ಶ್ರೀರಾಮಸೇನೆ ಗೌರವಾಧ್ಯಕ್ಷರ ಬಂಧನಕ್ಕೆ ವಿರೋಧ- ಹೊತ್ತಿ ಉರಿದ ಜೇವರ್ಗಿ, ಪೊಲೀಸರ ಮೇಲೆ ಕಲ್ಲು

Public TV
1 Min Read
glb swamiji F

ಕಲಬುರಗಿ: ಶ್ರೀರಾಮಸೇನೆ ರಾಜ್ಯ ಗೌರವಾಧ್ಯಕ್ಷ ಶ್ರೀ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ ಬಂಧನ ಖಂಡಿಸಿ ಜೇವರ್ಗಿ ಪಟ್ಟಣದಲ್ಲಿ ಹಿಂದೂ ಕಾರ್ಯಕರ್ತರಿಂದ ಭಾರೀ ಪ್ರತಿಭಟನೆ ನಡೆಸಲಾಯಿತು.

400ಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಉದ್ರಿಕ್ತ ಪ್ರತಿಭಟನಾಕಾರರು ಜೇವರ್ಗಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ ಪೊಲೀಸರ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಘಟನೆ ವೇಳೆ ಸ್ಟೇಷನ್ ಬಜಾರ್ ಠಾಣೆ ಪೇದೆ ವಿಠಲ್ ಮತ್ತು ಶಹಬಾದ ಠಾಣೆ ಪೇದೆ ಹೋಬಳೆಶ ಎಂಬವರು ಗಾಯಗೊಂಡಿದ್ದಾರೆ.

ಪೊಲೀಸರು ಉದ್ರಿಕ್ತ ಪ್ರತಿಭಟನಾಕಾರರನ್ನು ಚದುರಿಸಲು ಲಘು ಲಾಠಿ ಪ್ರಹಾರ ಕೂಡ ನಡೆಸಿದ್ದಾರೆ. ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಪಟ್ಟಣದಾದ್ಯಂತ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಈಶಾನ್ಯ ವಲಯ ಐಜಿಪಿ ಅಲೋಕ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

d4215db9 81bc 4dae 98cf 8700866f945d

GLB SWAMIJI PROTEST 2

GLB SWAMIJI PROTEST 1

GLB SWAMIJI PROTEST AV 1

GLB SWAMIJI PROTEST AV 1 1

GLB SWAMIJI PROTEST AV 2

GLB SWAMIJI PROTEST POLICE AV 2

GLB SWAMIJI PROTEST POLICE AV 5

GLB SWAMIJI PROTEST POLICE AV 8

GLB SWAMIJI PROTEST POLICE AV 10

Share This Article
Leave a Comment

Leave a Reply

Your email address will not be published. Required fields are marked *