Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಾಮನಗರದ ದುರ್ದೈವ ರಾಮನ ಪರಂಪರೆ ಇಲ್ಲಿ ಬೆಳೆದಿಲ್ಲ- ಕಲ್ಲಡ್ಕ ಪ್ರಭಾಕರ್ ಭಟ್
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ರಾಮನಗರದ ದುರ್ದೈವ ರಾಮನ ಪರಂಪರೆ ಇಲ್ಲಿ ಬೆಳೆದಿಲ್ಲ- ಕಲ್ಲಡ್ಕ ಪ್ರಭಾಕರ್ ಭಟ್

Public TV
Last updated: February 10, 2020 12:14 am
Public TV
Share
2 Min Read
RMG RSS 1
SHARE

– ರಾವಣನ ಪರಂಪರೆ ಬೆಳೆದಿದೆ

ರಾಮನಗರ: ಕಾಶ್ಮೀರ ನಮ್ಮ ಜೊತೆಯಲ್ಲಿ ಸೇರಿಕೊಂಡಿದ್ದು ಅಲ್ಲಿಗೆ ನಾವು ಹೋಗಬಹುದು ಬರಬಹುದು. ಹಾಗೇಯೇ ರಾಮನಗರದ ಬಾಲಗೇರಿಗೆ ಹೋಗಬಹುದು, ಅಲ್ಲಿಂದ ಬರಬಹುದು. ಇನ್ನೊಂದು ಸ್ವಲ್ಪ ಪಿಓಕೆ ಬಾಕಿಯಿದೆ ನಾಲಬಂದವಾಡಿ (ಮುಸ್ಲಿಂರೇ ಹೆಚ್ಚಿನದಾಗಿ ಅಲ್ಪ ಹಿಂದುಗಳು ವಾಸಿಸುವ ಬಡಾವಣೆ) ಅದು ಸ್ವಲ್ಪ ದಿನದ ಬಳಿಕ ನಮಗೆ ಸಿಗುತ್ತೆ ಎಂದು ಹಿರಿಯರು ಹೇಳಿರುವುದಾಗಿ ಆರ್‍ಎಸ್‍ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಪಥಸಂಚಲನದಲ್ಲಿ ಹೇಳಿದ್ದಾರೆ.

ರಾಮನಗರದಲ್ಲಿ ನಡೆದ ಆರ್‍ಎಸ್‍ಎಸ್ ಪಥಸಂಚಲನದಲ್ಲಿ ಭಾಗವಹಿಸಿ ಗಣವೇಷಧಾರಿಗಳನ್ನುದ್ದೇಶಿ ಮಾತನಾಡಿದ ಅವರು, ರಾಮನಗರದ ದುರ್ದೈವ ರಾಮನಗರ ಪರಂಪರೆ ಇಲ್ಲಿ ಬೆಳೆದಿಲ್ಲ. ಬದಲಿಗೆ ರಾವಣನ ಪರಂಪರೆ ಬೆಳೆಯುವಂತಾಯ್ತು. ಅಧಿಕಾರದ ದರ್ಪ, ದೌರ್ಜನ್ಯದಿಂದ ಅಧಿಕಾರ ನಡೆಸಲು ಸಾಧ್ಯವಿಲ್ಲ. ಅಧಿಕಾರ ಸಾಕಷ್ಟು ದಿನವೂ ಉಳಿಯುವುದಿಲ್ಲ ಎಂದು ಪರೋಕ್ಷವಾಗಿ ಮಾಜಿ ಎಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಿದರು.

RMG RSS

ಮಂಗಳೂರು ಗಲಭೆ ವಿಚಾರವಾಗಿ ಮಂಗಳೂರನ್ನು ಪಾಕಿಸ್ತಾನದ ರೀತಿ ಮಾಡಬೇಕು ಎಂದು ಮುಂದಾಗಿದ್ದರು. ಅಲ್ಲದೇ ಅಂದು ನಡೆದ ಗಲಭೆ ಎಲ್ಲೋ ಕಾಶ್ಮೀರದಲ್ಲಿ ನಡೆಯುತ್ತಿದ್ಯಾ ಎನ್ನುವಂತಿತ್ತು ಎಂದು ತಿಳಿಸಿದರು. ಅಂಬೇಡ್ಕರ್ ಅವರನ್ನು ಬರೀ ದಲಿತರ ಬಂಧು ಅಂತಾರೆ. ಆದರೆ ಅವರ ದಲಿತರ ಬಂಧುವಲ್ಲ ರಾಷ್ಟ್ರೀಯ ಬಂಧು ಎಂದರು.

ಕನಕಪುರಕ್ಕೆ ಭೇಟಿ ನೀಡಿದ್ದ ವಿಚಾರವನ್ನು ಪ್ರಸ್ತಾಪಿಸಿದ ಅವರು ಕಪಾಲ ಬೆಟ್ಟದಲ್ಲಿ ಈಗಾಗಲೇ 11 ಅಡಿ ಎತ್ತರದ ಯೇಸು ಪ್ರತಿಮೆ ನಿಲ್ಲಿಸಿದ್ದು, 113 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆದರೆ ಅಲ್ಲಿನ ಮುನೇಶ್ವರ ಕಲ್ಲಿನ ಮೇಲೆ ಶಿಲುಬೆ ನಿಲ್ಲಿಸಿದ್ದಾರೆ. ಪಕ್ಕದಲ್ಲಿನ ಕೆರೆಗೆ ಪಾದ್ರಿ ಕೆರೆ ಎನ್ನುತ್ತಾರೆ, ಅದು ಯಾವಾಗ ಪಾದ್ರಿ ಕೆರೆಯಾಯ್ತು ಎಂದು ಪ್ರಶ್ನಿಸಿದರು. ಅಲ್ಲಿನ ಜನರಿಗೆ ಮತಾಂತರಗೊಂಡರೆ ಎರಡ್ಮೂರು ಎಕರೆ ಜಮೀನು ನೀಡುವ ಷರತ್ತಿನ ಮೇಲೆ ಮತಾಂತರ ಮಾಡಿದ್ದಾರೆ. ಕ್ರಿಶ್ಚಿಯನ್ ಸಮಾಜ ನಿರ್ಮಿಸಲು ಹೊರಟಿದ್ದಾರೆ. ಆದರೆ ಇದು ಕ್ರಿಸ್ತನ ನಾಡಲ್ಲ, ಕೃಷ್ಣನ ನಾಡು ಎಂದು ಕಿಡಿಕಾರಿದರು.

RMG RSS2

ಸ್ವತಂತ್ರ ಭಾರತದ ವೇಳೆ ದುರ್ಬಲ ಹಾಗೂ ಹೇಡಿ ನಾಯಕತ್ವವಿತ್ತು. ಆದರೆ ಇದೀಗ ದೇಶದಲ್ಲಿ ಅತ್ಯಂತ ಪ್ರಬಲವಾದ ನಾಯಕತ್ವ ಅಧಿಕಾರ ನಡೆಸುತ್ತಿದ್ದು, ಪಾಕಿಸ್ತಾನಕ್ಕೆ ನಮ್ಮನ್ನ ಕೆಣಕುವುದು ಕಷ್ಟದ ಕೆಲಸವಾಗಿದೆ. ಭಯೋತ್ಪಾದಕರನ್ನು ನಿರ್ಮಾಣ ಮಾಡುವಂತಹ ಕಾರ್ಖಾನೆ ಪಾಕಿಸ್ತಾನವಾಗಿದ್ದು, ಅದು ಪಾಪಿಗಳ ರಾಜ್ಯ ಪಾಕಿಸ್ತಾನವಾಗಿದೆ ಎಂದು ವಾಗ್ದಾಳಿ ಮಾಡಿದರು.

ಇದೇ ವೇಳೆ ಹೊರದೇಶದಿಂದ ಬಂದು ದೇಶದಲ್ಲಿರುವ ಎರಡ್ಮೂರು ಕೋಟಿ ಜನರಿಗೆ ರೇಷನ್ ಕಾರ್ಡ್ ಕೊಟ್ಟಿಲ್ಲ. ಭೂಮಿ ಕೊಟ್ಟಿಲ್ಲ, ಏನೇನೂ ಕೊಟ್ಟಿಲ್ಲ. ಆ ಹಿಂದೂ ಸಮಾಜಕ್ಕೆ ನ್ಯಾಯ ಕೊಡುವುದಕ್ಕಾಗಿ ಪೌರತ್ವ ಕಾಯ್ದೆ ತಂದಿರುವುದು. ಪೌರತ್ವವನ್ನು ಕೊಡುತ್ತಿರುವುದೇ ವಿನಃ ತೆಗೆಯುತ್ತಿರುವುದಲ್ಲ ಎಂದು ಪೌರತ್ವ ಕಾಯ್ದೆ ತಿದ್ದುಪಡಿ ಪರ ಬ್ಯಾಟಿಂಗ್ ನಡೆಸಿದರು.

RMG RSS3

ಸ್ವಾಮಿ ವಿವೇಕಾನಂದರವರು ಭಾಗವಹಿಸಿದ್ದು ಸರ್ವಧರ್ಮ ಸಮ್ಮೇಳನ ಅಲ್ಲ, ಅದು ವರ್ಡ್ ರಿಲಿಜಿಯನ್ ಕಾನ್ಫರೆನ್ಸ್, ರಿಲಿಜಿಯನ್ ಅನ್ನೋದು ಒಂದು ಮತ ಮಾತ್ರವಾಗಿದ್ದು ಕ್ರೈಸ್ತ ಧರ್ಮವೇ ಶ್ರೇಷ್ಠ ಅನ್ನೋದನ್ನ ತೋರಿಸಲು ಮಾಡಿದ್ದ ಕಾರ್ಯಕ್ರಮವಾಗಿತ್ತು. ಆದರೆ ಕಾರ್ಯಕ್ರಮದ ಬಳಿಕ ವಿವೇಕಾನಂದರು ಧರಿಸಿದ್ದ ಕೇಸರಿ ವಸ್ತ್ರವನ್ನ ಮುಟ್ಟಿದರೆ ಪಾವನರಾಗ್ತೇವೆ ಎಂಬ ಭಾವನೆ ಆ ಜನಗಳಿಗೆ ಬಂತು ಎಂದು ತಿಳಿಸಿದರು.

Share This Article
Facebook Whatsapp Whatsapp Telegram
Previous Article MNG Arrest ಬಿಎಂಡಬ್ಲ್ಯೂ ಕಾರಿನಲ್ಲಿ ಎಂಡಿಎಂಎ ಮಾದಕ ವಸ್ತು ಸಾಗಿಸುತ್ತಿದ್ದ ಆರೋಪಿಗಳ ಬಂಧನ
Next Article 09 02 2020 ಬಿಗ್ ಬುಲೆಟಿನ್ | 09-02-2020

Latest Cinema News

Vishnuvardhan 3
ಡಾ.ವಿಷ್ಣುವರ್ಧನ್ 75ನೇ ಜನ್ಮದಿನ ಇಂದು – ಅಭಿಮಾನ್‌ ಸ್ಟುಡಿಯೋ ಬಳಿ 2 ಎಕರೆ ಜಾಗದಲ್ಲಿ ಬರ್ತ್‌ಡೇಗೆ ಸಿದ್ಧತೆ
Cinema Latest Sandalwood Top Stories
disha patani
ನಟಿ ದಿಶಾ ಪಟಾನಿ ಮನೆ ಬಳಿ ಗುಂಡಿನ ದಾಳಿ – ಗೋಲ್ಡಿ ಬ್ರಾರ್ ಗ್ಯಾಂಗ್‌ನ ಇಬ್ಬರು ಎನ್‌ಕೌಂಟರ್‌ನಲ್ಲಿ ಹತ್ಯೆ
Bollywood Cinema Crime Latest Main Post National
Vedika
ಬಿಕಿನಿಯಲ್ಲಿ ಶಿವಲಿಂಗ ನಟಿ ಚಿಲ್‌ – ಪಡ್ಡೆ ಹೈಕ್ಳ ಮೈಬಿಸಿ ಹೆಚ್ಚಿಸಿದ ವೇದಿಕಾ
Cinema Latest Sandalwood Top Stories
Vishnuvardhan 4
ವಿಷ್ಣುವರ್ಧನ್ ಅಭಿಮಾನಿಗಳಿಗೆ ಗೆಲುವು – ಸಮಾಧಿ ಸಮೀಪ ಬರ್ತ್‌ಡೇಗೆ ಸಿಕ್ತು ಅನುಮತಿ
Cinema Latest Sandalwood Top Stories
Darshan
ನಟ ದರ್ಶನ್‌ಗೆ ಹಾಸಿಗೆ, ದಿಂಬು – ಸೆ.19ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್
Cinema Districts Latest Sandalwood Top Stories

You Might Also Like

01 5
Latest

PublicTV Explainer: ನೆರೆಯ ಕೇರಳದಲ್ಲಿ ಭೀತಿ ಹುಟ್ಟಿಸಿದ ಮೆದುಳು ತಿನ್ನುವ ಅಮೀಬಾ – ಒಮ್ಮೆ ಬಂದ ವೈರಸ್ ಸಾಯುವುದಿಲ್ಲ ಏಕೆ?

24 minutes ago
dk shivakumar
Bengaluru City

ಆಳಂದ ಫೈಲ್ಸ್ ಬಹಿರಂಗ – ರಾಹುಲ್ ಗಾಂಧಿ ಜೊತೆ ದೃಢವಾಗಿ ನಿಲ್ಲುತ್ತೇನೆ: ಡಿಕೆಶಿ

33 minutes ago
H.D.Kumaraswamy
Bengaluru City

ಬೆಂಗಳೂರು ಈಗ ಗುಂಡಿಯೂರು ಆಗಿ ಕುಖ್ಯಾತಿ – ಈ ಅಪಮಾನಕ್ಕೆ ಸಿಎಂ, ಡಿಸಿಎಂ ಹೊಣೆಗಾರರು: ಹೆಚ್‌ಡಿಕೆ ಕಿಡಿ

55 minutes ago
Ramalinga Reddy
Bengaluru City

ಇಡೀ ದೇಶದಲ್ಲಿ ಮತಗಳ್ಳತನ ಆಗಿದೆ – ರಾಮಲಿಂಗಾರೆಡ್ಡಿ

56 minutes ago
Santosh lad
Bengaluru City

ನರೇಂದ್ರ ಮೋದಿ ಅಕ್ರಮ ಮಾಡಿಯೇ ಚುನಾವಣೆ ಗೆದ್ದಿರೋದು – ಸಂತೋಷ್ ಲಾಡ್

57 minutes ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?