ಸದಾ ಒಂದಲ್ಲಾ ಒಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುವ ಬಾಲಿವುಡ್ ನಟಿ ರಾಖಿ ಸಾವಂತ್, ಇದೀಗ ಮತ್ತೊಂದು ಕಥೆ ಬಿಚ್ಚಿಟ್ಟಿದ್ದಾರೆ. ಅದು ನಿಜವೋ, ಸುಳ್ಳೋ ಗೊತ್ತಿಲ್ಲ. ಆದರೆ, ಪ್ರತಿಷ್ಠಿತ ವೇದಿಕೆಯ ಮೇಲೆ ಅಂಥದ್ದೊಂದು ಘಟನೆಯನ್ನು ನೆನಪಿಸಿಕೊಂಡಿದ್ದರಿಂದ ಅದೀಗ ಭಾರೀ ಸದ್ದು ಮಾಡುತ್ತಿದೆ. ಬೋಲ್ಡ್ ರಾಕಿ ಬೋಲ್ಡ್ ಎಂಬ ಟ್ಯಾಗ್ ಲೈನ್ನಲ್ಲಿ ಸುದ್ದಿ ಹರಿದಾಡುತ್ತಿದೆ.
ಇತ್ತೀಚೆಗಷ್ಟೇ ನಡೆದ ಇಂಡಿಯನ್ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿ ಸಮಾರಂಭದ ಸಂದರ್ಶನ ವೇಳೆ ಮಾತನಾಡಿದ ಅವರು, ತಮ್ಮ ಬಾಲ್ಯದಲ್ಲಿ ಮಾಡಿದ್ದ ಕೆಲವು ಚೇಷ್ಟೆಗಳನ್ನು ನೆನಪಿಸಿಕೊಂಡಿದ್ದಾರೆ. ನಾನು ಚಿಕ್ಕವಳಾಗಿದ್ದಾಗ ನನ್ನ ಮನೆಯಲ್ಲಿರುವುದನ್ನು ವಾಟರ್ ಬಲೂನ್ ಎಂದು ತಿಳಿದು ಕಾಂಡೋಮ್ ಒಳಗೆ ಬಣ್ಣದ ನೀರನ್ನು ತುಂಬಿ ಜನರ ಮುಖದ ಮೇಲೆ ಎಸೆಯುತ್ತಿದ್ದೆ. ಆದರೆ ನನಗೆ ಅದು ಕಾಂಡೋಮ್ ಎಂದು ತಿಳಿದಿರಲಿಲ್ಲ. ಎಲ್ಲರೂ ನನ್ನನ್ನು ನಿಂದಿಸುತ್ತಿದ್ದರು. ಆಗ ನಾನು ಕೋಪ ಮಾಡಿಕೊಳ್ಳಬೇಡಿ ಕೇವಲ ಹೋಳಿಯಷ್ಟೇ ಎಂದು ಹೇಳುತ್ತಿದ್ದೆ. ಹೀಗಿದ್ದರೂ ಜನ ಈಡಿಯಟ್, ನಿನ್ನನ್ನು ಕೊಂದು ಬಿಡುತ್ತೇನೆ ಎಂದು ಬೈಯ್ಯುತ್ತಿದ್ದರು. ನಾನು ಯಾಕೆ ನನ್ನನ್ನು ನಿಂದಿಸುತ್ತಿದ್ದಾರೆ, ಅದು ಕೇವಲ ಹೋಳಿ ಅಂದುಕೊಳ್ಳುತ್ತಿದ್ದೆ. ಆದರೆ ನಂತರ ಅದು ವಾಟರ್ ಬಲೂನ್ ಅಲ್ಲ, ಕಾಂಡೋಮ್ ಅಂತ ತಿಳಿದುಬಂದಿತು ಎಂದಿದ್ದಾರೆ. ಇದನ್ನೂ ಓದಿ : ಇನ್ಮುಂದೆ ಬಾಲಿವುಡ್ ನಿರ್ದೇಶಕರಿಗೆ ಸಿಗಲ್ಲ ಆಲಿಯಾ ಭಟ್
View this post on Instagram
ಭಾನುವಾರ ಐಟಿಎ 2022 ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಮುಂಬೈನಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅನೇಕ ಬಾಲಿವುಡ್ ತಾರೆಯರು ಪಾಲ್ಗೊಂಡಿದ್ದರು. ಇದೇ ವೇಳೆ ರೆಡ್ ಕಾರ್ಪೆಟ್ ಮೇಲೆ ಭೇಟಿಯಾದ ನಟ ರಣ್ವೀರ್ ಸಿಂಗ್ ಅವರನ್ನು ರಾಖಿ ಸಾವಂತ್ ಕ್ಯಾಮೆರಾ ಮುಂದೆ ಎತ್ತಿಕೊಂಡು ಸಾಹಸ ಪ್ರದರ್ಶಿಸಿದರು. ಇನ್ನೂ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ : ರಾಧಿಕಾ ಪಂಡಿತ್ ಬರ್ತಡೇ ಸೆಲೆಬ್ರೆಷನ್: ಫೋಟೋ ಗ್ಯಾಲರಿ