ಕಾರವಾರದಲ್ಲಿ ಗಂಜಿ ಕೇಂದ್ರಗಳು ಜಲಾವೃತ – 1 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ

Public TV
0 Min Read
KWR RAIN

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿ ಕಾಳಿ ನದಿ ಪ್ರವಾಹದಿಂದ ತಾಲೂಕಿನ ಕಿನ್ನರ ಗ್ರಾಮ ಸೇರಿದಂತೆ ಹತ್ತು ಗ್ರಾಮಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳು ಮುಳುಗಡೆ ಆಗಿವೆ.

ಕದ್ರಾ ಡ್ಯಾಮ್ ನಿಂದ 1.90ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ಕಾರವಾರ ತಾಲೂಕಿನ ಕಿನ್ನರ ಗ್ರಾಮ ಸೇರಿದಂತೆ ಹತ್ತು ಗ್ರಾಮಗಳು ಜಲಾವೃತಗೊಂಡಿದೆ. ಕಾರವಾರ ತಾಲೂಕಿನ ಸಿದ್ದರ ಐ.ಟಿ.ಐ ಕಾಲೇಜು, ಅಂಬೆಜೂಗ್, ಕಿನ್ನರ, ಕಾರ್ಗ ಗಂಜಿ ಕೇಂದ್ರಗಳು ಕಾರವಾರದ ಗುರು ಭವನಕ್ಕೆ ಈಗ ಸ್ಥಳಾಂತರಗೊಂಡಿದೆ.

KWR RAIN 1

ಸುಮಾರು 800ಕ್ಕೂ ಹೆಚ್ಚು ಕುಟುಂಬಗಳನ್ನು ದೋಣಿ ಮೂಲಕ ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *