Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅಪ್ಪ ಇಲ್ಲ, ಅಮ್ಮನಿಗೆ ಆರೋಗ್ಯವಿಲ್ಲ, ಇರೋಕೆ ಮನೆ ಇಲ್ಲ- 5 ಮಕ್ಕಳ ಕುಟುಂಬಕ್ಕೆ ಬೇಕಿದೆ ಸಹಾಯ
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
BELAKU

ಅಪ್ಪ ಇಲ್ಲ, ಅಮ್ಮನಿಗೆ ಆರೋಗ್ಯವಿಲ್ಲ, ಇರೋಕೆ ಮನೆ ಇಲ್ಲ- 5 ಮಕ್ಕಳ ಕುಟುಂಬಕ್ಕೆ ಬೇಕಿದೆ ಸಹಾಯ

Public TV
Last updated: March 5, 2017 3:51 pm
Public TV
Share
2 Min Read
BELAKU CKM 01
SHARE

ಚಿಕ್ಕಮಗಳೂರು: ಜೀವನದ ಮೇಲೆ ವಿಧಿ ಸವಾರಿ ಮಾಡ ಹೊರಟ್ರೆ ಬದುಕು ಮೂರಾಬಟ್ಟೆಯಾಗಿ ಬೀದಿಗೆ ಬಂದು ನಿಲ್ಲೋದು ಗ್ಯಾರಂಟಿ. ಅಂತಹ ವಿಧಿಯಾಟದ ಮುಂದೆ ಸತ್ತು ಬದುಕಿದವರು ಉಂಟು. ಬದುಕಿ ಪ್ರತಿದಿನ ಸಾಯ್ತಿರೋರು ಉಂಟು. ವಿಧಿಯ ಕೆಂಗಣ್ಣಿಗೆ ಗುರಿಯಾದವರ ಜೀವನ ಎಷ್ಟು ನಿಕೃಷ್ಟವಾಗಿರುತ್ತೆ ಅನ್ನೋದಕ್ಕೆ ನೂರಾರು ನಿದರ್ಶನಗಳಿವೆ. ಆದ್ರೆ, ಪ್ರಪಂಚದ ಅರಿವೇ ಇಲ್ಲದ ಈ ಮಕ್ಕಳು ಅದ್ಯಾವ ಜನ್ಮದಲ್ಲಿ ಏನ್ ತಪ್ ಮಾಡಿದ್ರೋ ಗೊತ್ತಿಲ್ಲ. ಎಳೆ ವಯಸ್ಸಿಗೆ ಸಂಸಾರದ ನೊಗ ಹೋರೋ ಸ್ಥಿತಿ ಬಂದಿದೆ. ಅಪ್ಪ ಇಲ್ಲ, ಅಮ್ಮ ಇದ್ರೂ ಆರೋಗ್ಯವಿಲ್ಲ, ಇರೋಕೆ ಮನೆ ಇಲ್ಲ, ತಿನ್ನೋಕೆ ಅನ್ನವಿಲ್ಲ. ಹೇಳ್ತಾ ಹೋದ್ರೆ ಇವ್ರ ನೋವು ನೂರಾರು. ಈ ಕುಟುಂಬದ ಸ್ಥಿತಿ ಕೇಳ್ದೋರ ಕಣ್ಣಲ್ಲಿ ನೀರು ಬರತ್ತೆ.

BELAKU CKM 03

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಂಕಸಾಲೆಯ ಗ್ರಾಮದ ಕುಟುಂಬವೊಂದು ಇದೀಗ ನಮಗೆ ಬದುಕೋ ಭಾಗ್ಯವಿಲ್ಲವೇನೋ ಎಂಬಂತೆ ಕುಳಿತಿದೆ. 15 ವರ್ಷಗಳಿಂದ ಕಾಫಿತೋಟದಲ್ಲಿ ಕೂಲಿ ಮಾಡ್ತಾ ಬದುಕ್ತಿದ್ದ ಈ ಕುಟುಂಬದ ಯಜಮಾನ ಸಂಸಾರದಲ್ಲಿನ ನೋವುಗಳಿಂದ ಬೇಸತ್ತು ಎರಡೂವರೆ ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಡ ತೀರಿಕೊಂಡ ಮೇಲೆ ಐವರು ಮಕ್ಕಳನ್ನ ಸಾಕೋಕೆ ತಾಯಿ ಸುಮಿತ್ರ ಹೋರಾಡ್ತಿರೋ ಪರಿ ಅಷ್ಟಿಷ್ಟಲ್ಲ. ಆದ್ರೆ, ಪೌಷ್ಟಿಕ ಆಹಾರದ ಕೊರತೆಯಿಂದ ತಾಯಿಗೂ ನಾನಾ ಕಾಯಿಲೆ. ಕೆಲಸ ಮಾಡೋಕೆ ಆಗ್ತಿಲ್ಲ. ಒಂದು ಗಂಟೆ ಕೆಲಸ ಮಾಡಿದ್ರೆ ತೀವ್ರ ಸುಸ್ತು. ಆದ್ರೆ ಸಂಜೆ ಮಕ್ಕಳ ಹೊಟ್ಟೆ ತುಂಬಿಸೋಕೆ ಕೆಲಸ ತೀರಾ ಅನಿವಾರ್ಯ. ವಾರದಲ್ಲಿ ಎರಡ್ಮೂರು ದಿನ ಮಾತ್ರ ಕೆಲಸ ಮಾಡೋಕಷ್ಟೆ ತಾಯಿ ಶಕ್ತಳು. ಮಕ್ಕಳು ಇನ್ನೂ ಚಿಕ್ಕವು. ಕೂಲಿಗೆ ಹೋದ್ರೆ ನೋಡಿಕೊಳ್ಳೋರು ಯಾರಿಲ್ಲ. ಹಾಗಂತ ಮನೆಯಲ್ಲಿ ಕೂರುವಂತಿಲ್ಲ. ಕಷ್ಟವೋ-ಸುಖವೋ ಪರಿಸ್ಥಿತಿ ಎಂತಹದ್ದಿದ್ರೂ ಕೆಲಸಕ್ಕೆ ಹೋಗಲೇಬೇಕು. ಇರೋಕೆ ಮನೆಯೂ ಇಲ್ಲ. ಸದ್ಯಕ್ಕೆ ಕಾಫಿತೋಟದ ಲೈನ್‍ಗಳಲ್ಲಿನ ಪಾಳು ಬಿದ್ದ ಮನೆಯಲ್ಲಿ ಬದುಕ್ತಿದ್ದಾರೆ. ನಾಲ್ಕು ಜನರಂತೆ ಬದುಕೋಕೆ ಆಶ್ರಯ ಯೋಜನೆ ಮನೆಗಾಗಿ ಎದುರು ನೋಡ್ತಿದ್ದಾರೆ.

