Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • Live TV
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Chikkaballapur

ನನ್ನ ತಿಥಿಗೆ ನಾನ್ ವೆಜ್ ಊಟ ಹಾಕ್ಸರಪ್ಪ: ಸ್ಪೀಕರ್ ರಮೇಶ್ ಕುಮಾರ್

Public TV
Last updated: January 3, 2019 11:05 pm
Public TV
Share
2 Min Read
GDG RAMESH KUMAR 1
SHARE

ಚಿಕ್ಕಬಳ್ಳಾಪುರ: ನನ್ನ ತಿಥಿಗೆ ನಾನ್ ವೆಜ್ ಊಟ ಹಾಕಸರಪ್ಪ ಎಂದು ಸ್ಪೀಕರ್ ರಮೇಶ್ ಕುಮಾರ್ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣ ಹಾಗೂ ಕ್ಷೀರ ಕ್ರಾಂತಿಯ ಹರಿಕಾರರಾಗಿದ್ದ ದಿವಂಗತ ಎಂ.ವಿ.ಕೃಷ್ಣಪ್ಪ ನವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ರಮೇಶ್ ಕುಮಾರ್ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿ, ನನಗೀಗ 70 ವರ್ಷ ವಯಸ್ಸಾಗಿದೆ, 10 ಎಲೆಕ್ಷನ್ ಮಾಡಿದ್ದೇನೆ. ನನ್ನ ಸಾವು ಯಾವಾಗ ಹೇಗೆ ಅಂತ ಗೊತ್ತಿಲ್ಲ, ನಾನು ಸಾವಿನ ವೈಟಿಂಗ್ ಲಿಸ್ಟ್ ನಲ್ಲಿದ್ದೇನೆ. ನಮ್ಮ ಮನೆಯಲ್ಲಿ ತಿಥಿ ಮಾಡಿದರೆ ನಮ್ಮವರು 14-15 ಜನ ಸೇರುತ್ತಾರೆ. ಪಾಯಸ ವಡೆ ಹಾಕಿ ತಿಥಿ ಹೊಟ್ಟೆ ತುಂಬ ತಿಂದು ಕಾರ್ಯ ಮುಗಿಸಿಬಿಡುತ್ತಾರೆ. ಆದರೆ ನಾನು ಎರಡು ಊಟ ಮಾಡುವವನು. ಹಾಗಾಗಿ ನನಗೆ ಆ ಊಟನೂ ಹಾಕಬೇಕಲ್ಲಪ್ಪ, ನಮ್ಮ ಮನೆಯಲ್ಲಿ ಆ ಊಟ ಹಾಕಲಿಲ್ಲ ಆಂದರೆ ನೀವಾದ್ರೂ ಹಾಕಿಸಿ ಎಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದ ಶಾಸಕ ಹಾಗೂ ವಿಧಾನಸಭೆ ಸಭಾಧ್ಯಕ್ಷ ರಮೇಶ್ ಕುಮಾರ್ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ramesh kuma

ಅವಿಭಜಿತ ಕೋಲಾರ – ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣ ಹಾಗೂ ಕ್ಷೀರ ಕ್ರಾಂತಿಯ ಹರಿಕಾರರಾಗಿದ್ದ ದಿವಂಗತ ಎಂ ವಿ ಕೃಷ್ಣಪ್ಪ ನವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಆಚರಿಸಿಲು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ರಮೇಶ್ ಕುಮಾರ್ ಮಾತನಾಡಿದರು. ಈ ವೇಳೆ ಎಂ ವಿ ಕೃಷ್ಣಪ್ಪ ನವರ ಜೀವನ ಯಶೋಗಾಥೆ, ಸಾಧನೆಗಳನ್ನ ಬಿಚ್ಚಿಟ್ಟು, ವಾಸ್ತವ ರಾಜಕೀಯ ಜೀವನ ನೆನೆದು ಭಾವುಕರಾದರು.

ಎಂ ವಿ ಕೃಷ್ಣಪ್ಪ ನವರು ಹಾಕಿದ ಅಡಿಪಾಯದಲ್ಲಿ ನಮ್ಮ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ನಾಯಕರು ಸಾಗಲಿಕ್ಕೆ ಆಗಲಿಲ್ಲವಲ್ಲ? ನಾವು ಅವರಿಗೆ ಅಪಚಾರ ಮಾಡಿಬಿಟ್ಟಿದ್ದೇವೆ ಎಂದು ಸ್ವತಃ ತಮ್ಮನ್ನ ಹಾಗೂ ಪ್ರಸಕ್ತ ರಾಜಕಾರಣಿಗಳ ಬಗ್ಗೆ ಬೇಸರ ಮಾಡಿಕೊಂಡರು. ಅಖಂಡ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗೆ ಮೊಟ್ಟ ಮೊದಲು ಡೆನ್ಮಾರ್ಕ್ ನಿಂದ ಸೀಮೆ ಹಸುಗಳನ್ನ ವಿಮಾನದ ಮೂಲಕ ತರಿಸಿ ಕ್ಷೀರಕ್ರಾಂತಿ ಮಾಡಿದ ಮಹಾನ್ ವ್ಯಕ್ತಿ ಎಂ ವಿ ಕೃಷ್ಣಪ್ಪ. ಆದರೆ ಅವರು ಮನೆ ಹಾಗೂ ಮಕ್ಕಳಿಗಾಗಿ ಏನೂ ಆಸ್ತಿ ಮಾಡಲಿಲ್ಲ. ಇವತ್ತು ಅವರ ಮಗ ಆಶೋಕ್ ಇಲ್ಲಿದ್ದಾರೆ. ಆದರೆ ಅವರು ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ಎಂದು ಮರುಕ ಪಟ್ಟರು.

ckb ramesh

ಇಂದಿನ ನಾಯಕರು ತಮ್ಮ ಮಕ್ಕಳು ಮೊಮ್ಮಕ್ಕಳಿಗೆ, ಆಸ್ತಿ ಅಂತಸ್ತು, ಬಂಗಲೆ, ಫ್ಯಾಕ್ಟರಿ ಮಾಡುವ ಯೋಜನೆಗಳನ್ನು ಹಾಕುತ್ತಾರೆ. ಸ್ವಾರ್ಥ ರಾಜಕಾರಣ ಮಾಡುತ್ತಾರೆ ಎಂದು ಅಸಮಾಧಾನ ತೋಡಿಕೊಂಡರು. ಅಲ್ಲದೇ ಎಂ ವಿ ಕೃಷ್ಣಪ್ಪ ನವರಂತಹ ಮಹಾನ್ ವ್ಯಕ್ತಿಗಳನ್ನ ನೆನೆಯುವ ಯೋಗ್ಯತೆ ಕೂಡ ನಮಗೆ ಇಲ್ಲವೇ…? ಅಂತವರನ್ನ ನೆನೆದು ನಾಡಿಗೆ ಅವರ ಹೆಸರನ್ನ ಪರಿಚಯುವ ಮಾಡುವ ಸಲುವಾಗಿ ದಿವಂಗತ ಜನ್ಮಶತಮಾನೋತ್ಸವ ಕಾರ್ಯ ಮಾಡುವ ಉದ್ದೇಶದಿಂದ ಪೂರ್ವಭಾವಿ ಸಭೆ ನಡೆಸಲಾಗುತ್ತಿದೆ. ಹೀಗಾಗಿ ನಾನು ಇವತ್ತು ದಿವಂಗತ ಕೃಷ್ಣಪ್ಪನವರಿಗೆ ಈ ಕಾರ್ಯ ಮಾಡಿದರೆ ಮುಂದೊಂದು ದಿನ ನೀವು ನನಗೆ ತಿಥಿ ಕಾರ್ಯ ಮಾಡಿ ನಾನ್ ವೆಜ್ ಊಟ ಹಾಕಿಸಿ ಎಂದು ಹಾಸ್ಯ ಮಾಡಿಯೇ ತಮ್ಮೊಳಗಿನ ನೋವು ತೋಡಿಕೊಂಡರು. ಸಭೆಯಲ್ಲಿ ಅಖಂಡ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಜನಪ್ರತಿನಿಧಿಗಳು ಹಾಜರಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

TAGGED:chikkaballapurChikkaballapuraNon VezPublic TVRamesh Kumartithiಚಿಕ್ಕಬಳ್ಳಾಪುರತಿಥಿನಾನ್ ವೆಜ್ಪಬ್ಲಿಕ್ ಟಿವಿರಮೇಶ್ ಕುಮಾರ್
Share This Article
Facebook Whatsapp Whatsapp Telegram

Cinema Updates

Kantara
ಕಾಂತಾರ ಚಾಪ್ಟರ್-1 | ದೈವದ ನೇಮೋತ್ಸವ ಚಿತ್ರೀಕರಣಕ್ಕೂ ಮುನ್ನವೇ ಸಹ ಕಲಾವಿದ ಸಾವು
4 hours ago
Kantara 3
ʻಕಾಂತಾರ ಚಾಪ್ಟರ್-1ʼಗೆ ಸಾಲು ಸಾಲು ವಿಘ್ನ – ಒಂದೇ ತಿಂಗಳಲ್ಲಿ ಮೂರು ಸಾವು!
4 hours ago
Kantara Death copy
ಕಾಂತಾರ ಚಾಪ್ಟರ್-1 ಚಿತ್ರದ ಸಹ ಕಲಾವಿದ ವಿಜು ಹೃದಯಾಘಾತದಿಂದ ಸಾವು
5 hours ago
India House Movie
`ದಿ ಇಂಡಿಯಾ ಹೌಸ್ʼ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ನೀರಿನ ಟ್ಯಾಂಕರ್‌ ಸ್ಫೋಟ – ಹಲವರಿಗೆ ಗಾಯ
6 hours ago

You Might Also Like

gujarat cm vijay rupani
Latest

ವಿಮಾನ ಪತನ – ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪಾನಿ ಸಾವು

Public TV
By Public TV
38 seconds ago
Ahmedabad Planecrash 5
Latest

Photo Gallery | ಏರ್‌ ಇಂಡಿಯಾ ವಿಮಾನ ಪತನ – ಭೀಕರ ಅಪಘಾತದ ದೃಶ್ಯ ಫೋಟೋಗಳಲ್ಲಿ ಸೆರೆ …

Public TV
By Public TV
14 minutes ago
Air India Bird Hit Ahmedabad Plane Crash
Latest

ಹಕ್ಕಿ ಡಿಕ್ಕಿಯಿಂದ ಟೇಕಾಫ್‌ ವೇಗ ಕಳೆದುಕೊಂಡು ವಿಮಾನ ಪತನ – ತಜ್ಞರು ಹೇಳೋದು ಏನು?

Public TV
By Public TV
16 minutes ago
DK Shivakumar 6
Bengaluru City

ಅಹಮದಾಬಾದ್ ವಿಮಾನ ಪತನ ದುರಾದೃಷ್ಟಕರ ಘಟನೆ: ಡಿ.ಕೆ ಶಿವಕುಮಾರ್

Public TV
By Public TV
19 minutes ago
Ahmedabad Planecrash
Latest

ʻಮೇ ಡೇʼ – ವಿಮಾನ ಪತನಕ್ಕೂ ಮುನ್ನ ಎಟಿಸಿಗೆ ಪೈಲಟ್‌ ಕೊಟ್ಟ ಕೊನೆಯ ಸಂದೇಶ

Public TV
By Public TV
26 minutes ago
Air India Crash CM Siddaramaiah
Bengaluru City

ಏರ್‌ ಇಂಡಿಯಾ ವಿಮಾನ ದುರಂತ – ಸಂತಾಪ ಸೂಚಿಸಿದ ಸಿದ್ದರಾಮಯ್ಯ

Public TV
By Public TV
43 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?