ಶ್ರೀನಗರ: ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹಿಮದಿಂದ ಆವೃತವಾದ ಶ್ರೀನಗರ ನಿಲ್ದಾಣದ ಫೋಟೋವನ್ನು ಶೇರ್ ಮಾಡಿ, ‘ಭೂಮಿಯ ಮೇಲಿನ ಸ್ವರ್ಗ’ ಎಂದು ಬರೆದುಕೊಂಡಿದ್ದಾರೆ.
ಅಶ್ವಿನಿ ವೈಷ್ಣವ್ ಅವರು ಭಾನುವಾರ ಶ್ರೀನಗರ ರೈಲು ನಿಲ್ದಾಣ ಹಿಮದಿಂದ ಆವೃತವಾಗಿರುವ ಫೋಟೋವನ್ನು ಟ್ವಟ್ಟರ್ ನಲ್ಲಿ ಹಂಚಿಕೊಂಡಿದ್ದು, ಭೂಮಿಯ ಮೇಲೆ ಸ್ವರ್ಗವಿದ್ದರೆ, ಅದು ಇದು ಎಂದು ಫುಲ್ ಖುಷ್ ಆಗಿ ಬರೆದಿದ್ದಾರೆ. ಇದನ್ನೂ ಓದಿ: ಹಿರಿಯ ಸಾಹಿತಿ, ರಾಷ್ಟ್ರಪ್ರಶಸ್ತಿ ವಿಜೇತ ಎನ್.ಎಸ್.ದೇವಿಪ್ರಸಾದ್ ನಿಧನ
“गर फिरदौस बर रूये ज़मी अस्त
हमी अस्तो हमी अस्तो हमी अस्त” #SrinagarRailwayStation pic.twitter.com/aP7zkWxCyQ
— Ashwini Vaishnaw (@AshwiniVaishnaw) January 9, 2022
ಜಮ್ಮು ಮತ್ತು ಕಾಶ್ಮೀರದ ವಾರಾಂತ್ಯದಲ್ಲಿ ಭಾರೀ ಹಿಮಾದಿಂದ ಕೂಡಿತ್ತು, ಆಗ ಅದನ್ನು ನೋಡುವುದೇ ಚಂದ. ಈ ಅನುಭವವನ್ನು ನೇರವಾಗಿ ನೋಡಿದರೆ ಮಾತ್ರ ಗೊತ್ತಾಗುತ್ತೆ. ಇನ್ನೂ ಇಲ್ಲಿನ ಜನರು ಸೋಶಿಯಲ್ ಮೀಡಿಯಾದಲ್ಲಿ ಪ್ರಕೃತಿಯ ಸೊಬಗಿನ ಫೋಟೋವನ್ನು ಶೇರ್ ಮಾಡುತ್ತಿದ್ದಾರೆ. ಆ ಫೋಟೋಗಳನ್ನು ನೋಡಿದ ನೆಟ್ಟಿಗರು ಅವರಿರುವಲ್ಲಿಯೇ ‘ವಿ ಮಿಸ್’ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಕೊರೊನಾ ಕಾರಣದಿಂದ ಈ ವರ್ಷ ಜಮ್ಮು-ಕಾಶ್ಮಿರಾದಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಇನ್ನೂ ಭಾರತದಲ್ಲಿ ದಿನೇ ದಿನೇ ಕೊರೊನಾ ಸಂಖ್ಯೆ ಏರಿಕೆಯಾಗುತ್ತಿದ್ದು, ಜನರು ತಮ್ಮ ಹುಷಾರಿನಲ್ಲಿ ಇರಬೇಕು. ಇದನ್ನೂ ಓದಿ: ಮೇಕೆದಾಟು ಯೋಜನೆ ಸ್ಥಗಿತಗೊಂಡ್ರೆ ಕಾಂಗ್ರೆಸ್ ಪಕ್ಷದವರೇ ನೇರ ಹೊಣೆ: ಭೈರತಿ ಬಸವರಾಜ್