ಹುಬ್ಬಳ್ಳಿ: ಯಾಕೆ ಚಿರಾಡುತ್ತಿಯಾ?.. ನೀನು ನಾಯಿನಾ?.. ನೀನು ಹಂದಿನಾ? ಅಂತ ದಲಿತ ಮಹಿಳೆಗೆ ಪೊಲೀಸ್ ಸಿಬ್ಬಂದಿ (Police Staff) ಬಾಯಿಗೆ ಬಂದಂತೆ ಮಾತನಾಡಿದ ಪ್ರಕರಣ ನಡೆದಿದೆ.
ಹುಬ್ಬಳ್ಳಿ (Hubballi) ಕೇಶ್ವಾಪುರ ಪೊಲೀಸ್ ಠಾಣೆ ಸಿಬ್ಬಂದಿ ಗುಳೇಶ್ ಎಂಬವರಿಂದ ಅನಾಗರಿಕ ವರ್ತನೆ ತೋರಿದ್ದು, ದೂರು ನೀಡಲು ಬಂದ ದಲಿತ ಮಹಿಳೆ ಮತ್ತು ಕುಟುಂಬ ಮೇಲೆ ದರ್ಪದ ವರ್ತನೆ ತೋರಲಾಗಿದೆ. ಸೌಜನ್ಯಕ್ಕಾದರು ಒಳಗೆ ಕರೆದು ಮಾತನಾಡದೆ ಠಾಣೆಗೆ ಎದುರೇ ನಿಲ್ಲಿಸಿ ವಿಚಾರಣೆ ನಡೆಸಲಾಗಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಡಿಕೆಶಿ ಲ್ಯಾಂಡ್ – ಸ್ವಾಗತಕ್ಕೆ ಬಾರದ ಶಾಸಕರು, ಸಚಿವರು
ಈ ದೃಶ್ಯಗಳನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ. ಮಹಿಳೆಯರನ್ನು ಮೆಚ್ಚಿಸಿ ಅಧಿಕಾರಕ್ಕೆ ಬಂದ ಗೃಹ ಸಚಿವ ಜಿ ಪರಮೇಶ್ವರ್ ಅವರೇ ಇದೇನಾ ನಿಮ್ಮ ಇಲಾಖೆ ಮಹಿಳಾ ಗೌರವ..?, ಇದೇನಾ ದಲಿತರ ರಕ್ಷಣೆ..?, ನಿಮ್ಮ ಇಲಾಖೆಯ ಸಿಬ್ಬಂದಿಗೆ ಮಹಿಳೆಯರು ಅಂದರೆ ಅಷ್ಟು ನಿರ್ಲಕ್ಷ್ಯ ಯಾಕೆ..?, ಮಾನ್ಯ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ಅವರೇ ನೀವು ಒಬ್ಬ ಮಹಿಳೆಯಾಗಿ ಯಾಕೆ ಇನ್ನೂ ಕ್ರಮ ತೆಗೆದುಕೊಂಡಿಲ್ಲ ಅಂತ ಜನ ಪ್ರಶ್ನೆ ಮಾಡುತ್ತಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]