ರಾಮನಗರ: ಬಿಡದಿ ಧ್ಯಾನಪೀಠದ ವಿವಾದಿತ ನಿತ್ಯಾನಂದ ಈಗಾಗಲೇ ದೇಶ ಬಿಟ್ಟು ಪರಾರಿಯಾಗಿದ್ರೆ, ಇತ್ತ ಬಿಡದಿ ಆಶ್ರಮದಲ್ಲಿ ಎಲ್ಲವೂ ಖಾಲಿ ಖಾಲಿಯಾಗಿದೆ. ಕೆಲವೇ ಕೆಲವು ಮಂದಿ ಶಿಷ್ಯರು ಮಾತ್ರ ಆಶ್ರಮದಲ್ಲಿದ್ದಾರೆ. ಆದರೆ ಬಿಡದಿಯ ಆಶ್ರಮಕ್ಕೆ ಇದೀಗ ತನ್ನ ಶಿಷ್ಯರಿಂದಲೇ ಫುಲ್ ಟೈಟ್ ಸೆಕ್ಯೂರಿಟಿಯನ್ನ ನಿತ್ಯಾನಂದ ಮಾಡಿಕೊಂಡಿದ್ದಾನೆ.
ಆಶ್ರಮದ ಸುತ್ತಲೂ ಇದ್ದ 5 ಅಡಿಯ ಕಾಂಪೌಂಡ್ ಗೋಡೆಯನ್ನ ಇದೀಗ 12 ಅಡಿ ಎತ್ತರಕ್ಕೆ ಏರಿಸಿದ್ದಾನೆ. ನಿತ್ಯಾನಂದನ ಅಶ್ರಮದ ಒಳಭಾಗದಲ್ಲಿ ನಡೆಯುವ ಯಾವುದೇ ಚಟುವಟಿಕೆಗಳೂ ಹೊರ ಜಗತ್ತಿಗೆ ಕಾಣದಂತೆ ಮಾಡಲು ಇದೀಗ ಕಾಂಪೌಂಡ್ ಎತ್ತರಿಸಲಾಗಿದೆ. ಇದನ್ನೂ ಓದಿ: ಹೊಸ ದೇಶವನ್ನೇ ಕಟ್ಟಿದ ನಿತ್ಯಾನಂದ – ಕ್ಯಾಬಿನೆಟ್ ರಚನೆ, ಪ್ರಧಾನಿ ಆಯ್ಕೆ
ಆಶ್ರಮದ ಒಳಗೆ ಹೊಸ ಹೊಸ ಕಟ್ಟಡಗಳ ಕಾಮಗಾರಿ ನಡೆಯುವುದರ ಜೊತೆಗೆ ನಿತ್ಯಾನಂದನ ಪ್ರತಿಮೆಗಳನ್ನು ಸಹ ಮಾಡಲಾಗುತ್ತಿದೆ. ಅಲ್ಲದೆ ಆಶ್ರಮದ ಸುತ್ತಲೂ ಇರುವ ನಾಲ್ಕು ಗೇಟ್ಗಳಿಗೂ ಸಹ ತನ್ನ ಶಿಷ್ಯರನ್ನೇ ಸೆಕ್ಯೂರಿಟಿಗಳಾಗಿ ಮಾಡಿಕೊಳ್ಳಲಾಗಿದೆ. ಹೀಗಾಗಿ ಯಾರೇ ಬಂದರೂ ಸಹ ಆಶ್ರಮದ ಒಳಗೆ ಪ್ರವೇಶಿಸದಂತೆ ಈ ರೀತಿ ಮಾಡಿದ್ದಾನೆ.
ಈಗಾಗಲೇ ಗುಜರಾತ್ ಆಶ್ರಮದಿಂದ ಹೊರಬಿದ್ದಿರುವ ನಿತ್ಯಾನಂದನ ಶಿಷ್ಯರು ಹಾಗೂ ಗುರುಕುಲದಲ್ಲಿದ್ದ ಮಕ್ಕಳು ಗುರುವಾರ ಬೆಳಗ್ಗೆ ಇಲ್ಲವೇ ಸಂಜೆಯ ವೇಳೆಗೆ ಬಿಡದಿ ಆಶ್ರಮಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪಾಸ್ಪೋರ್ಟ್ ನವೀಕರಿಸದಿದ್ದರೂ ನಿತ್ಯಾನಂದ ಈಕ್ವೇಡಾರ್ಗೆ ಪರಾರಿ?