ನ್ಯಾಯ ಕೇಳಲು ಬಂದ ಮಹಿಳೆಗೆ ಕಿರುಕುಳ: ಪ.ಪಂ ಮುಖ್ಯಾಧಿಕಾರಿ ಅಮಾನತು

Public TV
1 Min Read
BLY DAMKI 3 1

ಬಳ್ಳಾರಿ: ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಹಿನ್ನಲೆಯಲ್ಲಿ ಹೊಸಪೇಟೆ ತಾಲೂಕಿನ ಕಮಲಾಪುರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಯಾಗಿದ್ದ ಶಿವಕುಮಾರ ಕಟ್ಟಿಮನಿಯನ್ನು ಅಮಾನತು ಮಾಡಲಾಗಿದೆ.

ಕಳೆದ ತಿಂಗಳು ಕಮಲಾಪುರ ಪಟ್ಟಣದ ಮಹಿಳೆಯೊಬ್ಬರ ಆಶ್ರಯ ಮನೆ ಮುಂದಿನ ಒತ್ತುವರಿ ತೆರವುಗೊಳಿಸಲು ಮುಖ್ಯಾಧಿಕಾರಿ ಲೈಂಗಿಕ ಕಿರುಕುಳ ನೀಡಿದ್ದರು. ಅಲ್ಲದೇ ಮಹಿಳೆ ದೂರು ನೀಡದಂತೆ ಬೆದರಿಕೆ ಸಹ ಹಾಕಿದ್ದರು.

ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಯ ಲೈಂಗಿಕ ಕಿರುಕುಳದ ಬಗ್ಗೆ ಪಬ್ಲಿಕ್ ಟವಿ ಆಡಿಯೋ ಸಮೇತ ಸುದ್ದಿ ಪ್ರಸಾರ ಮಾಡಿತ್ತು. ಇದೀಗ ಮಹಿಳೆಯ ದೂರಿನ ಮೇರೆಗೆ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಶಿವಕುಮಾರ ಕಟ್ಟಿಮನಿಯನ್ನು ಜಿಲ್ಲಾ ಯೋಜನಾ ನಿರ್ದೇಶಕರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ನ್ಯಾಯ ಕೇಳಲು ಬಂದ ಮಹಿಳೆಯನ್ನು ಮಂಚಕ್ಕೆ ಕರೆದ ಪುರಸಭೆ ಮುಖ್ಯಾಧಿಕಾರಿ!

BLY SUSPEND 1

BLY SUSPEND 2

 

Share This Article
Leave a Comment

Leave a Reply

Your email address will not be published. Required fields are marked *