BELAKU CKM 02

ಇವರಿಗೆ ಆಶ್ರಯ ಯೋಜನೆಯಡಿ ಸೈಟ್ ಇದೆ. ಆದ್ರೆ ಅಧಿಕಾರಿಗಳು ಮನೆ ಕಟ್ಟಿಸಿಕೊಡ್ತೀವಿ ಅಂತಾನೇ ದಿನ ದೂಡ್ತಿದ್ದಾರೆ. ದುಡಿದ ದುಡ್ಡು ಜೀವನಕ್ಕೆ ಸಾಕಾಗಾದ ಕಾರಣ ಮನೆಯನ್ನೂ ಕಟ್ಟಿಕೊಳ್ಳಲಿಲ್ಲ. 2007ರಲ್ಲಿ ಇವರಿಗೆ ರೇಷನ್ ಕಾರ್ಡ್ ಇತ್ತು. ಆದ್ರೆ ಯಾವ ಕಾರಣಕ್ಕೆಂದು ಗೊತ್ತಿಲ್ಲ. ಅದನ್ನ ಲ್ಯಾಪ್ಸ್ ಮಾಡಿದ್ದಾರೆ. ಆದ್ದರಿಂದ ಮತ್ತೊಮ್ಮೆ ರೇಷನ್ ಕಾರ್ಡ್‍ಗಾಗಿ ಅರ್ಜಿ ಹಾಕಿದ್ದಾರೆ. ಬದುಕಿಗೆ ಬೆನ್ನೆಲುಬಾಗಿದ್ದ ತಂದೆ ತೀರಿಕೊಂಡ ಮೇಲೆ ತಾಯಿ ಐವರು ಮಕ್ಕಳನ್ನ ಸಾಕೋಕೆ ಪಡ್ತಿರೋ ಕಷ್ಟದಿಂದ 10ನೇ ತರಗತಿ ಹಾಗೂ ಎಂಟನೇ ತರಗತಿ ಓದುತ್ತಿದ್ದ ಇಬ್ಬರು ಮಕ್ಕಳು ಅರ್ಧಕ್ಕೆ ಶಾಲೆ ಬಿಟ್ಟು ಕೂಲಿ ಮಾಡ್ತಿದ್ದಾರೆ. ಹಾಗಾಗಿ ಈ ಕುಟುಂಬ ನಮಗೆ ಒಂದು ರೇಷನ್ ಕಾರ್ಡ್, ಇರೋಕೊಂದು ಮನೆ ಜೊತೆ ಕೊನೆಯ ಇಬ್ಬರು ಮಕ್ಕಳಿಗೆ ಹಾಸ್ಟೆಲ್‍ನಲ್ಲಿ ಓದೋಕೆ ಅನುವು ಮಾಡ್ಕೊಡಿ ಎಂದು ಬೇಡಿಕೊಳ್ತಿದ್ದಾರೆ.

