ಲಕ್ನೋ: ಪಾಪಿ ತಂದೆಯೊಬ್ಬ ಮಗಳ ಪ್ರೇಮ ಸಂಬಂಧಕ್ಕೆ ಕೋಪಗೊಂಡು ಯುವತಿಯ ಕತ್ತು ಸೀಳಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ನಡೆದಿದೆ.
ಜ್ಯೋತಿ (18) ಕೊಲೆಗಿಡಾದ ಯುವತಿ. ಆರೋಪಿ ವಿಜಯ್, ಗುರ್ಬಕ್ಷ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಕುರ್ಮಿಯಮಾವು ಗ್ರಾಮದಲ್ಲಿ ವಾಸಿಸುತ್ತಿದ್ದನು. ಆರೋಪಿ ಕೂಲಿ ಕೆಲಸ ಮಾಡುತ್ತಿದ್ದು, ತನ್ನ ಮನೆಯಲ್ಲಿಯೇ ಅಂಗಡಿಯೊಂದನ್ನು ನಡೆಸುತ್ತಿದ್ದನು. ಇದನ್ನೂ ಓದಿ: ಮಗಳನ್ನೇ ಅತ್ಯಾಚಾರ ಮಾಡುವ ಶಿಕ್ಷಕನಿಗೆ ಪತ್ನಿಯೂ ಸಾಥ್
ಅವನ ಅಂಗಡಿಗೆ ಧಮೇಂದ್ರ ಎಂಬಾತ ನಿರಂತರವಾಗಿ ಭೇಟಿ ನೀಡುತ್ತಿದ್ದು, ಜ್ಯೋತಿಯೊಂದಿಗೆ ಪ್ರೇಮ ಸಂಬಂಧ ಬೆಳೆಸಿಕೊಂಡಿದ್ದನು. ಇದರಿಂದ ಕೋಪಗೊಂಡ ವಿಜಯ್ ತನ್ನ ಮಗಳನ್ನು ಗ್ರಾಮದ ಹೊರಗಿನ ಹೊಲದಲ್ಲಿ ಶೌಚಕ್ಕೆ ಹೋಗಿದ್ದ ವೇಳೆ ಚಾಕುವಿನಿಂದ ಕತ್ತು ಸೀಳಿ ಕೊಂದಿದ್ದಾನೆ. ಇದನ್ನೂ ಓದಿ: ರಾಜ್ಯದಲ್ಲಿ ದೇಶದ್ರೋಹಿ ಶಕ್ತಿ ಇನ್ನೂ ಜೀವಂತ ಅನ್ನೋದಕ್ಕೆ ಛೋಟಾ ಪಾಕಿಸ್ತಾನ ಘೋಷಣೆಯೇ ಸಾಕ್ಷಿ: ಮುತಾಲಿಕ್
ಘಟನೆ ಕುರಿತು ಆರೋಪಿಯನ್ನು ಬಂಧಿಸಲಾಗಿದ್ದು, ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಶ್ವಜೀತ್ ಶ್ರೀವಾಸ್ತವ ತಿಳಿಸಿದ್ದಾರೆ.