ಬೆಳಗಾವಿ: ಬಿಜೆಪಿ ಪಕ್ಷದ ಸಮನ್ವಯದ ಕೊರತೆಯೇ ವಿಧಾನ ಪರಿಷತ್ ಚುನಾವಣೆ ಸೋಲಿಗೆ ಕಾರಣ ಎಂದು ಬಿಜೆಪಿ ನಯಕ ಮಹಾಂತೇಶ ಕವಟಗಿಮಠ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ ನಕಲಿ ನಂದಿನಿ ತುಪ್ಪ ತಯಾರಿಕೆ ಜಾಲ ಪತ್ತೆ- ಗೋಡೌನ್ ಮೇಲೆ ಅಧಿಕಾರಿಗಳ ದಾಳಿ
- Advertisement 2
ಬೆಳಗಾವಿ ಪರಿಷತ್ ಸೋಲಿನ ಅವಲೋಕನ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲ ಪೋಸ್ಟ್ ಮಾರ್ಟಮ್ ಆಗಿದೆ ಇನ್ನೇನು ಮಾತನಾಡಬೇಕು. ಸಭೆಯಲ್ಲಿ ಎಲ್ಲಿ ತಪ್ಪಾಗಿದೆ ಎನ್ನುವ ಬಗ್ಗೆ ರಾಜ್ಯಾಧ್ಯಕ್ಷರು ವಿವರ ಪಡೆದುಕೊಂಡಿದ್ದಾರೆ. ಯಾರ ಬಗ್ಗೆಯೂ ಶಿಸ್ತು ಕ್ರಮದ ಬಗ್ಗೆ ಚರ್ಚೆಯಾಗಿಲ್ಲ ಎಂದರು. ಇದನ್ನೂ ಓದಿ: ಶಾಂತಿ ಕದಡುವುದೇ ನಾಡದ್ರೋಹಿ ಕಾಂಗ್ರೆಸ್ ಉದ್ದೇಶ – ಕೈ ವಿರುದ್ಧ ಬಿಜೆಪಿ ಟ್ವೀಟ್ ದಾಳಿ
- Advertisement 3
- Advertisement 4
ಪಕ್ಷೇತರರ ಅಭ್ಯರ್ಥಿಯಿಂದ ಸೋಲಾಯ್ತು ಎಂದು ನಾನು ಹೇಳೋಕೆ ಆಗಲ್ಲ. ಪ್ರಥಮ ಪಾಶಸ್ತ್ಯದ ಮತ ಕೇಳೋದರಲ್ಲಿ ವಿಫಲವಾಗಿದ್ದೇವೆ ಎನ್ನುವುದು ಕಷ್ಟ. ಆದರೆ ಅತಿಯಾದ ಆತ್ಮವಿಶ್ವಾಸ ಸೋಲಿಗೆ ಕಾರಣವಾಯ್ತು. ಅಂತರಿಕವಾಗಿ ಸಾಕಷ್ಟು ಚರ್ಚೆಯಾಗಿದೆ. ಈ ಬಗ್ಗೆ ಎಲ್ಲ ಹೇಳೋಕೆ ಆಗೋದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.