ಒಟ್ಟಾರೆ, ಈ ಕುಟುಂಬವನ್ನ ನೋಡಿದ್ರೆ ಜೀವನ ಎಷ್ಟು ದುಸ್ತರದಲ್ಲಿದೆ ಅನ್ನಿಸುತ್ತೆ. ಆದ್ರೆ ಇಂತಹ ಕಷ್ಟದ ಸ್ಥಿತಿಯಲ್ಲೂ ಒಬ್ಬಂಟಿ ಹೆಂಗಸು ಮಗಳಿಗಾಗಿ ಪಡ್ತಿರೋ ಪಾಡು, ಕಷ್ಟಗಳನ್ನ ಮೆಟ್ಟಿ ನಿಲ್ತಿರೋ ಈಕೆಯ ಧೈರ್ಯಕ್ಕೆ ನಿಜಕ್ಕೂ ಹ್ಯಾಟ್ಸಾಫ್ ಹೇಳಲೇಬೇಕು. ಸುತ್ತಮುತ್ತಲಿನ ಜನ ಹೇಳ್ತಿರೋದು ಅದೇ. ಆದ್ರೆ ಕಷ್ಟ ಅಂದ್ರೆ ಯಾರೂ ಹತ್ತಿರ ಬಾರದಿರೋದು ಮಾತ್ರ ದುರಂತ.

 https://www.youtube.com/watch?v=rCklB16P5eM

Share This Article
Facebook Whatsapp Whatsapp Telegram
Previous Article Dhanush Trisha Hansika rana Suchitra small ತಮಿಳು ಗಾಯಕಿಯಿಂದ ಧನುಷ್, ಹನ್ಸಿಕಾ, ರಾಣಾ, ತ್ರಿಶಾ ಖಾಸಗಿ ಫೋಟೋ ಲೀಕ್
Next Article DINA BHAVISHYA 5 5 1 1 small ದಿನಭವಿಷ್ಯ 05-03-2017

Latest Cinema News

Vishnuvardhan 3
ಡಾ.ವಿಷ್ಣುವರ್ಧನ್ 75ನೇ ಜನ್ಮದಿನ ಇಂದು – ಅಭಿಮಾನ್‌ ಸ್ಟುಡಿಯೋ ಬಳಿ 2 ಎಕರೆ ಜಾಗದಲ್ಲಿ ಬರ್ತ್‌ಡೇಗೆ ಸಿದ್ಧತೆ
Cinema Latest Sandalwood Top Stories
disha patani
ನಟಿ ದಿಶಾ ಪಟಾನಿ ಮನೆ ಬಳಿ ಗುಂಡಿನ ದಾಳಿ – ಗೋಲ್ಡಿ ಬ್ರಾರ್ ಗ್ಯಾಂಗ್‌ನ ಇಬ್ಬರು ಎನ್‌ಕೌಂಟರ್‌ನಲ್ಲಿ ಹತ್ಯೆ
Bollywood Cinema Crime Latest Main Post National
Vedika
ಬಿಕಿನಿಯಲ್ಲಿ ಶಿವಲಿಂಗ ನಟಿ ಚಿಲ್‌ – ಪಡ್ಡೆ ಹೈಕ್ಳ ಮೈಬಿಸಿ ಹೆಚ್ಚಿಸಿದ ವೇದಿಕಾ
Cinema Latest Sandalwood Top Stories
Vishnuvardhan 4
ವಿಷ್ಣುವರ್ಧನ್ ಅಭಿಮಾನಿಗಳಿಗೆ ಗೆಲುವು – ಸಮಾಧಿ ಸಮೀಪ ಬರ್ತ್‌ಡೇಗೆ ಸಿಕ್ತು ಅನುಮತಿ
Cinema Latest Sandalwood Top Stories
Darshan
ನಟ ದರ್ಶನ್‌ಗೆ ಹಾಸಿಗೆ, ದಿಂಬು – ಸೆ.19ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್
Cinema Districts Latest Sandalwood Top Stories

You Might Also Like

young man brutally murdered in Chikkodi
Belgaum

ಚಿಕ್ಕೋಡಿ | ಬಸ್ ಇಳಿಯುತ್ತಿದ್ದಂತೆ ಅಟ್ಯಾಕ್ – ಯುವಕನ ಕೊಚ್ಚಿ ಕೊಲೆ

11 minutes ago
CRIME
Crime

ಹಾಸನ | ಅಪ್ರಾಪ್ತನಿಂದ ಮಹಿಳೆಯ ಬರ್ಬರ ಹತ್ಯೆ

48 minutes ago
bengaluru rains 1
Bengaluru City

ಬೆಂಗಳೂರಲ್ಲಿ ಧಾರಾಕಾರ ಮಳೆ; ಹಲವೆಡೆ ಅವಾಂತರ – ರಸ್ತೆಗೆ ಉರುಳಿದ ಮರ, ವಿದ್ಯುತ್‌ ಕಂಬ

52 minutes ago
WEATHER 1 e1679398614299
Bengaluru City

ರಾಜ್ಯದ ಹವಾಮಾನ ವರದಿ 18-09-2025

1 hour ago
Basanagouda Patil Yatnal
Davanagere

ಯೋಗಿ ಬರ್ತಾರೆ ಮೋದಿಗಿಂತ ದಿಟ್ಟ ನಿರ್ಧಾರ ತೆಗೆದುಕೊಳ್ತಾರೆ, ನಾನು ಜೆಸಿಬಿ ಸಹಿತ ಸಿಎಂ ಆಗಿ ಪ್ರಮಾಣ ಸ್ವೀಕರಿಸುವೆ: ಯತ್ನಾಳ್‌

9 hours ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?