ಚಾಮರಾಜನಗರ: ವೀರಸಾವರ್ಕರ್ ಒಬ್ಬ ನಾಸ್ತಿಕ. ದೇವರ ಮೂರ್ತಿ ಜೊತೆ ನಾಸ್ತಿಕನ ಫೋಟೋ ಇಡೋದು ಹಾಸ್ಯಾಸ್ಪದ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿ ಪ್ರಸಾದ್ ಟೀಕಿಸಿದ್ದಾರೆ.
ಗಣೇಶೋತ್ಸವ ದಲ್ಲಿ ವೀರಸಾವರ್ಕರ್ ಫೋಟೋ ಇಡುವ ವಿಚಾರದ ಬಗ್ಗೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಪ್ರತಿಕ್ರಿಯಿಸಿದ ಅವರು, ಸಾವರ್ಕರ್ ಆತ್ಮಚರಿತ್ರೆ ಓದದೆ ಇರುವವರು ಕೇವಲ ರಾಜಕೀಯ ಹಿತಾಸಕ್ತಿಗೋಸ್ಕರ ಆತನ ಫೋಟೋ ಇಡೋದು ಹಾಸ್ಯಾಸ್ಪವಾಗಿದೆ ಎಂದು ಹೇಳಿದ್ದಾರೆ.
ವೀರಸಾವರ್ಕರ್ ಗೆ ದೇವರ ಬಗ್ಗೆ ನಂಬಿಕೆ ಇರಲಿಲ್ಲ. ದೇವರು ದಿಂಡರ ಬಗ್ಗೆ ನಂಬಿಕೆ ಇಲ್ಲದ ವೀರಸಾವರ್ಕರ್ ಈ ದೇಶವನ್ನು ಹಾಳು ಮಾಡಿ ಬಿಟ್ಟರು ಎಂದರು.