-ಹಿಜಾಬ್ ಹಿಂದೆ ಕಾಂಗ್ರೆಸ್ ಕೈವಾಡ ಇದೆ
ಬೆಂಗಳೂರು: ಇದು ಯಾವುದೋ ಪಾಕಿಸ್ತಾನ ಅಲ್ಲ, ಮನಸ್ಸಿಗೆ ಬಂದಂತೆ ಮಾಡಲು. ಎಲ್ಲರೂ ಸಮವಸ್ತ್ರ ಹಾಕಲೇಬೇಕು. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಕಾಂಗ್ರೆಸ್ ಪ್ರೇರಣೆಯಿಂದ ಈ ಹಿಜಬ್ ಘಟನೆ ನಡೆಯುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೂ ಅಲ್ಪಸಂಖ್ಯಾತರಿಗೂ ಬಹಳ ನಂಟಿದೆ. ಟಿಪ್ಪು ಜಯಂತಿ ಆಚರಿಸಿದ್ರು, ಶಾದಿ ಭ್ಯಾಗ್ಯ ಮಾಡಿದ್ದಾರೆ. ಕಾಂಗ್ರೆಸ್ ಪ್ರೇರಣೆಯಿಂದ ಈ ಹಿಜಬ್ ಘಟನೆ ನಡೆಯುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಡಿ.ಕೆ ಶಿವಕುಮಾರ್ ಇದನ್ನ ಖಂಡಿಸಿದ್ದಾರೆ. ಇದು ಯಾವುದೋ ಪಾಕಿಸ್ತಾನ ಅಲ್ಲ ಮನಸ್ಸಿಗೆ ಬಂದಂತೆ ಮಾಡಲು. ಎಲ್ಲರೂ ಸಮವಸ್ತ್ರ ಹಾಕಲೇಬೇಕು. ಮನೆಯಲ್ಲಿ ಹೇಗೆ ಬೇಕಾದ್ರೂ ಇರಲಿ. ಆದರೆ ಶಾಲೆಗೆ ಬರುವಾಗ ಸರ್ಕಾರದ ಸಮವಸ್ತ್ರ ಕೊಡುತ್ತೇವೆ ಹಾಕಿಕೊಂಡು ಬರಲಿ ಎಂದಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿನೇ ಹಿಜಬ್ ಹಾಕಿದ್ದಾರೆ: ಸಿಎಂ ಇಬ್ರಾಹಿಂ
ಪಾಕಿಸ್ತಾನ ಮಾಡಲು ಬಿಡೋದಿಲ್ಲ. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಆಫ್ಘಾನಿಸ್ತಾನ ಅಲ್ಲೇ ಇರಲಿ. ಕೇರಳ ಹೈಕೋರ್ಟ್ ಇದು ತಪ್ಪು ಅಂತ ಹೇಳಿದೆ. ಸರ್ಕಾರಿ ಶಾಲೆ ಕಾನೂನಿನಲ್ಲಿ ಏನಿದೆ ಅದನ್ನ ಪಾಲನೆ ಮಾಡಬೇಕು. ಹಿಜಬ್ ಹಿಂದೆ ಕಾಂಗ್ರೆಸ್ ಕೈವಾಡ ಇದೆ. ಕೇಸರಿ ಹಾಕೋದು ಕೂಡ ತಪ್ಪೆ. ಎರಡೂ ಸರಿಯಲ್ಲ, ಎರಡೂ ತಪ್ಪೇ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದದಲ್ಲಿ ಕಾಂಗ್ರೆಸ್ ಕೈವಾಡ- ಬಿಜೆಪಿ ಆರೋಪ