ಪುನೀತ್ ರಾಜ್‌ಕುಮಾರ್ ರಸ್ತೆ ಉದ್ಘಾಟನೆ

Public TV
1 Min Read
appu 1

ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ಅಮರವಾಗಿಸುವ ಕೆಲಸ ಅನೇಕ ಕಡೆಗಳಲ್ಲಿ ಕಾರ್ಯರೂಪಕ್ಕೆ ಬಂದಿದೆ. ಬೆಂಗಳೂರಿನಲ್ಲಿ ಮೈಸೂರು ರಸ್ತೆಯಿಂದ ಬನ್ನೇರುಘಟ್ಟದವೆಗಿನ 12 ಕಿಲೋ ಮೀಟರ್ ರಸ್ತೆಗೆ ಪುನೀತ್ ಹೆಸರನ್ನು ಇಡಲಾಗಿದೆ. ಪುನೀತ್‌ ರಾಜ್‌ಕುಮಾರ್‌ ರಸ್ತೆಯನ್ನ ಸಿಎಂ ಬೊಮ್ಮಾಯಿ ಅವರು ಉದ್ಘಾಟನೆ ಮಾಡಿದ್ದಾರೆ.

appu

ಅಭಿಮಾನಿಗಳ ಆಸೆಯಂತೆ ನಾಯಂಡಳ್ಳಿ ಜಂಕ್ಷನ್‌ನಿಂದ ಬನ್ನೇರುಘಟ್ಟವರೆಗಿನ ರಸ್ತೆಗೆ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಹೆಸರನ್ನ (ಫೆ.7)ರಂದು ನಾಮಕರಣ ಮಾಡಲಾಯಿತು. ಈ ವೇಳೆ 1800 ಮಕ್ಕಳ ವಿದ್ಯಾಭ್ಯಾಸದ ಜವಬ್ದಾರಿಯನ್ನ ಸಿಎಂ ಬೊಮ್ಮಾಯಿ ಅವರು ವಹಿಸಿಕೊಳ್ಳೋದಾಗಿ ತಿಳಿಸಿದ್ದಾರೆ.

puneeth

ಪ್ರತಿಯೊಬ್ಬ ಮನುಷ್ಯನಿಗೂ ಹುಟ್ಡು ಸಾವು ಎರಡು ಬರುತ್ತೆ ಬದುಕಿದ್ದಾಗ ಹೇಗಿರುತ್ತಾರೆ ಅನ್ನೋದು ಇಂಪಾರ್ಟೆಂಟ್ ಅಪ್ಪಾಜಿ ಅವ್ರು ಅಭಿಮಾನಿಗಳನ್ನ ಗಳಿಸಿದರು. ಅಪ್ಪು ಅಭಿಮಾನಿಗಳನ್ನ ಗಳಿಸುತ್ತಿದ್ದಾರೆ. ಅಪ್ಪು ಯಾಕೆ ಬಂದಿದ್ದ ಅಂದರೆ ಏನೋ ಹೇಳಬೇಕು ಅಂತ ಬಂದಿದ್ದ. ಇನ್ನ ಜವಾಬ್ದಾರಿ ನಮಗೆ ಬಿಟ್ಟು ಹೋಗಿದ್ದಾನೆ. ನಾನು ನನ್ನ ಸಿನಿಮಾ ನೋಡಿ ನನ್ನ ಮಗನ್ನ ಬೆಳಸಿ ಅಂತ ಹೇಳೋದಿಲ್ಲ. ಅಪ್ಪು ಪವರ್ ಇಲ್ಲೇ ಬಿಟ್ಟು ಸ್ಟಾರ್ ಆಗಿ ಮೇಲೆ ಹೋಗಿದ್ದಾನೆ. ನನ್ನ ಜೀವನದಲ್ಲಿ ಅಪ್ಪು ಆಗಿ ಇನ್ನೋಬ್ಬರಿಗೋಸ್ಕರ ಬದುಕಬೇಕು. ನಾವು ಅಪ್ಪು ಆಗೋಣ, ಎರಡು ದಿನ ಆದ್ರೂ ಅಪ್ಪು ಆಗಿ ಬದುಕೋಣ. ಅ.29ರಂದು  ಅಪ್ಪು ಸತ್ತಿದ್ದ ದಿನ ಅಲ್ಲ, ಅವನು ಹುಟ್ಟಿದ್ದ ದಿನ ಅವತ್ತು ಒಂದು ಶಕ್ತಿ ಹುಟ್ಟಿದ ದಿನ ಎಂದು ಅಪ್ಪು ಬಗ್ಗೆ ಈ ವೇಳೆ ರಾಘವೇಂದ್ರ ರಾಜ್‌ಕುಮಾರ್ ಅವರು ಮಾತನಾಡಿದ್ದಾರೆ.

cm 2

ಪದ್ಮನಾಭನಗರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಅವರ ಜೊತೆ ಅಶ್ವಿನಿ ಪುನೀತ್, ಅಭಿಷೇಕ್ ಅಂಬರೀಶ್, ದೊಡ್ಡ ರಂಗೇಗೌಡ, ರಾಕ್‌ಲೈನ್ ವೆಂಕಟೇಶ್, ಆರ್,ಅಶೋಕ್, ತೇಜಸ್ವಿ ಸೂರ್ಯ ಸೇರಿದಂತೆ ಹಲವರು ಸಾಕ್ಷಿಯಾದರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *