ಕಾರಹುಣ್ಣಿಮೆ ಕರಿ ಹರಿಯುವ ವೇಳೆ ಭೀಮಾ ನದಿಗೆ ಹಾರಿ ಪ್ರಾಣಬಿಟ್ಟ ಎತ್ತು

Public TV
1 Min Read
Ox vijayapura

ವಿಜಯಪುರ: ಕಾರಹುಣ್ಣಿಮೆ ಪ್ರಯುಕ್ತ ಕರಿ ಹರಿಯುವ ವೇಳೆ ಭೀಮಾ ನದಿಗೆ ಹಾರಿ ಎತ್ತು ಪ್ರಾಣಬಿಟ್ಟ ಘಟನೆ ವಿಜಯಪುರದ ಸಿಂದಗಿ ತಾಲೂಕಿನ ಕುಮಸಗಿ ಗ್ರಾಮದಲ್ಲಿ ನಡೆದಿದೆ.

ಸಿಂದಗಿ ತಾಲೂಕಿನ ಕುಮಸಗಿ ಗ್ರಾಮದಲ್ಲಿ ಕಾರಹುಣ್ಣಿಮೆ ಪ್ರಯುಕ್ತ ನಡೆದಿದ್ದ ಕರಿ ಹರಿಯುವ ವೇಳೆ ಎತ್ತುಗಳ ಮೆರವಣಿಗೆ ವೇಳೆ ಈ ಅವಘಡ ನಡೆದಿದೆ. ಗ್ರಾಮದ ರೈತ ಸತೀಶ ಪಾಟೀಲ್ ಎಂಬುವವರಿಗೆ ಸೇರಿದ ಎತ್ತು ಇದಾಗಿದೆ. ಇದನ್ನೂ ಓದಿ: ಪ್ರಾರ್ಥನಾ ಮಂದಿರಗಳಲ್ಲಿ ಮೈಕ್‌ ಸಕ್ರಮಕ್ಕೆ ನೀಡಿದ್ದ ಗಡುವು ಅಂತ್ಯ – ಇಂದಿನಿಂದ ಪೊಲೀಸ್‌ ಕಾರ್ಯಾಚರಣೆ

Ox vijayapura 1

ಕರಿ ಹರಿಯುವ ವೇಳೆ ಹಲಗೆ ಬಾರಿಸುವ ಶಬ್ದಕ್ಕೆ ಬೆದರಿದ ಎತ್ತು ಗ್ರಾಮದ ಹೊರಗೆ ಓಡಿದೆ. ಹೊರವಲಯದಲ್ಲಿರುವ ಭೀಮಾ ನದಿಗೆ ಬಿದ್ದ ಎತ್ತು ಮೀನುಗಾರರ ಬಲೆಗೆ ಸಿಲುಕಿ ಮೃತಪಟ್ಟಿದೆ. ಇದನ್ನೂ ಓದಿ: 2 ಶಿಕ್ಷಕ, 2 ಪದವೀಧರ ಕ್ಷೇತ್ರಗಳ ಫಲಿತಾಂಶ ಇಂದು- 3 ಪಕ್ಷಗಳ ಭವಿಷ್ಯ ನಿರ್ಧಾರ

Share This Article
Leave a Comment

Leave a Reply

Your email address will not be published. Required fields are marked *