Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 125 ವಯಸ್ಸಿನ ಪದ್ಮಶ್ರೀ ಪುರಸ್ಕೃತ ಸ್ವಾಮಿ ಶಿವಾನಂದರ ಆರೋಗ್ಯದ ಗುಟ್ಟೇನು ಗೊತ್ತಾ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | States | Karnataka | 125 ವಯಸ್ಸಿನ ಪದ್ಮಶ್ರೀ ಪುರಸ್ಕೃತ ಸ್ವಾಮಿ ಶಿವಾನಂದರ ಆರೋಗ್ಯದ ಗುಟ್ಟೇನು ಗೊತ್ತಾ?

Karnataka

125 ವಯಸ್ಸಿನ ಪದ್ಮಶ್ರೀ ಪುರಸ್ಕೃತ ಸ್ವಾಮಿ ಶಿವಾನಂದರ ಆರೋಗ್ಯದ ಗುಟ್ಟೇನು ಗೊತ್ತಾ?

Public TV
Last updated: March 22, 2022 5:24 pm
Public TV
Share
3 Min Read
SwamiSivananda
SHARE

ನವದೆಹಲಿ: ಯೋಗ ಕ್ಷೇತ್ರದ ಸಾಧನೆಗಾಗಿ ಸ್ವಾಮಿ ಶಿವಾನಂದ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. 125 ವಯಸ್ಸಿನಲ್ಲಿಯೂ ಸ್ಥಿರ ಆರೋಗ್ಯ, ಸದೃಢ ದೇಹವನ್ನು ಹೊಂದಿರುವ ಇವರು ತುಂಬಾ ವಿಭಿನ್ನ ಮತ್ತು ಸರಳ ಆಹಾರ ಪದ್ಧತಿಯನ್ನು ಅನುಸರಿಸುತ್ತಾರೆ.

125 ವರ್ಷ ವಯಸ್ಸಿನ ಯೋಗ ದಂತಕಥೆ ಆಗಿರುವ ಸ್ವಾಮಿ ಶಿವಾನಂದ ಅವರು ನಿನ್ನೆ ರಾಷ್ಟ್ರಪತಿ ಭವನದಲ್ಲಿ ಅನೇಕ ಮಹಾನ್ ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಸ್ವೀಕರಿಸಿದ್ದಾರೆ. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಸೇರಿ ಇನ್ನೂ ಅನೇಕ ಗಣ್ಯರು ಭಾಗವಹಿಸಿದ್ದರು.

ಈ ಸಮಾರಂಭದಲ್ಲಿ ತುಂಬ ಗಮನಸೆಳೆದವರು ವಾರಾಣಸಿಯ ಯೋಗ ಗುರು ಸ್ವಾಮಿ ಶಿವಾನಂದ  ಅವರು ನಿನ್ನೆ ಪ್ರಶಸ್ತಿ ಸ್ವೀಕಾರ ಮಾಡುವ ವೇಳೆ ಇವರು ನಡೆದುಕೊಂಡ ರೀತಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಗೌರವ ಸ್ವೀಕರಿಸುವ ಮೊದಲು ಪ್ರಧಾನಿ, ರಾಷ್ಟ್ರಪತಿಗಳ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಯೋಗ ಗುರುವಿನ ಗೌರವಾರ್ಥವಾಗಿ, ಪ್ರಧಾನಿ ಮೋದಿ ತಕ್ಷಣವೇ ನಮಸ್ಕರಿಸಿ ನೆಲವನ್ನು ಮುಟ್ಟಿದರು. ಗುರು ಸ್ವಾಮಿ ಶಿವಾನಂದ ಅವರು ಬಿಳಿ ಕುರ್ತಾ ಮತ್ತು ಧೋತಿಯನ್ನು ಧರಿಸಿ ತುಂಬಾ ಸರಳವಾಗಿ ಕಾಣಿಸಿಕೊಂಡಿದ್ದರು.

swami sivananda and modi

ಹುಟ್ಟು: ಶಿವಾನಂದ ಬಾಬಾ ಅವರು 1896ರ ಆಗಸ್ಟ್ 8ರಂದು ಅವಿಭಜಿತ ಭಾರತದ ಸೈಲ್ಹೆಟ್‍ನಲ್ಲಿ ಜನಿಸಿದರು. 6 ನೇ ವಯಸ್ಸಿನಲ್ಲಿಯೇ ತಾಯಿ ಮತ್ತು ತಂದೆಯನ್ನು ಕಳೆದುಕೊಂಡವರು. ನಂತರ ಪಶ್ಚಿಮ ಬಂಗಾಳದ ನಬದ್ವೀಪ್‍ನಲ್ಲಿರುವ ಗುರೂಜಿಯ ಆಶ್ರಮದಲ್ಲಿ ತಂಗಿದ್ದರು. ಗುರು ಓಂಕಾರಾನಂದ ಗೋಸ್ವಾಮಿಗಳು ಅವರನ್ನು ನೋಡಿಕೊಂಡರು ಮತ್ತು ಎಲ್ಲಾ ಪ್ರಾಯೋಗಿಕ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನು ನೀಡಿದರು. ಮುಂಜಾನೆಯ ಯೋಗವನ್ನು ಒಳಗೊಂಡಿರುವ ಅವರ ಶಿಸ್ತುಬದ್ಧ ಜೀವನವನ್ನು ಅಳವಡಿಸಿಕೊಂಡರು. ಗುರು ಓಂಕಾರಾನಂದ ಅವರ ಶಿಷ್ಯರಾದರು. 1925ರ ಹೊತ್ತಿಗೆ ಗುರುವಿನ ಆಣತಿ ಮೇರೆಗೆ ಪ್ರಪಂಚ ಪರ್ಯಟನೆ ಮಾಡಲು ತೆರಳಿದ್ದರು. ಸುಮಾರು 34 ವರ್ಷಗಳ ಕಾಲ ಇವರು ದೇಶ-ವಿದೇಶಗಳನ್ನು ಸುತ್ತಿದ್ದಾರೆ. ನಂತರ ಯೋಗದಲ್ಲಿ ಮಹಾನ್ ಸಾಧನೆ ಮಾಡಿದ್ದಾರೆ.

ಜೀವನ: ಸದ್ಯ ಅವರು ವಾರಾಣಸಿಯ ದುರ್ಗಾಕುಂಡ್‍ನಲ್ಲಿ ಮನೆಯೊಂದರ ಮೂರನೇ ಮಹಡಿಯಲ್ಲಿ ವಾಸವಾಗಿದ್ದಾರೆ. ಪ್ರತಿದಿನ ಎರಡು ಬಾರಿ ಮೆಟ್ಟಿಲು ಹತ್ತಿ, ಇಳಿಯುತ್ತಾರೆ. ಅವರು ಯಾರದ್ದೂ ಸಹಾಯವಿಲ್ಲದೆ ಮೆಟ್ಟಿಲು ಹತ್ತುತ್ತಾರೆ ಎಂದು ಅವರ ಶಿಷ್ಯಂದಿರು ತಿಳಿಸಿದ್ದಾರೆ. ಶಿವಾನಂದ ಬಾಬಾರ ತಂದೆ-ತಾಯಿ ಸಾಯಲು ಕಾರಣ ಹಸಿವು. ಇವರೂ ಕೂಡ ಬಾಲ್ಯವನ್ನೆಲ್ಲ ಬಹುತೇಕ ಅರ್ಧಹೊಟ್ಟೆಯಲ್ಲೇ ಕಳೆದಿದ್ದಾರೆ. ಸ್ವಾಮಿ ಶಿವಾನಂದರು ತಮ್ಮ ಜೀವನವನ್ನು ಮಾನವ ಸಮಾಜದ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟಿದ್ದಾರೆ.

ಆಹಾರ ಪದ್ಧತಿ: ಅವರ ಶಿಸ್ತಿನ ಯೋಗದ ಜೊತೆಗೆ, ಅವರ ಆಹಾರ ಪದ್ಧತಿಗಳು ನಾವೆಲ್ಲರೂ ಗಮನಿಸಬೇಕಾದ ಸಂಗತಿಯಾಗಿದೆ. ಅವುಗಳಲ್ಲಿ ಹೆಚ್ಚಿನವುಗಳನ್ನು ಅನುಸರಿಸುವುದು ಸುಲಭವಲ್ಲ. ಆದರೆ ಯೋಗ ಗುರುಗಳಿಗೆ ಇದು ರೋಗ ಮುಕ್ತ ಮತ್ತು ಉದ್ವೇಗ-ಮುಕ್ತ ಜೀವನವನ್ನು ನೀಡಿದೆ.

ಸ್ವಾಮಿ ಶಿವಾನಂದರು ಯಾವಾಗಲೂ ಎಣ್ಣೆಯಿಲ್ಲದ ಮತ್ತು ಮಸಾಲೆಗಳಿಲ್ಲದ ಅತ್ಯಂತ ಸರಳವಾದ ಆಹಾರವನ್ನು ಸೇವಿಸುತ್ತಾರೆ. ಅನ್ನ ಮತ್ತು ಬೇಯಿಸಿದ ದಾಲ್  ತಿನ್ನಲು ಇಷ್ಟಪಡುತ್ತಾರೆ. ಅವರು ಹಾಲು ಅಥವಾ ಹಣ್ಣುಗಳನ್ನು ತೆಗೆದುಕೊಳ್ಳುವುದಿಲ್ಲ, ಏಕೆಂದರೆ ಅವರು ಅಲಂಕಾರಿಕ ಆಹಾರಗಳು ಎಂದು ಭಾವಿಸುತ್ತಾರೆ.

ನಾನು ಸರಳ ಮತ್ತು ಶಿಸ್ತಿನ ಜೀವನವನ್ನು ನಡೆಸುತ್ತೇನೆ. ನಾನು ತುಂಬಾ ಸರಳವಾಗಿ ತಿನ್ನುತ್ತೇನೆ. ಎಣ್ಣೆ ಅಥವಾ ಮಸಾಲೆಗಳಿಲ್ಲದ ಬೇಯಿಸಿದ ಆಹಾರ, ಅಕ್ಕಿ ಮತ್ತು ಒಂದೆರಡು ಹಸಿರು ಮೆಣಸಿನಕಾಯಿಗಳೊಂದಿಗೆ ಬೇಯಿಸಿದ ದಾಲ್ ಎಂದು ಈ ಹಿಂದೆ ಅವರ ಖಾಸಗಿ ವಾಹಿನಿಯೊಂದಕ್ಕೆ ಹೇಳಿದ್ದಾರೆ.

125 ನೇ ವಯಸ್ಸಿನಲ್ಲಿಯೂ ಸಹ, ಅವರು ಇನ್ನೂ ಫಿಟ್ ಆಗಿದ್ದಾರೆ. ಯಾವುದೇ ವೈದ್ಯಕೀಯ ತೊಂದರೆಗಳಿಲ್ಲ. ಸೂರ್ಯ ಹುಟ್ಟುವ 3 ಗಂಟೆಗೂ ಮುನ್ನ ಎಚ್ಚರಗೊಳ್ಳುತ್ತಾರೆ. ಅವರ ಆರೋಗ್ಯಕರ ಮತ್ತು ದೀರ್ಘಾವಧಿಯ ಜೀವನವು ಹೆಚ್ಚಾಗಿ ಅಂತರರಾಷ್ಟ್ರೀಯ ಮಾಧ್ಯಮಗಳ ಗಮನವನ್ನು ಸೆಳೆಯುತ್ತದೆ.

TAGGED:bengaluruswami sivanandaವಾರಾಣಸಿಶಿವಾನಂದ ಬಾಬಾ
Share This Article
Facebook Whatsapp Whatsapp Telegram

Cinema news

Rachita Ram
ಪ್ರೇಮಿಗಳ ದಿನದಂದೆ I Love You ಅಂತ ರಚ್ಚು ಪ್ರಪೋಸ್‌ – ಹೇಳಿದ್ದು ಯಾರಿಗೆ?
Bengaluru City Cinema Latest Main Post Sandalwood
ranveer singh 2
ಬಿಷ್ಣೋಯ್ ಗ್ಯಾಂಗ್‌ನಿಂದ ಮತ್ತೆ ರಣವೀರ್ ಸಿಂಗ್‌ಗೆ ಬೆದರಿಕೆ
Cinema Latest Top Stories
Joe Simon
ಫಿಲ್ಮ್‌ ಚೇಂಬರ್‌ನಲ್ಲೇ ಹೃದಯಾಘಾತ – ಸಾಹಸಸಿಂಹ ಚಿತ್ರದ ನಿರ್ದೇಶಕ ಜೊ ಸೈಮನ್ ನಿಧನ
Cinema Latest Main Post
rishab shetty public tv anniversary
ಪಬ್ಲಿಕ್‌ ಟಿವಿಗೆ ಇನ್ನೂ ಟೀನೇಜ್‌, ರಂಗಣ್ಣ ಸರ್‌ ಈ ಸಮಾಜಕ್ಕೆ ದೊಡ್ಡ ಕೊಡುಗೆ: ರಿಷಬ್‌ ಶೆಟ್ಟಿ
Bengaluru City Cinema Latest Main Post Sandalwood

You Might Also Like

freshwater crab
Latest

ಪಶ್ಚಿಮ ಘಟ್ಟದಲ್ಲಿ ಹೊಸ ಪ್ರಭೇದ ಸಿಹಿನೀರಿನ ಏಡಿ ಪತ್ತೆ

Public TV
By Public TV
3 minutes ago
Haveri Samavesha
Districts

ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 1,000 ದಿನಗಳ ಸಂಭ್ರಮ – ಹಾವೇರಿ ಸಮಾವೇಶದಲ್ಲಿ ಸಿಎಂ ಪ್ರತಿಮೆ ಅನಾವರಣ

Public TV
By Public TV
13 minutes ago
railway track
Bellary

ಬಳ್ಳಾರಿ, ಹೊಸಪೇಟೆ ನಡುವೆ ರೈಲ್ವೆ ಮಲ್ಟಿಟ್ರ‍್ಯಾಕ್ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ

Public TV
By Public TV
18 minutes ago
Online Game
Explainer

Explainer | ಪಬ್‌ಜಿ, ಬ್ಲೂ ವೇಲ್‌, ಕೊರಿಯನ್‌ ಲವ್‌ ಗೇಮ್‌ – ಮಕ್ಕಳ ಜೀವ ಕಸಿಯುತ್ತಿದೆ ಆನ್‌ಲೈನ್‌ ಗೇಮಿಂಗ್‌ ಗೀಳು

Public TV
By Public TV
20 minutes ago
Mumbai Vande Bharat Express Train Man Arrested For Releasing Snake in Washroom
Latest

ಮುಂಬೈ-ಸೋಲಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಹಾವು ಬಿಟ್ಟ ವ್ಯಕ್ತಿ ಅರೆಸ್ಟ್

Public TV
By Public TV
37 minutes ago
HDK 2 1
Bengaluru City

ರಾಜ್ಯದಲ್ಲಿರೋ ಭ್ರಷ್ಟ, ಕೆಟ್ಟ ಸರ್ಕಾರ ತೆಗೆಯೋದು ನನ್ನ ಅಜೆಂಡಾ – ಹೆಚ್‌ಡಿಕೆ

Public TV
By Public TV
41 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?