ಬೆಂಗಳೂರು: ದೊಡ್ಮನೆ ಹುಡುಗ ನಮ್ಮೊಂದಿಗೆ ಇರಬೇಕಾಗಿತ್ತು. ಅವರಿದ್ದರೇನೆ ನಮಗೆಲ್ಲ ಸಂತೋಷ. ಇದೀಗ ಈ ರೀತಿ ಆಗಿದೆ, ಇದಕ್ಕೆಲ್ಲ ಉತ್ತರ ದೇವರೇ ಕೊಡಬೇಕೆಂದು ಸ್ಯಾಂಡಲ್ವುಡ್ ನಟ ಪುನೀತ್ ರಾಜ್ಕುಮಾರ್ ಅವರ ಅಗಲಿಕೆಗೆ ನಟಿ ಪವಿತ್ರ ಲೋಕೇಶ್ ಸಂತಾಪ ಸೂಚಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದದ ಅವರು, ಪುನೀತ್ ಅವರದ್ದು ಚಿಕ್ಕ ವಯಸ್ಸು ಆದರೆ ಇದೀಗ ಈ ರೀತಿ ಆಗಿದೆ ಈ ಬಗ್ಗೆ ನಾವು ಯಾರನ್ನು ಕೇಳುವುದು? ಇದಕ್ಕೆಲ್ಲ ಉತ್ತರ ಮಾತ್ರ ದೇವರೇ ಕೊಡಬೇಕು. ದೊಡ್ಮನೆ ಅವರು ನಮ್ಮೊಂದಿಗೆ ಚಿತ್ರರಂಗದಲ್ಲಿ ಇದ್ದರೆ ನಮಗೆ ಒಂದು ರೀತಿಯ ಧೈರ್ಯ ಎಂದರು. ಇದನ್ನೂ ಓದಿ: ಅಪ್ಪು ಅಗಲಿಕೆ ಬಗ್ಗೆ ಶಿವಣ್ಣ ಸುದೀಪ್ಗೆ ಹೇಳಿದ್ದೇನು?
ಪುನೀತ್ ಅವರೊಂದಿಗೆ ನಾನು ಆಕಾಶ್ ಸಿನಿಮಾದಲ್ಲಿ ನಟಿಸಿದ್ದೇನೆ. ತುಂಬಾ ಒಳ್ಳೆಯ ನಟ ಅವರೊಬ್ಬ ಜಂಟಲ್ಮ್ಯಾನ್ ಅವರಂತಹ ಒತ್ತಮ ಮನೋಭಾವದ ಇನ್ನೊಬ್ಬ ಮನುಷ್ಯನನ್ನು ನಾವು ನೋಡಿಲ್ಲ. ಅಷ್ಟು ದೊಡ್ಡ ನಟನಾಗಿದ್ದರೂ ಕೂಡ ಎಲ್ಲರೊಂದಿಗೆ ತುಂಬಾ ಅನ್ಯೋನ್ಯತೆಯಿಂದ ಇದ್ದರು. ಎಲ್ಲರೊಂದಿಗೆ ಬೆರೆತು ಉತ್ತಮ ಸಿನಿಮಾಗಳನ್ನು ಮಾಡುತ್ತಿದ್ದರು ಎಂದು ಪುನೀತ್ ಅವರನ್ನು ನೆನಪಿಸಿಕೊಂಡರು. ಇದನ್ನೂ ಓದಿ: ಅಪ್ಪು ಅಗಲಿಕೆ ವಿಚಾರ ಸೋದರತ್ತೆಗೆ ಗೊತ್ತೆ ಇಲ್ಲ