮುಂಚೂಣಿಯಲ್ಲಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪಕ್ಷ ಬಿಡೋದು ಖಚಿತ ಎಂದು ತುಮಕೂರಿನಲ್ಲಿ ಬಿಜೆಪಿ ಮಾಜಿ ಶಾಸಕ ಕೆ.ಎನ್ ರಾಜಣ್ಣ ಸುಳಿವು ನೀಡಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸೂಲಗಿತ್ತಿ ನರಸಮ್ಮ ಅಂತಿಮ ದರ್ಶನದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೆ.ಎನ್.ಆರ್, “ನನ್ನ ಪ್ರಕಾರ ಕಾಂಗ್ರೆಸ್ ನಲ್ಲಿ ಅವರು ಇರೋದಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ.
ರಮೇಶ್ ರಾಜೀನಾಮೆ ಕೊಡ್ತಾರಾ. ಸರ್ಕಾರ ಉರುಳಿಸ್ತಾರಾ. ಶಾಸಕರನ್ನು ಕರೆದುಕೊಂಡು ಹೋಗ್ತಾರಾ ಈ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಪಕ್ಷ ತೊರೆಯೋದು ಖಚಿತ ಎಂದು ರಾಜಣ್ಣ ಭವಿಷ್ಯ ನುಡಿದಿದ್ದಾರೆ. ಆದರೆ ಕೆಲ ಕಾಂಗ್ರೆಸ್ ಶಾಸಕರು ಅವರ ಜೊತೆ ಸಂಪರ್ಕದಲ್ಲಿ ಇದ್ದಾರೆ. ಆ ಶಾಸಕರನ್ನೂ ಕರೆದುಕೊಂಡು ಹೋಗ್ತಾರಾ ಎನ್ನುವ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ.
ನನಗೆ ಸತೀಶ್ ಜಾರಕಿಹೊಳಿ, ಬಿಜೆಪಿ ಬಾಲಚಂದ್ರ, ಲಖನ್ ಜಾರಕೀಹೊಳಿ ಎಲ್ಲರೂ ಆತ್ಮಿಯರೇ. ರಾಜಕೀಯ ದೃಷ್ಟಿಯಲ್ಲಿ ಅವರ ತೀರ್ಮಾನಕ್ಕೆ ಅವರೇ ಸ್ವತಂತ್ರರು. ಸರ್ಕಾರದ ಬಗ್ಗೆ ಸಿಎಂ ಕುಮಾರಸ್ವಾಮಿಯೇ ಇದು ಪರಿಸ್ಥಿತಿಯ ಪ್ರನಾಳ ಶಿಶು ಎಂದು ಹೇಳಿದ್ದಾರೆ. ಏಳೂವರೆ, ಎಂಟು ತಿಂಗಳಿಗೆ ಹುಟ್ಟಿದ್ದು ಎಷ್ಟು ವರ್ಷ ಬದುಕುತ್ತೆ ಅಂತಾ ಗೊತ್ತಿಲ್ಲ ಎಂದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv