ಭಾರತದ ದಾಳಿಯನ್ನು ಪಾಕ್ ಸೇನಾ ಮುಖ್ಯಸ್ಥ ಒಪ್ಪಿಕೊಳ್ತಿಲ್ಲ – ಅಕ್ತರ್ ಟೀಕೆ
ಇಸ್ಲಾಮಾಬಾದ್: `ಆಪರೇಷನ್ ಸಿಂಧೂರ’ (Operation Sindoor) ವೇಳೆ ಪಾಕಿಸ್ತಾನದ (Pakistan) ಮೇಲೆ ಭಾರತ (India) ಬ್ರಹ್ಮೋಸ್ ದಾಳಿ (BrahMos Missile) ಮಾಡಿದೆ. ಆದರೆ, ಪಾಕಿಸ್ತಾನ ಸೇನಾ ಮುಖ್ಯಸ್ಥ ಮುನೀರ್ ಇದನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಪಾಕ್ ನಿವೃತ್ತ ಏರ್ ಮಾರ್ಷಲ್ ಮಸೂದ್ ಅಕ್ತರ್ (Masood Akthar) ತಿಳಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಭಾರತ ನಡೆಸಿದ `ಆಪರೇಷನ್ ಸಿಂಧೂರ’ದ ಅಡಿಯಲ್ಲಿ ಪಾಕ್ನ 9 ಉಗ್ರರ ನೆಲೆಗೆಳು ಸೇರಿದಂತೆ ಕರಾಚಿ ಬಳಿಯಿರುವ ಭೋಲಾರಿಯ ವಾಯುನೆಲೆ ಮೇಲೆ ಬ್ರಹ್ಮೋಸ್ ಕ್ಷಿಪಣಿ ದಾಳಿಯಾಗಿದೆ. ಮೊದಲು ಇದೇ ಜಾಗವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ವಾಯುನೆಲೆಯ ಹ್ಯಾಂಗರ್ಗೂ ಹಾನಿಯಾಗಿದೆ. ಜೊತೆಗೆ ವಾಯುಪಡೆ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆಯ (AWACS) ವಿಮಾನವು ಕೂಡ ಇದೇ ಸಮಯದಲ್ಲಿ ಪತನಗೊಂಡಿದೆ ಎಂದು ಒಪ್ಪಿಕೊಂಡಿದ್ದಾರೆ.ಇದನ್ನೂ ಓದಿ: ಇಡಿ ಭರ್ಜರಿ ಬೇಟೆ – 13 ಕಡೆ ದಾಳಿ, 32 ಕೋಟಿ ಮೌಲ್ಯದ ವಜ್ರಖಚಿತ ಆಭರಣ, ನಗದು ಜಪ್ತಿ
ದಾಳಿಯ ಬಗ್ಗೆ ಮಾಹಿತಿ ಬಿಚ್ಚಿಟ್ಟ ಅವರು, ಪಾಕಿಸ್ತಾನದ ವಾಯುನೆಲೆಗಳ ಪೈಕಿ ಭೋಲಾರಿಯು ಒಂದು. ಇದು ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಯಿಂದ 270 ಕಿ.ಮೀ ದೂರದಲ್ಲಿದೆ. ಭಾರತದ ಪಡೆಗಳು ಒಂದರ ನಂತರ ಒಂದರಂತೆ ನಾಲ್ಕು ಬ್ರಹ್ಮೋಸ್ ಕ್ಷಿಪಣಿಗಳನ್ನು ಹಾರಿಸಿ ದಾಳಿ ನಡೆಸಿವೆ. ದಾಳಿಯ ವೇಳೆ ಒಂದು ಕ್ಷಿಪಣಿ ಭೋಲಾರಿ ವಾಯುನೆಲೆಯ ಹ್ಯಾಂಗರ್ಗೆ ಡಿಕ್ಕಿ ಹೊಡೆದಿದ್ದು, ಸಾವು-ನೋವುಗಳು ಕೂಡ ವರದಿಯಾಗಿವೆ. ಪಾಕಿಸ್ತಾನದ ಮೂರು ವಾಯುನೆಲೆಗಳಾದ ಉತ್ತರ ವಾಯು ಕಮಾಂಡ್, ಕೇಂದ್ರ ವಾಯುನೆಲೆ ಮತ್ತು ದಕ್ಷಿಣ ವಾಯುನೆಲೆಗಳ ಅಡಿಯಲ್ಲಿರುವ ವಾಯುನೆಲೆಗಳ ಮೇಲೆ ಭಾರತ ದಾಳಿ ನಡೆಸಿದೆ. ಅಲ್ಲದೆ ಮ್ಯಾಕ್ಸರ್ ಟೆಕ್ನಾಲಜೀಸ್ ಬಿಡುಗಡೆ ಮಾಡಿದ ಸ್ಯಾಟ್ಲೈಟ್ ಚಿತ್ರಗಳಲ್ಲಿ ದಾಳಿಯಾಗಿರುವುದು ಸಾಬೀತಾಗಿದ್ದು, ಹಾನಿಯ ದೃಶ್ಯಗಳನ್ನು ತೋರಿಸಿದೆ. ಆದರೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಮುನೀರ್ ಇದನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
PIB ಮಾಹಿತಿ ಪ್ರಕಾರ, ಈ ದಾಳಿಯಿಂದಾಗಿ ಸ್ಕ್ವಾಡ್ರನ್ ಲೀಡರ್ ಉಸ್ಮಾನ್ ಯೂಸುಫ್ ಮತ್ತು ನಾಲ್ವರು ವಾಯುಪಡೆ ಸಿಬ್ಬಂದಿ ಸೇರಿದಂತೆ 50 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ಪಾಕಿಸ್ತಾನಿ ವಿಮಾನಗಳು ನಾಶವಾಗಿವೆ. ಅದಲ್ಲದೇ ಪಾಕ್ ವಾಯುಪಡೆಯ ಮೂಲಸೌಕರ್ಯದ ಸುಮಾರು ಶೇಕಡ 20ರಷ್ಟು ನಾಶವಾಗಿದೆ ಎಂದು ವರದಿ ಮಾಡಿದೆ.
ಬ್ರಹ್ಮೋಸ್ ಇಂಡೋ-ರಷ್ಯಾದ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯಾಗಿದ್ದು, ಇದನ್ನು ಭೂ, ವಾಯು ಹಾಗೂ ಜಲ ಮೂರು ಸೇನೆ ಬಳಸಬಹುದಾಗಿದೆ. ಭಾರತವು SU-30 MKI ಯುದ್ಧವಿಮಾನದಿಂದ ಬ್ರಹ್ಮೋಸ್ ಕ್ಷಿಪಣಿಯನ್ನು ಬಳಸಿದೆ ಎನ್ನಲಾಗಿದೆ.ಇದನ್ನೂ ಓದಿ: ‘ಡ್ರ್ಯಾಗನ್’ ನಟನಿಗೆ ಹೆಚ್ಚಿದೆ ಬೇಡಿಕೆ- ಸಾಲು ಸಾಲು ಚಿತ್ರಗಳಲ್ಲಿ ನಟ