ಬೆಂಗಳೂರು: ಪಾರ್ಕ್ ಗಳಲ್ಲಿ ಕಾಳು ತಿನ್ನುತ್ತಿದ್ದ ಹಕ್ಕಿಗಳ ಪ್ರಾಣಕ್ಕೆ ಕುತ್ತು ತಂದಿದೆ. ಮಕ್ಕಳು ಹಾಗೂ ಕೆಲಸ ಇಲ್ಲದವರು ಜ್ಯೋತಿಷಿ ಮಾತು ಕೇಳಿ ಖಾರ ಬೂಂದಿ, ಹುರಿಗಡಲೆ ತಂದು ಪಕ್ಷಿಗಳಿಗೆ ಹಾಕುತ್ತಿದ್ದಾರೆ.
ಜ್ಯೋತಿಷಿಗಳು ಮೂಕ ಪ್ರಾಣಿಗಳ ಪ್ರಾಣಕ್ಕೆ ಸಂಚಕಾರ ಹೂಡಿದ್ದಾರೆ. ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸ್ ಆಗುವುದಕ್ಕೆ, ಮಕ್ಕಳು ಆಗುವುದಕ್ಕೆ ಹೀಗೆ ಹಲವು ಹರಕೆಗಳು ಈಡೇರಬೇಕಂದರೆ ಹಕ್ಕಿಗಳಿಗೆ ಕಾಳು, ಖಾರ ಬೂಂದಿ ಹಾಕುವುದಕ್ಕೆ ಜ್ಯೋತಿಷಿಯೊಬ್ಬನು ಹೇಳಿದ್ದಾನೆ. ಹೀಗಾಗಿ ಪಾರ್ಕ್ ಗೆ ಬರುವ ವಾಕರ್ಸ್ ಪಕ್ಷಿಗಳಿಗೆ ಕಾಳುಗಳನ್ನು ಹಾಕುವ ಮೂಲಕ ಅವುಗಳ ಸಾವಿಗೆ ಕಾರಣರಾಗುತ್ತಿದ್ದಾರೆ.
ಪ್ರಮುಖವಾಗಿ ಹುರಿಗಡಲೆ ಹಾಗೂ ಬೇಕರಿಯಲ್ಲಿ ಸಿಗುವ ಮಿಕ್ಚರ್, ಖಾರ ಬೂಂದಿ ಹಾಗೂ ಮನೆಯಲ್ಲಿ ಉಳಿದ ಎಣ್ಣೆ ಪದಾರ್ಥಗಳನ್ನು ಹಾಕುತ್ತಿದ್ದಾರೆ. ಇದನ್ನು ತಿಂದರೆ ಪಕ್ಷಿಗಳಿಗೆ ಜೀರ್ಣವಾಗುವುದಿಲ್ಲ. ಸರಿಯಾಗಿ ನೀರು ಕೂಡ ಸಿಗುವುದಿಲ್ಲ. ಇದರಿಂದ ಪಕ್ಷಿಗಳಿಗೆ ದಾಹ ಇನ್ನು ಹೆಚ್ಚಾಗುತ್ತೆ. ನೀರಿಲ್ಲದೆ ಪಕ್ಷಿಗಳು ಸಾವನ್ನಪ್ಪುತ್ತೆ ಎಂದು ಪಕ್ಷಿ ಪ್ರಿಯರು ಕಳವಳ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿರುವ ಕೆರೆಗಳನ್ನು ಭೂಗಳ್ಳರು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಮೂಕ ಪ್ರಾಣಿಗಳು ಸಾವಿನ ಅಂಚಿಗೆ ಸೇರುತ್ತಿವೆ. ಮಾರ್ಚ್ ಹಾಗೂ ಏಪ್ರಿಲ್ ನಲ್ಲಿ ಪಕ್ಷಿಗಳಿಗೆ ಸನ್ ಸ್ಟ್ರೋಕ್ ಹಾಗೂ ಚಿಕನ್ ಪಾಕ್ಸ್ ಆಗುವ ಸಾಧ್ಯತೆಗಳೇ ಹೆಚ್ಚು. ಅದರಲ್ಲೂ ಪರಿವಾಳಗಳಿಗೆ ಪ್ಯಾರಲಿಸಿಸ್ ಬರುವ ಸಾಧ್ಯತೆಗಳಿರುತ್ತವೆ.
ಅಂತಹದರಲ್ಲಿ ಸಿಲಿಕಾನ್ ಸಿಟಿಯ ಜನ ಪಾರ್ಕಿನಲ್ಲಿ ವಾಕ್ ಮಾಡುವುದಕ್ಕೆಂದು ಪಕ್ಷಿಗಳ ಮಾರಣಹೋಮಕ್ಕೆ ಕಾರಣರಾಗುತ್ತಿದ್ದಾರೆ. ಜನ ಯಾವುದೋ ಸ್ವಾಮೀಜಿ ಹೇಳಿದ್ರು, ಜ್ಯೋತಿಷ್ಯದವರು ಹೇಳಿದ್ದಾರೆ ಎಂದು ಈ ಮೂಕ ಪಕ್ಷಿಗಳಿಗೆ ಏನ್ ಏನೋ ತಂದು ಹಾಕಿ ಅವುಗಳು ಪ್ರಾಣ ತೆಗೆಯುತ್ತಿದ್ದಾರೆ. ಸ್ವಾಮೀಜಿ, ಜ್ಯೋತಿಷಿಗಳ ಮಾತು ನಂಬದೇ ನಿಮ್ಮ ಮನೆ ಮೇಲೆ ಒಂದ್ ಬೌಲ್ ನೀರಿಡಿ. ಅವುಗಳ ನೀರಿನ ದಾಹವನ್ನು ನೀಗಿಸಿ ಎಂದು ಪಕ್ಷಿ ಪ್ರಿಯರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv