ಟಾಲಿವುಡ್ ಸ್ಟಾರ್ ರಾಮ್ಚರಣ್ `ಆರ್ಆರ್ಆರ್’ ಚಿತ್ರದ ನಂತರ ಸಕ್ಸಸ್ ನಂತರ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಜ್ಯೂ.ಮೆಗಾಸ್ಟಾರ್ ರಾಮ್ಚರಣ್ ಸಿನಿಮಾ ಶೂಟಿಂಗ್ಗಾಗಿ ವಿಶಾಖಪಟ್ಟಣದಲ್ಲಿ ಬೀಡುಬಿಟ್ಟಿದ್ದಾರೆ. ಈ ಗ್ಯಾಪ್ನಲ್ಲಿ ಪತ್ನಿ ಉಪಾಸನಾಗೆ ವಿಶೇಷ ಮನವಿಯೊಂದನ್ನ ಮಾಡಿದ್ದಾರೆ. ಸದ್ಯ ಈ ಪೋಸ್ಟ್ ಭಾರೀ ವೈರಲ್ ಆಗ್ತಿದೆ.
ರಾಮ್ ಚರಣ್ ನಟನೆಯ `ಆರ್ಆರ್ಆರ್’ ಚಿತ್ರ ಸೂಪರ್ ಸಕ್ಸಸ್ ಕಂಡಿದೆ. ಆದರೆ `ಆಚಾರ್ಯ’ ಸಿನಿಮಾ ಕಲೆಕ್ಷನ್ನಲ್ಲಿ ಸೋತಿದೆ. ಈ ಎರಡು ಸಿನಿಮಾಗಳ ನಂತರ ಬ್ರೇಕ್ ತೆಗೆದುಕೊಳ್ಳದೇ ಜ್ಯೂ.ಮೆಗಾಸ್ಟಾರ್ ಶಂಕರ್ ನಿರ್ದೇಶನದ `ಆರ್ಸಿ 15′ ಚಿತ್ರದ ಶೂಟಿಂಗ್ಗೆ ವಿಶಾಖಪಟ್ಟಣಕ್ಕೆ ತೆರೆಳಿದ್ದಾರೆ. ಹೀಗಾಗಿ ವಕೇಶನ್ಗೆ ತೆರಳಲು ಇನ್ನೂ ಒಂದಿಷ್ಟು ಸಮಯ ಕಾಯಬೇಕಾಗುತ್ತದೆ ಅಂತಾ ಪತ್ನಿಗೆ ತಿಳಿಸಿದ್ದಾರೆ.
ಕೊವೀಡ್ ಕಾರಣದಿಂದ ಒಂದು ಚಿತ್ರ ಮುಗಿದ ತಕ್ಷಣ ಬೇರೆ ಪ್ರಾಜೆಕ್ಟ್ ಕೈಗಿತ್ತಿಕೊಳ್ತಿದ್ದಾರೆ. ಹಾಗಾಗಿ ಬ್ರೇಕ್ಯಿಲ್ಲದೇ ಕೆಲಸ ಮಾಡ್ತಿರೋ ರಾಮ್ಚರಣ್ ಇದೀಗ ತಮ್ಮ ಫೋಟೋ ಶೇರ್ ಮಾಡಿ, ಮಡದಿಗೆ ವಿಶೇಷವಾಗಿ ಮನವಿ ಮಾಡಿದ್ದಾರೆ. ವಕೇಶನ್ಗೆ ಹೋಗಲು ಇನ್ನು ಒಂದಿಷ್ಟು ಸಮಯ ಬೇಕು ಅಂತಾ ಪ್ರೀತಿಯಿಂದ ಮನವಿ ಮಾಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗ್ತಿದೆ. ಇದನ್ನೂ ಓದಿ: ಕಾಲಿವುಡ್ನಲ್ಲೂ ಯಶ್ ಮೇನಿಯಾ: 100 ಕೋಟಿ ಬಾಚಿದ `ಕೆಜಿಎಫ್ 2′
View this post on Instagram
ರಾಮ್ಚರಣ್ ನಟನೆಯ 15ನೇ ಸಿನಿಮಾಗೆ ಶಂಕರ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ವಿಭಿನ್ನ ಪಾತ್ರದ ಮೂಲಕ ಸಿನಿರಸಿಕರ ಗಮನ ಸೆಳೆಯಲು ಸಜ್ಜಾಗಿದ್ದಾರೆ.