-ಮರ್ಯಾದೆ ಬಿಟ್ಟು ಶಾಸಕರು ರೆಸಾರ್ಟ್ ಸೇರಿದ್ದಾರೆ
ಧಾರವಾಡ: ನಮ್ಮ ರಾಜ್ಯದಲ್ಲಿ ಮೂರು ರಾಜಕೀಯ ಪಕ್ಷಗಳು ಮೂರೂ ಬಿಟ್ಟಿವೆ. ಇದನ್ನು ನೋಡಲಿಕ್ಕೆ ಅಸಹ್ಯ ಆಗುತ್ತಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ರಾಜಕೀಯ ಹೈಡ್ರಾಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರು ಫ್ರಿಡಂ ಪಾರ್ಕ್ ನಲ್ಲಿ ಛೀ, ಥೂ ಅಂತಾ ಉಗಿದು ಚಳವಳಿ ಮಾಡಿದ್ವಿ. ಇಂತಹ ಕನಿಷ್ಠ ಮಟ್ಟದ ರಾಜಕಾರಣ ಕರ್ನಾಟಕದಲ್ಲಿ ಎಂದಿಗೂ ಆಗಿಲ್ಲ. ಈಗ ರೆಸಾರ್ಟಿನಲ್ಲಿ ಮಾನ ಮರ್ಯಾದೆ ಬಿಟ್ಟು ಶಾಸಕರು ಕುಳಿತಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ನಡೆಯುತ್ತಿರುವುದನ್ನು ನೋಡಲಿಕ್ಕೆ ಕೇಳೋದಿಕ್ಕೆ ಅಸಹ್ಯವಾಗುತ್ತೆ. ಹೀಗಾಗಿ ಬದಲಾದ ರಾಜಕೀಯ ಚಿಂತನೆ ನಮ್ಮ ನಾಡಿಗೆ ಬೇಕಿದೆ. ಈ ಬಗ್ಗೆ ನಾಡಿನ ಜನ ವಿಚಾರ ಮಾಡಬೇಕು ಎಂದು ಕೋಡಿಹಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು.