ಹಾಡು ಕೇಳುತ್ತಾ ಹಳಿ ದಾಟುವಾಗ ರೈಲು ಡಿಕ್ಕಿ- ಯುವಕ ಸಾವು

Public TV
1 Min Read
RCR 6

–  ಕೂದಲೆಳೆ ಅಂತರದಲ್ಲಿ ಪೋಷಕರು ಪಾರು

ರಾಯಚೂರು: ಹಳಿ ದಾಟುವಾಗ ರೈಲು ಡಿಕ್ಕಿ ಹೊಡೆದು ಯುವಕನೋರ್ವ ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಮಂತ್ರಾಲಯ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಕರ್ನೂಲ್ ಜಿಲ್ಲೆ ಕೊಸಗಿ ಮಂಡಲದ ಸಾತನೂರ್ ಗ್ರಾಮದ ಶರಣಬಸವ (18) ಮೃತ ಯುವಕ. ತಂದೆ-ತಾಯಿ ಮತ್ತು ಮಗ ಮೂವರು ಹಳಿ ದಾಟುವಾಗ ಈ ಘಟನೆ ನಡೆದಿದೆ. ಕೂದಲೆಳೆ ಅಂತರದಲ್ಲಿ ತಂದೆ-ತಾಯಿ ಪಾರಾಗಿದ್ದಾರೆ.

RCR 1 2

ಮೂವರು ಬೆಂಗಳೂರಿನಿಂದ ಉದ್ಯಾನ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಂದು ಮಂತ್ರಾಲಯ ರೈಲ್ವೆ ನಿಲ್ದಾಣದಲ್ಲಿ ಇಳಿದಿದ್ದು, ಹಳಿ ದಾಟುತ್ತಿದ್ದಾಗ  ಈ ಘಟನೆ ನಡೆದಿದೆ. ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದು ಶರಣಬಸವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಮೃತ ಯುವಕ ಕಿವಿಗೆ ಇಯರ್ ಫೋನ್ ಬಳಸಿ ಹಾಡು ಕೇಳುತ್ತಿದ್ದನು. ಹೀಗಾಗಿ ರೈಲಿನ ಶಬ್ದ ಕೇಳದೆ ಹಳಿ ಮೇಲೆ ಹೋಗಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ಅವನ ಹಿಂದೆಯೇ ಇದ್ದ ತಂದೆ ತಾಯಿ ಪಾರಾಗಿದ್ದಾರೆ. ಮಂತ್ರಾಲಯ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಗನ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *