Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: PublicTV Explainer: ಕಾಶಿ ವಿಶ್ವನಾಥ ದೇವಾಲಯದಿಂದ ಜ್ಞಾನವಾಪಿ ಮಸೀದಿ ವರೆಗೆ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Explainer | PublicTV Explainer: ಕಾಶಿ ವಿಶ್ವನಾಥ ದೇವಾಲಯದಿಂದ ಜ್ಞಾನವಾಪಿ ಮಸೀದಿ ವರೆಗೆ!

Explainer

PublicTV Explainer: ಕಾಶಿ ವಿಶ್ವನಾಥ ದೇವಾಲಯದಿಂದ ಜ್ಞಾನವಾಪಿ ಮಸೀದಿ ವರೆಗೆ!

Public TV
Last updated: February 9, 2024 8:03 pm
Public TV
Share
5 Min Read
gyanvapi mosque hindu temple 8
SHARE

– ಮಸೀದಿ ಜಾಗದಲ್ಲಿ ಸಿಕ್ಕ ಹಿಂದೂ ದೇವಾಲಯದ ಕುರುಹುಗಳೇನು?

ರಾಮಮಂದಿರ (Ram Mandir) ಆಯ್ತು.. ದೇವಾಲಯದ ವಿಚಾರದಲ್ಲಿ ಈಗ ಹಿಂದೂಗಳಿಗೆ ಮತ್ತೊಂದು ಜಯ ಸಿಕ್ಕಿದೆ. ನೂರಾರು ವರ್ಷಗಳ ಕನಸು ನನಸಾಗಿದೆ. ದಶಕಗಳ ಹೋರಾಟಕ್ಕೆ ಫಲ ಸಿಕ್ಕಿದೆ. ಹೌದು, ಐತಿಹಾಸಿಕ ಹಿಂದೂ ದೇವಾಲಯ ಕೆಡವಿ, ಮಸೀದಿ ನಿರ್ಮಿಸಿದ್ದಾರೆ ಎನ್ನಲಾದ ವಿವಾದಿತ ಸ್ಥಳ ಮತ್ತೆ ಹಿಂದೂಗಳ ಕೈವಶವಾಗಿದೆ.

gyanvapi mosque hindu temple 1

ಜ್ಞಾನವಾಪಿ ಮಸೀದಿ (Gyanvapi Mosque) ಆವರಣದ ನೆಲಮಾಳಿಗೆಯಲ್ಲಿ ಹಿಂದೂಗಳ ಪೂಜೆಗೆ ಅವಕಾಶ ನೀಡಿ ಈಚೆಗೆ ವಾರಣಾಸಿ ಜಿಲ್ಲಾ ನ್ಯಾಯಾಲಯ ಮಹತ್ವದ ತೀರ್ಪು ನೀಡಿತು. ಈ ಸುದ್ದಿಯನ್ನು ಕೇಳುತ್ತಿದ್ದಂತೆಯೇ ಸಮಸ್ತ ಹಿಂದೂಗಳು ಆನಂದಭಾಷ್ಪ ಸುರಿಸಿದರು. ಆದೇಶ ಹೊರಬಿದ್ದ ಬೆನ್ನಲ್ಲೇ ಜ್ಞಾನವಾಪಿಯಲ್ಲಿ ಹಿಂದೂ ಅರ್ಚಕರು ವಿಗ್ರಹಗಳಿಗೆ ಪೂಜೆ ಸಲ್ಲಿಸಿದರು. ‘ಹರಹರ ಮಹದೇವ’ ಘೋಷಣೆಗಳು ಮೊಳಗಿದವು. ಇದನ್ನೂ ಓದಿ: ಭಾರೀ ಸಂಖ್ಯೆಯಲ್ಲಿ ಜ್ಞಾನವಾಪಿ ಮಸೀದಿಗೆ ಆಗಮಿಸಿ ನಮಾಜ್‌ ಮಾಡಿದ ಮುಸ್ಲಿಮರು

gyanvapi mosque hindu temple 2

ರಾಮಮಂದಿರದಂತೆ ಜ್ಞಾನವಾಪಿ ವಿಚಾರದಲ್ಲೂ ನ್ಯಾಯ ಸಿಕ್ಕಿರುವುದು ಹಿಂದೂಗಳ ಖುಷಿಗೆ ಪಾರವೇ ಇಲ್ಲ ಎನ್ನುವಂತಾಗಿದೆ. ಅಷ್ಟಕ್ಕೂ ಏನಿದು ಜ್ಞಾನವಾಪಿ ಮಸೀದಿ ಪ್ರಕರಣ? ಇತಿಹಾಸವೇನು? ವಿವಾದಕ್ಕೆ ಹಿನ್ನೆಲೆ, ಕಾರಣವೇನು?

gyanvapi mosque hindu temple 3

ಜ್ಞಾನವಾಪಿ ಮಸೀದಿ ಎಲ್ಲಿದೆ?
ಜ್ಞಾನವಾಪಿ ಮಸೀದಿಯು ಭಾರತದ ಉತ್ತರ ಪ್ರದೇಶದ ವಾರಣಾಸಿಯಲ್ಲಿದೆ. ಈ ಸ್ಥಳದಲ್ಲಿ ಹಿಂದೂ ದೇವರು ಶಿವನಿಗೆ ಮೀಸಲಾದ ವಿಶ್ವೇಶ್ವರ ದೇವಾಲಯವಿತ್ತು. ಇದನ್ನು 1669 ರಲ್ಲಿ ಮೊಘಲ್ ದೊರೆ ಔರಂಗಜೇಬನು ಕೆಡವಿಸಿದ. ದೇವಾಲಯ ಕೆಡವಿದ ಒಂದು ದಶಕದ ನಂತರ, ಅಂದರೆ 1978 ರಲ್ಲಿ ಮಸೀದಿ ನಿರ್ಮಿಸಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಜ್ಞಾನವಾಪಿಯಲ್ಲಿ ಪೂಜೆಗೆ ತಡೆ ನೀಡಲ್ಲ- ಮುಸ್ಲಿಂ ಸಮಿತಿ ಮನವಿ ತಿರಸ್ಕರಿಸಿದ ಹೈಕೋರ್ಟ್‌

gyanvapi mosque hindu temple 9 2

ಮಸೀದಿ ಜಾಗದಲ್ಲಿದ್ದ ದೇವಾಲಯ ಯಾವುದು?
ಈ ಸ್ಥಳದಲ್ಲಿ ಹಿಂದೂ ದೇವರಾದ ಶಿವನಿಗೆ ಮೀಸಲಾದ ವಿಶ್ವೇಶ್ವರ (ಕಾಶಿ ವಿಶ್ವನಾಥ ದೇವಾಲಯ) ದೇವಾಲಯವಿತ್ತು. ಇದನ್ನು 16ನೇ ಶತಮಾನದ ಉತ್ತರಾರ್ಧದಲ್ಲಿ ಮಹಾರಾಷ್ಟ್ರದ ಬನಾರಸ್‌ನ ಪ್ರಖ್ಯಾತ ಬ್ರಾಹ್ಮಣ ವಿದ್ವಾಂಸ ನಾರಾಯಣ ಭಟ್ಟರ ಜೊತೆ ಅಕ್ಬರನ ಪ್ರಧಾನ ಆಸ್ಥಾನಿಕ ಮತ್ತು ಮಂತ್ರಿ ತೋಡರ್ ಮಲ್ಲ ನಿರ್ಮಿಸಿದರು. ದೇವಾಲಯವು ಬನಾರಸ್ ಅನ್ನು ಬ್ರಾಹ್ಮಣರ ಸಭೆಯ ಕೇಂದ್ರವಾಗಿ ಸ್ಥಾಪಿಸಲು ಕೊಡುಗೆ ನೀಡಿತ್ತು. ಉಪಖಂಡದಾದ್ಯಂತ ವಿದ್ವಾಂಸರನ್ನು ಸೆಳೆದಿತ್ತು.

ಮಂದಿರದ ಮೇಲೆ ಮಸೀದಿ?
1669 ಹಿಂದೂ ದೇವಾಲಯವನ್ನು ಮೊಘಲ್ ದೊರೆ ಔರಂಗಜೇಬ್ ಕೆಡವಲು ಆದೇಶಿಸಿದನು. ಜ್ಞಾನವಾಪಿ ಮಂದಿರದ ಒಂದು ಭಾಗ ಕೆಡವಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ. ದೇವಾಲಯದ ಸ್ತಂಭವನ್ನು ಮಸೀದಿಯ ಅಂಗಳವಾಗಿ ಉಳಿಯಲು ಹಾಗೆಯೇ ಬಿಡಲಾಯಿತು. ದಕ್ಷಿಣ ಗೋಡೆ, ಅದರ ಕಮಾನುಗಳು, ಬಾಹ್ಯ ಅಚ್ಚುಗಳು ಕಿಬ್ಲಾ ಗೋಡೆಯಾಗಿ ಮಾರ್ಪಟ್ಟಿತು. ಆವರಣದಲ್ಲಿರುವ ಇತರ ಕಟ್ಟಡಗಳನ್ನು ಹಾಗೆಯೇ ಉಳಿಸಲಾಗಿತ್ತು. ನಂತರ ಇದು ವಿವಾದಿತ ಸ್ಥಳವಾಗಿ ಗುರುತಿಸಿಕೊಂಡಿತು ಎನ್ನಲಾಗಿದೆ. ಇದನ್ನೂ ಓದಿ: ಶುಕ್ರವಾರ ಅಂಗಡಿಗಳನ್ನು ಬಂದ್‌ ಮಾಡಿ- ಮುಸ್ಲಿಮರಲ್ಲಿ ಜ್ಞಾನವಾಪಿ ಮಸೀದಿ ಸಮಿತಿ ಮನವಿ

gyanvapi mosque hindu temple 5

ಮೊದಲ ಗಲಭೆ ಆಗಿದ್ಯಾವಾಗ?
ಬ್ರಿಟಿಷರ ಆಡಳಿತದ ಅವಧಿಯಲ್ಲಿ (1809) ಹಿಂದೂ-ಮುಸ್ಲಿಮರ ನಡುವೆ ಮೊದಲ ಗಲಭೆ ನಡೆಯಿತು. ಜ್ಞಾನವಾಪಿ ಮಸೀದಿ ಮತ್ತು ಕಾಶಿ ವಿಶ್ವನಾಥ ದೇವಾಲಯದ ನಡುವಿನ ತಟಸ್ಥ ಜಾಗದಲ್ಲಿ ಮಂದಿರ ನಿರ್ಮಿಸಲು ಹಿಂದೂಗಳು ಮುಂದಾದರು. ಇದು ಇದು ಉದ್ವಿಗ್ನತೆಗೆ ಕಾರಣವಾಯಿತು. ಆ ಸಂದರ್ಭದಲ್ಲಿ ಹೋಳಿ ಹಬ್ಬ ಮತ್ತು ಮೊಹರಂ ಹಬ್ಬವೂ ಒಂದೇ ದಿನ ಬಿದ್ದಿತ್ತು. ಸಂಭ್ರಮದ ವೇಳೆ ಎರಡೂ ಕೋಮಿನವರು ಮುಖಾಮುಖಿಯಾಗಿ ಗಲಭೆ ಉಂಟಾಯಿತು. ನಂತರ ಅದನ್ನು ಬ್ರಿಟಿಷ್ ಆಡಳಿತವು ಶಮನಗೊಳಿಸಿತು. ಈ ಗಲಭೆಯಿಂದ ಹಲವಾರು ಸಾವು-ನೋವುಗಳಾಗಿವೆ ಎಂದು ವರದಿಯಾಗಿದೆ. ಮಂದಿರಕ್ಕಾಗಿ ಹಿಂದೂಗಳ ಹೋರಾಟ ಮುಂದುವರಿಯಿತು.

ಜೇಮ್ಸ್ ಪ್ರಿನ್ಸೆಪ್ ಚಿತ್ರಕಲೆ ಏನು ಹೇಳುತ್ತೆ?
ಜ್ಞಾನವಾಪಿ ಮಸೀದಿಯನ್ನು ಬನಾರಸ್‌ನ ವಿಶ್ವೇಶ್ವರ ದೇವಸ್ಥಾನ ಎಂದು ಜೇಮ್ಸ್ ಪ್ರಿನ್ಸೆಪ್ ಎನ್ನುವವರು ಚಿತ್ರಿಸಿದ್ದಾರೆ. ಅಲ್ಲಿ ಕೆಡವಲಾದ ದೇವಾಲಯದ ಮೂಲ ಗೋಡೆ ಇಂದಿಗೂ ಮಸೀದಿಯಲ್ಲಿದೆ. ಪ್ರಿನ್ಸೆಪ್ ಅವರ 1834 ರ ಮಸೀದಿಯ ರೇಖಾಚಿತ್ರದಲ್ಲಿ ದೇವಾಲಯದ ಅರೆ ಕೆಡವಲಾದ ಗೋಡೆ, ಕಂಬಗಳು ಮತ್ತು ಅವಶೇಷಗಳು ಗೋಚರಿಸುತ್ತವೆ.

gyanvapi mosque hindu temple 4

290 ಹೋರಾಟಗಾರರಿಗೆ ಜೈಲು ಶಿಕ್ಷೆ
1959 ರಲ್ಲಿ ಶಿವರಾತ್ರಿ ಸಂದರ್ಭದಲ್ಲಿ ಹಿಂದೂ ಮಹಾಸಭಾವು ಮಸೀದಿ ಮಂಟಪದಲ್ಲಿ ರುದ್ರಾಭಿಷೇಕ ಸಮಾರಂಭ ನಡೆಸಿತು. ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘನೆ ಆರೋಪ ಹೊರಿಸಿ ಇಬ್ಬರು ಕಾರ್ಮಿಕರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಲಾಯಿತು. ಇದು ಮುಂದಿನ ಕೆಲವು ತಿಂಗಳು ಮಸೀದಿ ಮಂಟಪದಲ್ಲಿ ಆಂದೋಲನ ಸೃಷ್ಟಿಗೆ ಕಾರಣವಾಯಿತು. ದೇವಾಲಯ ಮರುಸ್ಥಾಪನೆಗೆ ಒತ್ತಾಯ ಕೇಳಿಬಂತು. ಹೋರಾಟದಲ್ಲಿ ಭಾಗಿಯಾಗಿದ್ದ 290 ಹಿಂದೂಗಳು ಜೈಲುವಾಸ ಅನುಭವಿಸಿದರು. ಈ ಬೆಳವಣಿಗೆ ರಾಷ್ಟ್ರವ್ಯಾಪಿ ಅಭಿಯಾನಕ್ಕೆ ನಾಂದಿ ಹಾಡಿತು. ಇದನ್ನೂ ಓದಿ: ಪೂಜೆಗೆ ಅವಕಾಶ ನೀಡಬೇಡಿ : ಸುಪ್ರೀಂ ಮೊರೆ ಹೋಗಿದ್ದ ಜ್ಞಾನವಾಪಿ ಮಸೀದಿ ಸಮಿತಿ – ತಡ ರಾತ್ರಿ ನಡೆದಿದ್ದು ಏನು?

ಮಸೀದಿ ವಿವಾದ ಕೋರ್ಟ್ ಮೆಟ್ಟಿಲೇರಿದ್ದು ಯಾವಾಗ?
ಜ್ಞಾನವಾಪಿ ಮಸೀದಿ ವಿವಾದ 1991 ರಲ್ಲಿ ವಾರಣಾಸಿ ಕೋರ್ಟ್ ಮೆಟ್ಟಿಲೇರಿತು. ಸ್ಥಳೀಯ ಅರ್ಚಕರಾಗಿದ್ದ ಅರ್ಜಿದಾರರ ಗುಂಪು ನ್ಯಾಯಾಲಯಕ್ಕೆ ಈ ಪ್ರಕರಣದ ಮೊದಲ ಅರ್ಜಿ ಸಲ್ಲಿಸಿತು. ಅರ್ಜಿಯನ್ನು ಸ್ವಯಂಭು ಜೋತಿರ್ಲಿಂಗ ಭಗವಾನ್ ವಿಶ್ವೇಶ್ವರ ಎಂಬವರು, ಕೋರ್ಟ್ ಮುಂದೆ 3 ಬೇಡಿಕೆಗಳನ್ನು ಇಟ್ಟರು. ಜ್ಞಾನವಾಪಿ ಸಂಕೀರ್ಣವನ್ನು ಕಾಶಿ ದೇವಾಲಯದ ಭಾಗವಾಗಿ ಘೋಷಿಸುವುದು, ಈ ಪ್ರದೇಶದಿಂದ ಮುಸ್ಲಿಮರನ್ನು ದೂರ ಇಡುವುದು, ವಿವಾದಿತ ಕಟ್ಟಡವನ್ನು ಧ್ವಂಸಗೊಳಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು.

gyanvapi mosque hindu temple 4

ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಮಾಡಿದ್ದೇನು?
ಮಸೀದಿ ಸಮಿತಿಯು 1998 ರಲ್ಲಿ ಅಲಹಾಬಾದ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತು. ಮಂದಿರ-ಮಸೀದಿ ಭೂ ವಿವಾದವನ್ನು ಸಿವಿಲ್ ನ್ಯಾಯಾಲಯವು ನ್ಯಾಯಾಧಿಕರಣ ಮಾಡಲಾಗುವುದಿಲ್ಲ ಎಂದು ಸಮಿತಿ ಪ್ರತಿಪಾದಿಸಿತು. 22 ವರ್ಷಗಳ ಕಾಲ ಕೆಳ ನ್ಯಾಯಾಲಯದಲ್ಲಿ ವಿಚಾರಣೆಗೆ ಅಲಹಾಬಾದ್ ಹೈಕೋರ್ಟ್ ತಡೆ ನೀಡಿತು.

gyanvapi mosque hindu temple 9 1

ಮುಂದೆ ಏನಾಯ್ತು?
ವಿವಾದಿತ ಪ್ರದೇಶದ ಪುರಾತತ್ವ ಸಮೀಕ್ಷೆಗೆ ಒತ್ತಾಯಿಸಿ 2019 ರಲ್ಲಿ ರಸ್ತೋಗಿ ಎಂಬ ವ್ಯಕ್ತಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಇದಕ್ಕೆ ಮಸೀದಿ ಸಮಿತಿ ವಿರೋಧ ವ್ಯಕ್ತಪಡಿಸಿ ಕೋರ್ಟ್ ಮೆಟ್ಟಿಲೇರಿತು. ಕೋರ್ಟ್ನಲ್ಲಿ ಎರಡೂ ಕಡೆಯಿಂದ ಸಾಕಷ್ಟು ಪೈಪೋಟಿ ನಡೆಯಿತು. ಕೊನೆಗೆ 2022 ರ ಏಪ್ರಿಲ್‌ನಲ್ಲಿ 2021 ರ ಅರ್ಜಿ ಆಧರಿಸಿ, ಜ್ಞಾನವಾಪಿ ಸಂಕೀರ್ಣದ ವೀಡಿಯೋಗ್ರಫಿ ಸಮೀಕ್ಷೆಗೆ ವಾರಣಾಸಿ ನ್ಯಾಯಾಲಯ ಆದೇಶ ಹೊರಡಿಸಿತು. ಇದನ್ನೂ ಓದಿ: ಜ್ಞಾನವಾಪಿಯಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಮಸೀದಿ ಸಮಿತಿ

gyanvapi mosque hindu temple 7

ಎಎಸ್‌ಐ ಸಮೀಕ್ಷೆ ವರದಿಯಲ್ಲೇನಿದೆ?
ನ್ಯಾಯಾಲಯದ ಆದೇಶದಂತೆ ಜ್ಞಾನವಾಪಿ ಮಸೀದಿ ಸಂಕೀರ್ಣ ಇರುವ ಜಾಗದ ವೈಜ್ಞಾನಿಕ ಸಮೀಕ್ಷೆ ನಡೆಸಿದ ಎಎಸ್‌ಐ, ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಕಳೆದ ವರ್ಷ ಡಿ.18 ರಂದು ಸಲ್ಲಿಸಿತು. ಸುಮಾರು 839 ಪುಟಗಳ ವರದಿಯಲ್ಲಿ ಸಮೀಕ್ಷೆಯ ಅಂಶಗಳು ದಾಖಲಾಗಿವೆ. ವರದಿ ಕೂಡ ಬಹಿರಂಗಗೊಂಡಿದೆ. ಹಿಂದೂ ದೇವಾಲಯದ ಮೇಲೆ ಜ್ಞಾನವಾಪಿ ಮಸೀದಿ ಇರುವುದು ವರದಿಯಲ್ಲಿ ಉಲ್ಲೇಖವಾಗಿದೆ. ಅಲ್ಲಿ ಕನ್ನಡ, ತೆಲುಗು, ದೇವನಾಗರಿ ಲಿಪಿಯ ಶಾಸನಗಳು ಪತ್ತೆಯಾಗಿವೆ. ಜೊತೆಗೆ ಹಿಂದೂ ಧಾರ್ಮಿಕ ಕುರುಹುಗಳು, ಹಿಂದೂ ಮೂರ್ತಿಗಳು ಪತ್ತೆಯಾಗಿವೆ.

gyanvapi mosque hindu temple 6

ಕನ್ನಡ ಶಾಸನ ಪತ್ತೆ?
ಜ್ಞಾನವಾಪಿ ಮಸೀದಿ ಇರುವ ಜಾಗದಲ್ಲಿ ಪ್ರಾಚೀನ ಕಾಲದ ಶಾಸನಗಳು ಪತ್ತೆಯಾಗಿವೆ. ಅದರಲ್ಲಿ ಕನ್ನಡದ ಶಾಸನವೂ ಇದೆ. ಶಾಸನದಲ್ಲಿ ‘ದೊಡ್ಡರಸಯ್ಯನ ನರಸಂಣನಭಿಂನಹ’ (ದೊಡ್ಡರಸಯ್ಯನ ನರಸಿಂಹನ ಭಿನ್ನಹ) ಎಂದು ಕನ್ನಡದಲ್ಲಿ ಬರಹವಿರುವ ಸಾಕ್ಷಿ ಎಎಸ್‌ಐ ವರದಿಯಲ್ಲಿದೆ. ಇದು ವಿಜಯನಗರದ ಪಾಳಯಗಾರರ ಅಥವಾ ಅಧಿಕಾರಿಗಳ ಕಾಲದಲ್ಲಿ ನೀಡಿರುವ ಸೇವಾರ್ಥ ಇರಬಹುದು. ಸುಮಾರು 16ನೇ ಶತಮಾನದ್ದು. ಸಾಮಾನ್ಯವಾಗಿ ದೇವರಿಗೆ ಸೇವಾರ್ಥವನ್ನು ನೀಡುವ ಸಮಯದಲ್ಲಿ ಈ ರೀತಿ ಕಲ್ಲಿನಲ್ಲಿ ಸೇವಾರ್ಥಿಯ ಹೆಸರನ್ನು ಹಾಕಿರುತ್ತಾರೆ ಎಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ 31 ವರ್ಷದ ಬಳಿಕ ವಿಗ್ರಹಗಳಿಗೆ ಪೂಜೆ

TAGGED:Allahabad High CourtGyanvapi mosqueHindu Temple VaranasiVaranasiVaranasi courtಜ್ಞಾನವಾಪಿ ಮಸೀದಿವಾರಣಾಸಿ
Share This Article
Facebook Whatsapp Whatsapp Telegram

Cinema news

Rashmika Mandanna Vijay Devarakonda 1
ನಮ್ಮದು ‘ವಿರೋಶ್‌’ ಜೋಡಿ, ಮದುವೆಗೆ ಬನ್ನಿ..: ಆಮಂತ್ರಣ ನೀಡಿದ ರಶ್ಮಿಕಾ ಮಂದಣ್ಣ
Cinema Latest Top Stories
Ranveer Singh Rishab Shetty Kantara
ದೈವನಿಂದನೆ ಕೇಸಲ್ಲಿ ನಟ ರಣವೀರ್ ಸಿಂಗ್‌ಗೆ ನೋಟಿಸ್
Bollywood Cinema Latest Top Stories
rishab shetty anjanadri hills
ಅಂಜನಾದ್ರಿ ಬೆಟ್ಟಕ್ಕೆ ನಟ ರಿಷಬ್‌ ಶೆಟ್ಟಿ ದಂಪತಿ ಭೇಟಿ‌
Cinema Koppal Latest Sandalwood Top Stories
Kavya Gowfa 2
ಚಪ್ಪಲಿ ಎಸೆದಿದ್ದು, ಹಲ್ಲೆ ಮಾಡಿದ್ದು ಓರಗಿತ್ತಿ ಪ್ರೇಮಾ – ಸಾಕ್ಷ್ಯ ಬಯಲು ಮಾಡಿದ ನಟಿ ಕಾವ್ಯ ಗೌಡ
Cinema Latest Sandalwood Top Stories

You Might Also Like

Rahul Gandhi Gym Trainer Mohammad Deepak
Latest

ನಿಮ್ಮ ಜಿಮ್‌ಗೆ ಸೇರುತ್ತೇನೆ: ಜಿಮ್ ಟ್ರೈನರ್ ಮೊಹಮ್ಮದ್ ದೀಪಕ್ ಭೇಟಿಯಾದ ರಾಹುಲ್ ಗಾಂಧಿ

Public TV
By Public TV
5 seconds ago
Indias Big Decolonisation Move Chakravarti Rajagopalachari replaces Lutyens at Rashtrapati Bhavan Delhi 1
Latest

ವಸಾಹತುಶಾಹಿ ವಿರುದ್ಧ ಕೇಂದ್ರದ ಸಮರ – ಲುಟ್ಯೆನ್ಸ್ ಪ್ರತಿಮೆ ತೆಗೆದು ರಾಜಗೋಪಾಲಾಚಾರಿ ಪುತ್ಥಳಿ ಅನಾವರಣ

Public TV
By Public TV
39 minutes ago
School 3
Bengaluru City

ಮಿಷನ್ ಪ್ರಕೃತಿ | ಕುಂದಾಪುರ, ಚಾ. ನಗರ ಸೇರಿ ರಾಜ್ಯದ 10 ಶಾಲೆಗಳಿಗೆ ʻಅತ್ಯುತ್ತಮ ಶಾಲೆʼ ಪ್ರಶಸ್ತಿ‌

Public TV
By Public TV
2 hours ago
opd hospital Karnataka
Latest

ಮಾ.11 ರಿಂದ ಒಪಿಡಿ ಸೇವೆ ಬಂದ್‌ – ಸರ್ಕಾರದ ವಿರುದ್ಧ ಸಿಡಿದ ವೈದ್ಯರು

Public TV
By Public TV
2 hours ago
Chandru Lamani
Bengaluru City

ಲಂಚ ಪಡೆಯುವಾಗ ಸಿಕ್ಕಿಬಿದ್ದ ಚಂದ್ರು ಲಮಾಣಿ – ಶಾಸಕರ ಉಚ್ಚಾಟನೆಗೆ ಬಿಜೆಪಿ ಚಿಂತನೆ

Public TV
By Public TV
2 hours ago
Iqbal Hussain
Districts

ಸಚಿವರ ಬದಲಾವಣೆಗಾಗಿ ಹೈಕಮಾಂಡ್‌ಗೆ ಪತ್ರ ಬರೆದಿರೋದು ನಿಜ: ಇಕ್ಬಾಲ್ ಹುಸೇನ್

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?