ಡಬಲ್ ಹಣ ನೀಡುವುದಾಗಿ ನಿವೃತ್ತ ನೌಕರರಿಗೆ ಬ್ಯಾಂಕ್‌ನಿಂದ ಪಂಗನಾಮ

Public TV
2 Min Read
RAMANAGRA FROUD CASE 1

ರಾಮನಗರ: ರಾಷ್ಟ್ರೀಕೃತ ಬ್ಯಾಂಕ್‍ಗಳಿಗಿಂತ (Bank) ಹೆಚ್ಚಿನ ಬಡ್ಡಿ (Interest) ಕೊಡುತ್ತಾರೆ ಎನ್ನೋ ಆಸೆಯಿಂದ ಇದ್ದ ನಿವೃತ್ತ ನೌಕರರನ್ನು (Retired Employees) ಖಾಸಗಿ ಬ್ಯಾಂಕ್‌ (Private Bank) ಒಂದು ವಂಚಿಸಿರುವ ಘಟನೆ ರಾಮನಗರದಲ್ಲಿ (Ramanagara) ನಡೆದಿದೆ. ನಿವೃತ್ತ ನೌಕರರನ್ನು ಟಾರ್ಗೆಟ್ ಮಾಡಿದ್ದ ಬ್ಯಾಂಕ್‍ನವರು, ಡಬಲ್ ಹಣ (Money) ನೀಡೋದಾಗಿ ಹಣ ಠೇವಣಿ ಮಾಡಿಸಿಕೊಂಡು ಅವಧಿ ಮುಗಿದ ಬಳಿಕ ಹಣ ನೀಡದೆ ಕಚೇರಿಯನ್ನು ಬಂದ್ ಮಾಡಿ ಎಸ್ಕೇಪ್ ಆಗಿದ್ದಾರೆ.

RAMANAGRA FROUD CASE

ರಾಮನಗರದ ಪಂಚವಟಿ ಮಲ್ಟಿಸ್ಟೇಟ್‌ ಕ್ರೆಡಿಟ್ ಕೋ-ಆಪರೇಟಿವ್‌ ಬ್ಯಾಂಕ್‍ನಿಂದ ಷೇರುದಾರಿಗೆ ಪಂಗನಾಮ ಹಾಕಲಾಗಿದೆ. ಹಣ ಕಳೆದುಕೊಂಡ ಷೇರುದಾರರು ಈಗ ಪೊಲೀಸರ ಮೊರೆಹೋಗಿದ್ದಾರೆ. ರಾಮನಗರದ ಐಜೂರಿನಲ್ಲಿರುವ ಪಂಚವಟಿ ಮಲ್ಟಿಸ್ಟೇಟ್‌ ಕ್ರೆಡಿಟ್ ಕೋ-ಆಪರೇಟಿವ್‌ ಬ್ಯಾಂಕ್‍ನಲ್ಲಿ ನೂರಾರು ಜನರು ಕೊಟ್ಯಂತರ ರೂ. ಹಣ ಹೂಡಿಕೆ ಮಾಡಿದ್ರು. ನಿವೃತ್ತ ನೌಕರನ್ನು ಟಾರ್ಗೆಟ್ ಮಾಡಿದ್ದ ಬ್ಯಾಂಕ್‍ನವರು ಡಬಲ್ ಹಣ ನೀಡೋದಾಗಿ ಹಣ ಠೇವಣಿ ಮಾಡಿಸಿಕೊಂಡು ಅವಧಿ ಮುಗಿದ ಬಳಿಕ ಹಣ ನೀಡದೇ ಕಚೇರಿಯನ್ನು ಬಂದ್ ಮಾಡಿ ಎಸ್ಕೇಪ್ ಆಗಿದ್ದಾರೆ. ಹೆಚ್ಚಿನ ಹಣದ ಆಸೆಗೆ ಹೂಡಿಕೆ ಮಾಡಿದ್ದ ಷೇರುದಾರರು ಇದ್ದ ಹಣವನ್ನು ಕಳೆದುಕೊಂಡು ಅತಂತ್ರರಾಗಿದ್ದಾರೆ. ಇದನ್ನೂ ಓದಿ: ಯಡ್ಡಿಯೂರಪ್ಪಗೆ ಕಲ್ಲು ಹೊಡೆದ್ರೆ BJP ಪಕ್ಷಕ್ಕೇ ಪೆಟ್ಟು – ವಿಜಯೇಂದ್ರ ಎಚ್ಚರಿಕೆ

RAMANAGRA FROUD CASE 2

ಠೇವಣಿ ಹಣ ಹಿಂಪಡೆಯಲು ಹೋದಾಗ ಷೇರುದಾರರನ್ನು ಸತಾಯಿಸಿದ ಬ್ಯಾಂಕ್‍ನ ಆಡಳಿತ ಮಂಡಳಿ ಈಗ ಹಣ ಹಿಂತಿರುಗಿಸದೆ ಎಸ್ಕೇಪ್ ಆಗಿದೆ ಎಂಬ ಆರೋಪವಿದೆ. ಜಿಲ್ಲೆಯಾದ್ಯಂತ ನಮ್ಮ ಬ್ರಾಂಚ್‌ ಇದೆ. ರಾಷ್ಟ್ರೀಕೃತ ಬ್ಯಾಂಕ್‍ಗಿಂತಲೂ ಹೆಚ್ಚಿನ ಬಡ್ಡಿ ನೀಡ್ತೇವೆ ಎಂದು ಬ್ಯಾಂಕ್‍ನವರು ಕೊಟ್ಯಂತರ ರೂ. ಪಡೆದಿದ್ದಾರೆ. ಆದ್ರೆ ಈಗ ಬೆಂಗಳೂರಿನ ಕಚೇರಿಯನ್ನೂ ಸಹ ಬಂದ್ ಮಾಡಿ ಆಡಳಿತ ಮಂಡಳಿಯವರು ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ರಾಮನಗರ ಸೈಬರ್ ಕ್ರೈಂ ಬ್ರ್ಯಾಂಚ್‍ನಲ್ಲಿ 11 ಮಂದಿ ಷೇರುದಾರರು ದೂರು ನೀಡಿದ್ದು ಬ್ಯಾಂಕ್‍ನ 8 ಮಂದಿ ವಿರುದ್ಧ ಎಫ್‍ಐಆರ್ (FIR) ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು (Police) ರಾಮನಗರದ ಬ್ರಾಂಚ್‍ನ ಬ್ಯಾಂಕ್ ದಾಖಲೆಗಳನ್ನು ಸೀಜ್ ಮಾಡಿ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಐಸಿಯುನಲ್ಲಿ ಸ್ಯಾಂಟ್ರೋ ರವಿಗೆ ಚಿಕಿತ್ಸೆ- ಸಂಜೆ ಡಿಸ್ಚಾರ್ಜ್?

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *