ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿರುವ ಶ್ರೀಸಾಯಿ ಎಂಟರ್ ಪ್ರೈಸಸ್ ಎಂಬ ಸಂಸ್ಥೆ ಲಕ್ಕಿ ಡ್ರಾ ಹೆಸರಿನಲ್ಲಿ ಗ್ರಾಹಕರಿಗೆ ಭಾರೀ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಲಕ್ಕಿ ಡ್ರಾ ಮಾಡೋದಾಗಿ ಶ್ರೀಸಾಯಿ ಎಂಟರ್ಪ್ರೈಸಸ್ ಮಾಲೀಕ ಪ್ರತಿಯೊಬ್ಬರಿಂದ 750 ರೂಪಾಯಿ ವಸೂಲಿ ಮಾಡಿದ್ದನು. ಆದರೆ ಇಂದು ಲಕ್ಕಿ ಡ್ರಾ ಮಾಡದೆ ಗ್ರಾಹಕರಿಗೆ ಲಕ್ಷಾಂತರ ರೂಪಾಯಿ ಮೋಸ ಮಾಡಿ ಮಾಲೀಕ ಪರಾರಿಯಾಗಿದ್ದಾನೆ. ಇದರಿಂದಾಗಿ ಗ್ರಾಹಕರು ಕುರ್ಚಿ, ಪೀಠೋಪಕರಣ ಧ್ವಂಸ ಮಾಡಿ ಆಕ್ರೋಶವನ್ನು ಹೊರಹಾಕಿದ್ದಾರೆ. ಇದರಿಂದಾಗಿ ಜನರನ್ನ ಚದುರಿಸಲು ಸಿಪಿಐ ದ್ಯಾಮನ್ನವರ್ ತಂಡ ಲಘು ಲಾಠಿ ಪ್ರಹಾರ ನಡೆಸಿದೆ.
ಸದ್ಯಕ್ಕೆ ಸ್ಥಳದಲ್ಲಿ ಪ್ರಕ್ಷುಬ್ದ ವಾತಾವರಣ ಉಂಟಾಗಿದೆ. ಸಿದಂಗಿ ಪೊಲೀಸರು ಡ್ರಾ ಸಮಿತಿ ಸದಸ್ಯರನ್ನ ಬಂಧಿಸಿದ್ದು, ಸ್ಥಳಕ್ಕೆ ಡಿಎಸ್ಪಿ ರವೀಂದ್ರ ಶಿರೂರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿಯನ್ನು ಪಡೆದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv