– ರಾಮನಗರಕ್ಕೆ ಹೇಮಾವತಿ ನೀರು ಹರಿಸಲು ತುಮಕೂರು ರೈತರ ವಿರೋಧ
ತುಮಕೂರು: ಹೇಮಾವತಿ ನದಿಯ (Hemavati River) ಗೊರೂರು ಡ್ಯಾಮ್ ನೀರಿಗಾಗಿ ತುಮಕೂರು ಹಾಗೂ ರಾಮನಗರ (Ramanagara) ಜಿಲ್ಲೆಗಳ ನಡುವೆ ಕಿತ್ತಾಟ ಶುರುವಾಗಿದೆ.
ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ (Hemavati Express Link Canal) ಮೂಲಕ ರಾಮನಗರ ಜಿಲ್ಲೆಯ ಮಾಗಡಿ ಶ್ರೀರಂಗ ಏತ ನೀರಾವರಿಗೆ ನೀರು ಹರಿಸಲು ತುಮಕೂರಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಕಳೆದ 30 ವರ್ಷದ ಹಿಂದೆ ಹೇಮಾವತಿ ನೀರು ತರಲು ನಡೆಸಿದ ತೀವ್ರ ಹೋರಾಟದ ಮಾದರಿಯಲ್ಲೇ ಈಗ ಅದೇ ಹೇಮೆಯ ನೀರು ಉಳಿಸಿಕೊಳ್ಳಲು ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ಮತ್ತೆ ಬಣ್ಣ ಹಚ್ಚಿದ ಸ್ಮೃತಿ ಇರಾನಿ – 12 ವರ್ಷಗಳ ನಂತರ ಸೀರಿಯಲ್ಗೆ ರೀ ಎಂಟ್ರಿ
ಏನಿದು ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ವಿವಾದ?
ಹಾಸನದ ಗೊರೂರು ಜಲಾಶಯದಿಂದ ಹೇಮಾವತಿ ನೀರನ್ನು ಬೃಹತ್ ಕೆನಾಲ್ ಮೂಲಕ ತುಮಕೂರು-ಕುಣಿಗಲ್ ಮೂಲಕ ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿಗೆ ಹರಿಸುವುದು ಎಕ್ಸ್ಪ್ರೆಸ್ ಕೆನಾಲ್ ಯೋಜನೆಯ ಸಾರವಾಗಿದೆ. ಇದರಿಂದ ಗುಬ್ಬಿ, ತುರುವೇಕೆರೆ, ತುಮಕೂರು, ತುಮಕೂರು ಗ್ರಾಮಾಂತರ, ಚಿಕ್ಕನಾಯಕನಹಳ್ಳಿಗೆ ದೊಡ್ಡ ಹೊಡೆತ ಬೀಳಲಿದೆ. ನೀರು ಕುಣಿಗಲ್ ಮೂಲಕ ಯೋಜನೆ ಅಂತ್ಯದ ಮಾಗಡಿ ತಲುಪುವಷ್ಟರಲ್ಲಿ ಕೊರತೆಯಾದರೆ ತುಮಕೂರು ಜಿಲ್ಲೆಯ ಮಧುಗಿರಿ, ಶಿರಾ ಭಾಗಕ್ಕೂ ತೊಂದರೆಯಾಗಲಿದೆ. ಆ ಭಾಗದಲ್ಲಿ ಮದಲೂರು ಸೇರಿದಂತೆ ಪ್ರಮುಖ ಕೆರೆಗಳಿಗೆ ನೀರು ಹರಿಯದು. ಇದನ್ನೂ ಓದಿ: ‘ಅಂಬಿ’ ಕನ್ವರ್ ಲಾಲ್ ಲುಕ್ನಲ್ಲಿ ಬಂದ ದರ್ಶನ್- ‘ದ ಡೆವಿಲ್’ ಪೋಸ್ಟರ್ ಔಟ್
ಅಷ್ಟಕ್ಕೂ ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ಶ್ರೀರಂಗ ಏತ ನೀರಾವರಿಗೆ ಹೇಮಾವತಿ ನೀರು ನಿಗದಿಯಾಗಿಲ್ಲ. ನಿಗದಿಯಾಗಿದ್ದರೆ ಸುತ್ತಿ ಬಳಸಿ ತೆಗೆದುಕೊಂಡು ಹೋಗುವುದಕ್ಕಿಂತ ನೇರವಾಗಿ ಗೊರೂರು ಜಲಾಶಯದಿಂದಲೇ ತೆಗೆದುಕೊಂಡು ಹೋಗಲಿ ಎಂಬುದು ತುಮಕೂರು ರೈತರು, ಹೋರಾಟಗಾರರ ಆಗ್ರಹವಾಗಿದೆ.
ಸದ್ಯ ಈ ಕೆನಾಲ್ ಯೋಜನೆಯಡಿ 1,289 ಕ್ಯೂಸೆಕ್ಸ್ ನೀರು, ತುಮಕೂರಿನ 5 ತಾಲೂಕುಗಳಿಗೆ ನಿಗದಿಯಾಗಿದೆ. ತುಮಕೂರು, ತುಮಕೂರು ಗ್ರಾಮಾಂತರ, ಗುಬ್ಬಿ ಹಾಗೂ ತುರುವೇಕೆರೆಗೆ 901 ಕ್ಯೂಸೆಕ್ಸ್ ನೀರು ಹಾಗೂ ಕುಣಿಗಲ್ ತಾಲೂಕಿಗೆ 388 ಕ್ಯೂಸೆಕ್ಸ್ ನೀರು ನಿಗದಿಯಾಗಿದೆ. ನೀರು ಹಂಚಿಕೆಯೂ ಪೂರ್ಣವಾಗಿದೆ. ಇದನ್ನೂ ಓದಿ: ಭುಗಿಲೆದ್ದ ರೈತರ ಆಕ್ರೋಶ – ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಕಾಮಗಾರಿ ತಾತ್ಕಾಲಿಕ ಸ್ಥಗಿತ
ಈಗ ರಾಮನಗರಕ್ಕೆ ಎಲ್ಲಿಂದ ನೀರು ಕೊಡ್ತೀರಿ? ಹಂಚಲು ಹೆಚ್ಚುವರಿ ನೀರು ಇಲ್ಲ. ಆದರೂ ಇದೇ ನೀರನ್ನು ರಾಮನಗರಕ್ಕೆ ಹರಿಸಲು ಡಿಸಿಎಂ ಡಿ ಕೆ ಶಿವಕುಮಾರ್ ಹಠ ಯೋಗಿ ಥರ ಮುಂದಾಗಿದ್ದಾರೆ. ತುಮಕೂರಿನ ಗುಬ್ಬಿಯಿಂದಲೇ ಪೈಪ್ಲೈನ್ ಮೂಲಕ ರಾಮನಗರಕ್ಕೆ ನೀರು ಕೊಂಡೊಯ್ಯುವ ಯತ್ನ ನಡೆದಿದೆ. ಇದಕ್ಕೆ ದೊಡ್ಡ ದೊಡ್ಡ ಪೈಪ್ಗಳನ್ನು ಹಾಕಿ ಕಾಮಗಾರಿ ನಡೆಸಲಾಗ್ತಿದೆ. ಈ ಯೋಜನೆ ಮುಗಿಸಲು 2 ವರ್ಷದ ಗಡುವು ಕೊಡಲಾಗಿದೆ. ಇದನ್ನೂ ಓದಿ: ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ಕಿಚ್ಚು – ಗುಬ್ಬಿಯಲ್ಲಿ ಪೊಲೀಸ್ ಸರ್ಪಗಾವಲು, ರಾಮನಗರಕ್ಕೆ ನೀರು ಹರಿಸಲು ರೈತರ ವಿರೋಧ
ಇನ್ನು ಆರಂಭದಲ್ಲಿ ಈ ಕೆನಾಲ್ ಯೋಜನೆಗೆ ತುಮಕೂರು ಭಾಗದ ಕಾಂಗ್ರೆಸ್ನವರ ವಿರೋಧವೂ ಇತ್ತು. ಆದರೆ ಡಿಕೆಶಿ ಹಠ, ಒತ್ತಡಕ್ಕೆ ಕೈ ನಾಯಕರು ಮಣಿದಿದ್ದಾರೆ ಅನ್ನೋದು ಬಿಜೆಪಿಯವರ ಆರೋಪವಾಗಿದೆ. ಈಗ ತಾಂತ್ರಿಕ ಸಮಿತಿ ವರದಿಯಲ್ಲಿ ತುಮಕೂರಿಗೆ ಯಾವುದೇ ನೀರಿನ ತೊಂದರೆ ಆಗೋದಿಲ್ಲ ಎನ್ನುವ ಕಾರಣವನ್ನು ಗೃಹ ಸಚಿವ ಪರಮೇಶ್ವರ್ ಕೊಟ್ಟಿದ್ದಾರೆ.