– ಸಚಿವ ಆರ್.ಬಿ ತಿಮ್ಮಾಪೂರ ತಲೆದಂಡಕ್ಕೆ ಬಿಜೆಪಿ ಬಿಗಿ ಪಟ್ಟು
ಬೆಂಗಳೂರು: ಅಬಕಾರಿ ಇಲಾಖೆಯ ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಸಚಿವ ಆರ್.ಬಿ ತಿಮ್ಮಾಪೂರ (RB Timmapur) ತಕೆದಂಡಕ್ಕೆ ಬಿಜೆಪಿ ಪಟ್ಟು ಹಿಡಿದಿದೆ.
ವಿಧಾನಸಭೆಯಲ್ಲಿ ಅಬಕಾರಿ ಅಕ್ರಮ ಆರೋಪ ಕುರಿತು ನಿಯಮ 69 ರಡಿ ಚರ್ಚಿಸಿದ ಆರ್. ಅಶೋಕ್ (R Ashok), ಆರ್.ಬಿ ತಿಮ್ಮಾಪೂರ ರಾಜೀನಾಮೆ ಕೊಡಬೇಕು. ಭ್ರಷ್ಟಾಚಾರ ಪ್ರಕರಣದ (Corruption Case) ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ರು. ಈ ವೇಳೆ ಕಲಾಪದಲ್ಲಿ ಆಡಳಿತ ವಿಪಕ್ಷಗಳ ನಡುವೆ ತೀವ್ರ ವಾಕ್ಸಮರ ನಡೆಯಿತು. ಇದನ್ನೂ ಓದಿ: ವಿಬಿ-ಜಿರಾಮ್ಜಿ ಕಾಯ್ದೆ ವಿರೋಧಿಸಿ ವಿಧಾನಸಭೆಯಲ್ಲಿ ನಿರ್ಣಯ – ಸಿಎಂ ಹೇಳಿಕೆಗೆ ಸದನದಲ್ಲಿ ಕೋಲಾಹಲ

ಸದನದಲ್ಲಿ ಭಾರೀ ಕೋಲಾಹಲ ಉಂಟಾಯಿತು. ಮೊದಲು ಮಾತಾಡಿದ ಅಶೋಕ್, ಅಬಕಾರಿ ಅಕ್ರಮ ಸಂಬಂಧ ಆಡಿಯೋ ವೈರಲ್ ಆಗಿದೆ. ಆಡಿಯೋದಲ್ಲಿ ಸನ್ನದು ಬೇಕಾದ್ರೆ ಸಚಿವರು ಅಥವಾ ಅವರ ಮಗನನ್ನ ಸಂಪರ್ಕ ಮಾಡಬೇಕು ಅಂತ ಇದೆ. ಈ ಆಡಿಯೋ ರಾಷ್ಟ್ರೀಯ ಮಟ್ಟದಲ್ಲೂ ಸುದ್ದಿ ಆಗಿದೆ. ಆಡಿಯೋ ಇರುವ ಪೆನ್ಡ್ರೈವ್ ನನ್ನ ಬಳಿ ಇದೆ ಎಂದು ಆರ್.ಅಶೋಕ್ ಸದನದಲ್ಲಿ ಪೆನ್ಡ್ರೈವ್ ಪ್ರದರ್ಶಿಸಿದ್ರು. ಇದನ್ನೂ ಓದಿ: ಲೋಕಸಭೆಯಲ್ಲಿ ಗದ್ದಲ, ಸ್ಪೀಕರ್ ಪೀಠಕ್ಕೆ ಅಗೌರವ – 8 ವಿಪಕ್ಷ ಸಂಸದರು ಇಡೀ ಅಧಿವೇಶನದಿಂದ ಅಮಾನತು
ಕೆಲವೊಂದು ದಾಖಲೆಗಳನ್ನ ತೋರಿಸಿದ ಅಶೋಕ್, ಅಬಕಾರಿ ಇಲಾಖೆಯಲ್ಲಿ ಅಧಿಕಾರಿಗಳ ಲೂಟಿ ಬಗ್ಗೆ ವಿವರಿಸಿದ್ರು. ಇದರ ತನಿಖೆ ಆಗಬೇಕು. ತನಿಖಾ ವರದಿ ಬರುವವರೆಗೂ ಸಚಿವ ತಿಮ್ಮಾಪೂರ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಅಬಕಾರಿ ಸಚಿವರು ಸಚಿವರಾಗಲು ಅರ್ಹರಲ್ಲ. ಲೂಟಿ ಹಣ ಎಲ್ಲಿ ಹೋಯ್ತು ಅಂತ ತನಿಖೆ ಆಗಬೇಕು. ಅಲ್ಲಿಯವರೆಗೂ ಸಚಿವರು ರಾಜೀನಾಮೆ ಕೊಡಬೇಕು ಎಂದು ಸದನದಲ್ಲಿ ಸಚಿವ ಆರ್.ಬಿ ತಿಮ್ಮಾಪೂರ ರಾಜೀನಾಮೆಗೆ ಅಶೋಕ್ ಒತ್ತಾಯಿಸಿದರು.

ಅಶೋಕ್ ಭಾಷಣ ಮುಗಿಯುವಾಗ ಬಂದ ಸಿಎಂ ಸಿದ್ದರಾಮಯ್ಯ ಸದನಕ್ಕೆ ಆಗಮಿಸಿದರು. ಈ ವೇಳೆ ಸಿದ್ದರಾಮಯ್ಯ ಕಾಲೆಳೆದ ಅಶೋಕ್, ಸಿನಿಮಾದಲ್ಲಿ ಪೊಲೀಸರು ಕೊನೆಗೆ ಬರ್ತಾರೆ, ಹಾಗೆ ಸಿದ್ದರಾಮಯ್ಯ ಅವರು ಬಂದಿದ್ದಾರೆ. ಕೊನೆಗೆ ಬಂದು ಕಳ್ಳರ ಬಂಧನ ಮಾಡ್ತಾರೆ. ಹಾಗೆ ಸಚಿವರ ಬಂಧನ ಮಾಡ್ತಾರಾ ನೋಡೋಣ ಎಂದು ಕಾಲೆಳೆದರು. ಇದನ್ನೂ ಓದಿ: ಜೈಲಿನಿಂದ ಬಂದು ಶಾಸಕನಾಗಿ ಪ್ರಮಾಣವಚನ ಸ್ವೀಕರಿಸಿದ ಅನಂತ್ ಸಿಂಗ್
ಅಬಕಾರಿ ಇಲಾಖೆಯಲ್ಲಿ ಕಿಕ್ ಲೆವೆಲ್ ಜಾಸ್ತಿಯಾಗಿದೆ. ಕಾಸಿಗಾಗಿ ಪೋಸ್ಟಿಂಗ್ ನಡೆಯುತ್ತಿದೆ. ನಿಷ್ಕ್ರಿಯ ಪರವಾನಗಿಗೆ ಜೀವ ಕೊಡಲಾಗ್ತಿದೆ. ಹೊಸ ರೀತಿಯ ಭ್ರಷ್ಟಾಚಾರ ನಡೆಯುತ್ತಿದೆ. ಆದರೆ, ಸಿದ್ದರಾಮಯ್ಯ ಮೌನ ಮೂರ್ತಿ ಆಗಿದ್ದಾರೆ. ಅಬಕಾರಿ ಹಗರಣದ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಅಶೋಕ್ ವಾಗ್ದಾಳಿ ನಡೆಸಿದ್ರು. ಇಷ್ಟೆಲ್ಲಾ ಲೂಟಿ ಆಗಿದೆ, ಸರ್ಕಾರ ಯಾವ ಅಧಿಕಾರಿಯಿಂದಲೂ ಮಾಹಿತಿ ಪಡೆದಿಲ್ಲ. ಅಧಿಕಾರಿಗಳ ಆಡಿಯೋ ಸುಳ್ಳು ಅಂತಾರೆ. ಹಾಗಾದರೆ ಆಡಿಯೋ ಫೊರೆನ್ಸಿಕ್ ಲ್ಯಾಬ್ಗೆ ಯಾಕೆ ಕಳಿಸಿಲ್ಲ. ಇಲಾಖೆ ಲೂಟಿ ಹಿಂದೆ ಕಾಣದ ಕೈ ಯಾವುದು ಅಂತ ಗೊತ್ತಾಗಬೇಕಿದೆ ಎಂದು ಅಶೋಕ್ ಆಗ್ರಹಿಸಿದರು.
ಅಶೋಕ್ ಮಾತಿಗೆ ಧ್ವನಿಗೂಡಿಸಿದ ಸುನಿಲ್ ಕುಮಾರ್, ಹಗರಣದ ಬಗ್ಗೆ ಸ್ವಲ್ಪ ಮಾತಾಡಲು ಸಾಧ್ಯವಿಲ್ಲ. ಹಗರಣ ವಿವರ ಇಷ್ಟು ಉದ್ದವಿದೆ. ಹಾಗಾಗಿ ಸಣ್ಣದಾಗಿ ಮಾತಾಡಲು ಸಾಧ್ಯವಿಲ್ಲ. ನರೇಗಾ ವಿಚಾರ ನಾವು ಚರ್ಚೆ ಮಾಡಲು ಸಿದ್ಧ. ಆದರೆ, ಮೊದಲು ನಮಗೆ ಅಬಕಾರಿ ಹಗರಣ ಚರ್ಚೆ ಮಾಡಲು ಅವಕಾಶ ನೀಡ ಎಂದು ಒತ್ತಾಯಿಸಿದರು. ಆರೋಪಗಳಿಗೆ ಸಚಿವರ ಉತ್ತರಕ್ಕೆ ಪ್ರತಿಪಕ್ಷಗಳು ಆಗ್ರಹಿಸಿದವು.
ಗದ್ದಲದ ನಡುವೆಯೇ ವಿಬಿಜಿರಾಮ್ಜಿ ವಿರುದ್ಧ ಸಿಎಂ ನಿರ್ಣಯ ಓದಿದದಾಗಲೂ ವಿಪಕ್ಷಗಳು ತಿಮ್ಮಾಪೂರ ರಾಜೀನಾಮೆಗೆ ಪಟ್ಟು ಹಿಡಿದು ಅಡ್ಡಿ ಮಾಡ್ತಿದ್ರು. ಈ ವೇಳೆ ಮಾತಾಡಿದ ಸಿಎಂ, ತಿಮ್ಮಾಪೂರ ಸಂಜೆ ಉತ್ತರ ಕೊಡ್ತಾರೆ, ಅವರ ಮೇಲೆ ಆರೋಪ ಸುಳ್ಳು. ಅವರು ಯಾಕೆ ರಾಜೀನಾಮೆ ಕೊಡಬೇಕು. ನೀವು ಹೇಳಿದ್ದಕ್ಕೆಲ್ಲ ರಾಜೀನಾಮೆ ಕೊಡಬೇಕಾ ಅಂತ ತಿಮ್ಮಾಪೂರರನ್ನ ಸಿಎಂ ಸಮರ್ಥಿಸಿಕೊಂಡ್ರು. ಸ್ಪೀಕರ್ ಮಾತೂ ಕೇಳದೇ ವಿಪಕ್ಷ ಸದಸ್ಯರು ಗದ್ದಲ ಮುಂದುವರೆಸಿದರು. ಬಿಜೆಪಿ ಹಾಗೂ ಜೆಡಿಎಸ್ ಗದ್ದಲ ತೀವ್ರಗೊಂಡರೂ ಸಚಿವ ಆರ್.ಬಿ ತಿಮ್ಮಾಪೂರ ಸೈಲೆಂಟ್ ಆಗಿದ್ದರು. ಯಾವುದಕ್ಕೂ ಪ್ರತಿಕ್ರಿಯೆ ನೀಡದೇ ಸುಮ್ಮನೇ ಕೂತಿದ್ದು ಅಚ್ಚರಿ ತರಿಸಿತ್ತು.

