ಹುಬ್ಬಳ್ಳಿಯ ಕಿಮ್ಸ್ ಗೆ ಪಾಪು ನಾಮಕರಣ ಮಾಡಲು ಯತ್ನ- ಬಿ.ಸಿ.ಪಾಟೀಲ್ ಭರವಸೆ

Public TV
1 Min Read
hvr bc patil

ಹಾವೇರಿ: ನಾಡೋಜ ಪಾಟೀಲ ಪುಟ್ಟಪ್ಪನವರ ಹೆಸರನ್ನು ಉಳಿಸುವ ಸಲುವಾಗಿ ಅವರ ಹೆಸರನ್ನು ಹುಬ್ಬಳ್ಳಿ ಕಿಮ್ಸ್ ಗೆ ನಾಮಕರಣ ಮಾಡಲು ಸಿಎಂ ಜೊತೆ ಹಾಗೂ ಸಚಿವ ಸಂಪುಟ ಸಭೆಯದಲ್ಲಿ ಚರ್ಚೆ ಮಾಡುವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಭರವಸೆ ನೀಡಿದರು.

ಪಾಟೀಲ ಪುಟ್ಟಪ್ಪ ವಿಧಿವಶರಾದರ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಯಲ್ಲಿ ಸರ್ಕಾರದ ಪರವಾಗಿ ಭಾಗಿಯಾಗಿ ಮಾತನಾಡಿದ ಅವರು, ಪಾಟೀಲ ಪುಟ್ಟಪ್ಪ ಕನ್ನಡದ ಗಟ್ಟಿಧ್ವನಿಯಾಗಿದ್ದರು. ಇಂದು ಆ ಗಟ್ಟಿ ಧ್ವನಿ ಸ್ಥಬ್ದವಾಗಿದೆ. ನಾನು ಸಚಿವನಾಗಬೇಕು ಎನ್ನುವ ಆಸೆ ಅವರಿಗೆ ತುಂಬಾ ಇತ್ತು. ಸಚಿವನಾದ ನಂತರ ಅವರನ್ನು ಮಾತನಾಡಿಸಲು ಹೋದಾಗ ಮಾತನಾಡುವ ಸ್ಥಿತಿಯಲ್ಲಿ ಅವರು ಇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

HUBLI KIMS

ಪಾಪು ಅವರು ಹುಟ್ಟು ಹೋರಾಟಗಾರರಾಗಿದ್ದರು. ಹೀಗಾಗಿ ಅವರ ಹೆಸರು ಅಮರವಾಗಿರಲು ಕಿಮ್ಸ್ ಆಸ್ಪತ್ರೆಗೆ ಅವರ ಹೆಸರು ನಾಮಕರಣ ಮಾಡುವ ಬಗ್ಗೆ ಸಿಎಂ ಜೊತೆ ಹಾಗೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುವೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *