ಯಾದಗಿರಿ: ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೇತ್ತ ಯಾದಗಿರಿ ಕಂದಾಯ ಇಲಾಖೆ ಕೊನೆಗೂ ಭ್ರಷ್ಟಾಚಾರಿ ಗ್ರಾಮ ಲೆಕ್ಕಿಗ ಅಧಿಕಾರಿ ಅಮಾನತು ಮಾಡಿದೆ.

ಈ ಭ್ರಷ್ಟಾಚಾರದ ಹಿಂದೆ ಗ್ರಾಮ ಲೆಕ್ಕಿಗ ಅಧಿಕಾರಿ ಶ್ರೀನಿವಾಸ ದೇಶಪಾಂಡೆ ಕೈವಾಡವಿತ್ತು. ಈ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿ, ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆಳಿದಿತ್ತು. ಪಬ್ಲಿಕ್ ಟಿವಿ ವರದಿಯ ಬಳಿಕ ನಿದ್ದೆಯಿಂದ ಎದ್ದಿರುವ ಜಿಲ್ಲಾಡಳಿತ ಕೊನೆಗೂ ಭ್ರಷ್ಟ ಅಧಿಕಾರಿಗೆ ಅಮಾನತು ಮಾಡಿದ್ದಾರೆ.
ಯಾದಗಿರಿ ಸಹಾಯಕ ಆಯುಕ್ತ ಶಂಕರಗೌಡರ ಅಮಾನತು ಆದೇಶ ಹೊರಡಿಸಿದ್ದಾರೆ. ಅಲ್ಲದೆ ಪಬ್ಲಿಕ್ ಟಿವಿಯ ವರದಿಗೆ ಅಭಿನಂದನೆಗಳು ಸಲ್ಲಿರುವ ಆಯುಕ್ತರು, ಮರು ಸರ್ವೆ ಮಾಡಿ ಅರ್ಹ ರೈತ ಜಮೀನುಗಳಿಗೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.



