ಪ್ರಧಾನಿ ಮೋದಿ ಪರಿವರ್ತನಾ ಸಮಾರಂಭದ ಪಕ್ಕದಲ್ಲೇ ಪಕೋಡ ಮಾರಾಟ?

Public TV
1 Min Read
PAKODA1

ಬೆಂಗಳೂರು: ಬಿಜೆಪಿ ಪರಿಚರ್ತನಾ ಯಾತ್ರೆ ನಡೆಯುವ ನಗರದ ಅರಮನೆ ಮೈದಾನದ ಸುತ್ತಲ ಸ್ಥಳದಲ್ಲಿ ಪಕೋಡಾ ಮಾರಾಟ ಮಾಡಲು ಅನುಮತಿ ನೀಡುವಂತೆ ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆ ಪೊಲೀಸ್ ಆಯುಕ್ತಿಗೆ ಮನವಿ ಸಲ್ಲಿಸಿದೆ.

ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆ ಭಾನುವಾರ ಅರಮನೆ ಮೈದಾನದಲ್ಲಿ ನಡೆಯುವ ಪರಿವರ್ತನಾ ಯಾತ್ರೆ ಸ್ಥಳದಲ್ಲಿ ಪಕೋಡಾ ಮಾರಾಟಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಅದರೆ ವಿದ್ಯಾರ್ಥಿ ಸಂಘಟನೆಯ ಮನವಿಯನ್ನು ಪೊಲೀಸ್ ಕಮಿಷನರ್ ತಿರಸ್ಕರಿಸಿದ್ದಾರೆ. ಅಲ್ಲದೇ ನಗರದಲ್ಲಿ ಎಲ್ಲೂ ಪ್ರತಿಭಟನೆ ನಡೆಸಲು ಅನುಮತಿ ನೀಡಿಲ್ಲ ಎಂದು ಪೊಲೀಸ್ ಕಮಿಷನರ್ ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಒದಿ:

PAKODA LETTER

ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಸಹ ಪ್ರಧಾನಿ ಮೋದಿ ಅವರ ಪಕೋಡಾ ಹೇಳಿಕೆಗೆ ಕಿಡಿಕಾರಿದ್ದಾರೆ. ಧಾರವಾಡದ ನವಲಗುಂದಲ್ಲಿ ಮಾತನಾಡಿದ ಅವರು, ಪ್ರಧಾನಿಗಳು ಯುವ ಜನತೆಗೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿ ಇಂದು ಪಕೋಡಾ ಮಾರಾಟ ನಡೆಸಲು ಹೇಳುತ್ತಿದ್ದಾರೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.

ಕಳೆದ ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿ ಅವರು ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪಕೋಡಾ ಮಾರಾಟ ಮಾಡುವುದು ಒಂದು ಸ್ವಯಂ ಉದ್ಯೋಗ ಎಂದು ಹೇಳಿದ್ದರು. ಪ್ರಧಾನಿಗಳ ಹೇಳಿಕೆಗೆ ದೇಶದ್ಯಾಂತ ಹಲವರು ಪಕೋಡಾ ತಯಾರಿಸಿ ಮಾರಾಟ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದರು. ಇದನ್ನು ಓದಿ: ಮೋದಿ ವಿರುದ್ಧ ಉದ್ಯೋಗ ಸೃಷ್ಟಿಗಾಗಿ Msc, MA, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ `ಪಕೋಡ’ ಪ್ರತಿಭಟನೆ

BJP PAKODA 2

BNG MODI 9

BNG MODI 8

BNG MODI 4

Share This Article
Leave a Comment

Leave a Reply

Your email address will not be published. Required fields are marked *