ಅತ್ತಿಗೆ ಮಾಡಿದ ದ್ರೋಹದಿಂದ ಇಲ್ಲಿದ್ದೇನೆ ಎಂದು ವರಸೆ ಬದಲಿಸಿದ ಪವನ್ ಕಲ್ಯಾಣ್

Public TV
1 Min Read
pavan kalyan

ಟಾಲಿವುಡ್ (Tollywood) ನಟ ಪವನ್ ಕಲ್ಯಾಣ್ (Pawan Kalyan) ಮತ್ತೊಮ್ಮೆ ಹಳೇ ದಿನ ನೆನಪು ಮಾಡಿಕೊಂಡಿದ್ದಾರೆ. ಸಿನಿಮಾ ಹೀರೋ ಆಗಬೇಕೆನ್ನುವ ಕನಸು ಇರದಿದ್ದ ಹೊತ್ತಿನಲ್ಲಿ ಅದ್ಯಾರು ಈ ಲೋಕಕ್ಕೆ ದೂಡಿದರು? ಅದ್ಯಾಕೆ ಸ್ಟಾರ್ ಮಾಡುವ ದ್ರೋಹ ಮಾಡಿದರೆಂದು ತಮಾಷೆಯಾಗಿ ಹೇಳಿದ್ದಾರೆ. ಹಾಗಿದ್ದರೆ ಪವನ್ ಪ್ರಕಾರ ಆ ದ್ರೋಹಿ ಯಾರು? ಇಲ್ಲಿದೆ ಡಿಟೈಲ್ಸ್

pavan

ಪವನ್‌ಕಲ್ಯಾಣ್ ಇಂದು ಕೋಟಿ ಕೋಟಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಆದರೆ ನಿಜ ಹೇಳಬೇಕೆಂದರೆ ಅವರಿಗೆ ಸಿನಿಮಾ ಆಸಕ್ತಿ ಅಗುಳಿನಷ್ಟೂ ಇರಲಿಲ್ಲ. ವ್ಯವಸಾಯ ಮಾಡಿಕೊಂಡು…ಆಧ್ಯಾತ್ಮ ಓದಿಕೊಂದು ಬದುಕು ನಡೆಸುವ ಕನಸು ಕಂಡಿದ್ದರು. ಆದರೆ ಸಿನಿಮಾಕ್ಕೆ ಬರುವಂತೆ ಮಾಡಿದ್ದು ಯಾರು ಗೊತ್ತೆ? ಇದನ್ನೂ ಓದಿ:‘ಜವಾನ್’ ಸಿನಿಮಾದಲ್ಲಿ ದಳಪತಿ ವಿಜಯ್ ಕೂಡ ಇದ್ದಾರೆ: ಭರ್ಜರಿ ಸುದ್ದಿ

pavan kalyan

ಸಾಮಾನ್ಯ ಜೀವನ ನಡೆಸುವ ಕನಸು ಕಂಡಿದ್ದೆ. ಜನಜಂಗುಳಿ ಇಷ್ಟ ಆಗುತ್ತಿರಲಿಲ್ಲ. ಆದರೆ ನನ್ನ ಅಣ್ಣ-ಅತ್ತಿಗೆ ಸಿನಿಮಾಕ್ಕೆ ಹೋಗುವಂತೆ ಮಾಡಿದರು. ಒಮ್ಮೆ ಥೇಟರ್ ಮುಂದೆ ಲಾರಿ ಏರಿ ಕುಣಿಯುವಂತೆ ಜನರು ಒತ್ತಾಯಿಸಿದರು. ಆಗ ನಾನು ಸತ್ತೇ ಹೋಗುತ್ತೇನೆ ಎನ್ನುವಷ್ಟು ಸಂಕೋಚವಾಗಿತ್ತು. ಅತ್ತಿಗೆ ಫೋನ್ ಮಾಡಿ…ಯಾಕೆ ನನ್ನನ್ನು ಇಲ್ಲಿಗೆ ಕಳಿಸಿದಿರಿ ಎಂದು ದಬಾಯಿಸಿದೆ. ಇಷ್ಟು ದೊಡ್ಡ ಹೀರೊ…ಇಷ್ಟು ಫ್ಯಾನ್ಸ್ ಸಿಗುತ್ತಾರೆಂದು ಕನಸಲ್ಲೂ ಊಹಿಸಿರಲಿಲ್ಲ. ಇದಕ್ಕೆಲ್ಲ ನನ್ನ ಅತ್ತಿಗೆ ಮಾಡಿದ ಆ ದ್ರೋಹವೇ ಕಾರಣ ಎಂದು ಪವನ್ ಕಲ್ಯಾಣ್ ಮಾತನಾಡಿದ್ದಾರೆ.

ಅಣ್ಣ ಚಿರು (Chiranjeevi) ಹಾಗೂ ಅತ್ತಿಗೆ ಸುರೇಖಾ (Surekha) ಅಂದರೆ ಪವನ್‌ಗೆ ಪ್ರಾಣ. ಅವರಿಂದಲೇ ಇಂದು ಪವನ್ ಎಷ್ಟೋ ಅವಘಡಗಳಿಂದ ಪಾರಾಗಿ ಇಂದು ಇಷ್ಟು ಎತ್ತರಕ್ಕೆ ಏರಿದ್ದಾರೆ. ಅದನ್ನೇ ‘ಬ್ರೋ’ (Bro) ಸಿನಿಮಾ ಪ್ರಿ ರಿಲೀಸ್ ಇವೆಂಟ್ ಸಮಯದಲ್ಲಿ ತಮಾಷೆಯಾಗಿ ಹೇಳಿದರು. ನೋಡಿ ಎಲ್ಲರೂ ಬಯಸೋದು…ಇವರಿಗೆ ಬೇಡವಾಗಿತ್ತು. ದೇವರ ಆಟ ಬಲ್ಲರ‍್ಯಾರು?

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article