ನವದೆಹಲಿ: ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಯ ವಿಜಯೋತ್ಸವವನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಪಂಜಾಬ್ನ ಅದಮ್ಪುರ ಏರ್ಬೇಸ್ಗೆ (Adampur Air Base) ಭೇಟಿ ನೀಡಿ ಸೈನಿಕರ ಜೊತೆ ಆಚರಿಸಿದ್ದಾರೆ.
ಮೋದಿ ಅವರು ಅದಮ್ಪುರಕ್ಕೆ ಭೇಟಿ ನೀಡಲು ಕಾರಣವೂ ಇದೆ. ಕಳೆದ ವಾರ ಪಾಕಿಸ್ತಾನ (Pakistan) ಡ್ರೋನ್ಗಳು ಮತ್ತು ಕ್ಷಿಪಣಿ ಮೂಲಕ ಅದಮ್ಪುರವನ್ನು ಗುರಿಯಾಗಿಸಿ ಭಾರೀ ಪ್ರಮಾಣದಲ್ಲಿ ದಾಳಿ ನಡೆಸುತ್ತಿತ್ತು. ಇದನ್ನೂ ಓದಿ: ಹ್ಯಾಂಗರ್ಸ್ ನಾಶ, ರನ್ವೇಗಳಿಗೆ ಹಾನಿ – ಪಾಕ್ ದುಸ್ಥಿತಿ ಉಪಗ್ರಹ ಚಿತ್ರಗಳಲ್ಲಿ ಬಹಿರಂಗ
ದಾಳಿ ನಡೆಸಿದ ಬಳಿಕ ಪಾಕ್ ಜೆಎಫ್ 17 ಯುದ್ಧ ವಿಮಾನದ ಮೂಲಕ ಅದಮ್ಪುರ ವಾಯುನೆಲೆಯ ಮೇಲೆ ದಾಳಿ ನಡೆಸಿದ್ದೇವೆ. ಅಷ್ಟೇ ಅಲ್ಲದೇ ಅಲ್ಲಿ ನಿಯೋಜನೆಗೊಂಡಿದ್ದ ರಷ್ಯಾ ನಿರ್ಮಿತ S-400 ವಾಯು ರಕ್ಷಣಾ ವ್ಯವಸ್ಥೆ ಧ್ವಂಸ ಮಾಡಿದ್ದೇವೆ ಎಂದು ಹೇಳಿಕೊಂಡಿತ್ತು. ಈ ಸುಳ್ಳು ಆರೋಪ ನಿಜವೆಂದು ಭಾವಿಸಿ ವಿದೇಶಿ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಭಾರತ ಈ ಆರೋಪವನ್ನು ಅಲ್ಲಗೆಳೆದಿದ್ದರೂ ಪಾಕ್ ಹೇಳಿದ್ದೇ ನಿಜ ಎಂಬಂತೆ ವರದಿಯಾಗುತ್ತಿತ್ತು. ಈ ಕಾರಣಕ್ಕೆ ಪಾಕ್ ಆರೋಪ ಸುಳ್ಳು ಎಂದು ಸಾಬೀತು ಪಡಿಸಲು ಮೋದಿ ಅವರು ಈ ವಾಯುನೆಲೆಗೆ ಭೇಟಿ ನೀಡಿ ಸೈನಿಕರ ಜೊತೆ ವಿಜಯೋತ್ಸವ ಆಚರಿಸಿದರು. ಇದನ್ನೂ ಓದಿ: ಪಾಕ್ ಮತ್ತೆ ದಾಳಿ ಮಾಡಿದ್ರೆ ಭಾರತ ನುಗ್ಗಿ ಹೊಡೆಯುತ್ತೆ: ಮೋದಿ
ಅದಮ್ಪುರ ವಾಯುನೆಲೆ ಮತ್ತು ರನ್ವೇ ಎಲ್ಲವೂ ಸುರಕ್ಷಿತವಾಗಿದೆ.ಅಷ್ಟೇ ಅಲ್ಲದೇ ಎಸ್-400 ಸುದರ್ಶನ ಚಕ್ರವೂ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ವಿಚಾರವನ್ನು ವಿಶ್ವಕ್ಕೆ ತಿಳಿಸಲು ಮೋದಿ ಈ ವಾಯುನೆಲೆಗೆ ಭೇಟಿ ನೀಡಿದ್ದರು. ಮೋದಿ ಅವರು ಭಾಷಣ ಮಾಡುವಾಗಲೂ ಎಸ್-400 ಹಿಂದಿನಿಂದ ಸ್ಪಷ್ಟವಾಗಿ ಕಾಣುತ್ತಿತ್ತು.
ಭಾರತದ 2ನೇ ಅತಿದೊಡ್ಡ ಏರ್ಬೇಸ್ ಅದಮ್ಪುರ ಆಗಿದ್ದು ಪಂಜಾಬ್, ರಾಜಸ್ಥಾನ, ಜಮ್ಮು ಕಾಶ್ಮೀರವನ್ನು ರಕ್ಷಣೆ ಮಾಡುತ್ತದೆ. ಪಾಕ್ ಗಡಿಯಿಂದ 100 ಕಿ.ಮೀ. ದೂರದಲ್ಲಿರುವ ಅದಮ್ಪುರ 1965ರ ಪಾಕ್ ವಿರುದ್ಧದ ಯುದ್ಧದಲ್ಲೂ ಈ ಏರ್ಬೇಸ್ ಅಭೇದ್ಯವಾಗಿತ್ತು.
ಆಪರೇಷನ್ ಸಿಂಧೂರಕ್ಕೆ ಆದಮ್ಪುರ ಏರ್ಬೇಸ್ ಬಳಕೆ ಮಾಡಲಾಗಿತ್ತು. ಪಾಕ್ ಕಳಹಿಸುತ್ತಿದ್ದ ಕ್ಷಿಪಣಿ ಮತ್ತು ಡ್ರೋನ್ಗಳನ್ನು ಈ ಜಾಗದಿಂದಲೇ ಕಾರ್ಯಾಚರಣೆ ನಡೆಸಿ ಆಕಾಶದಲ್ಲೇ ಧ್ವಂಸ ಮಾಡಲಾಗುತ್ತಿತ್ತು. ಈ ಏರ್ಬೇಸ್ ಸುಖೋಯ್ 7, ಮಿಗ್ 21 ಫೈಟರ್ಜೆಟ್ಗಳ ತಾಣವಾಗಿದೆ. ಮಿಸೈಲ್, ರಾಡಾರ್ ಘಟಕವನ್ನೂ ಆದಮ್ಪುರ ಏರ್ಬೇಸ್ ಹೊಂದಿದೆ. S-400 `ಸುದರ್ಶನ ಚಕ್ರ’ವನ್ನು 2022ರಲ್ಲಿ ಇಲ್ಲಿಗೆ ನಿಯೋಜಿಸಲಾಗಿತ್ತು.