ನವದೆಹಲಿ: ಆಪರೇಷನ್ ಸಿಂಧೂರದಲ್ಲಿ (Operation Sindoor) ಪಾಕಿಸ್ತಾನದ (Pakistan) ಜೊತೆಗಿನ ಸಂಘರ್ಷದಲ್ಲಿ ಭಾರತದ ಎಷ್ಟು ಜೆಟ್ಗಳನ್ನು ಕಳೆದುಕೊಂಡಿದ್ದೇವೆ ಅಂತ ಕಾಂಗ್ರೆಸ್ ಲೆಕ್ಕ ಕೇಳುತ್ತಿರುವ ಹೊತ್ತಲ್ಲೇ ಇದೇ ಮೊದಲ ಬಾರಿಗೆ ಭದ್ರತಾ ಪಡೆಗಳ ಮುಖ್ಯಸ್ಥ ಅನಿಲ್ ಚೌಹಾಣ್ (Anil Chauhan) ಪ್ರತಿಕ್ರಿಯೆ ನೀಡಿದ್ದಾರೆ.
ಭಾರತೀಯ ಜೆಟ್ಗಳು ಧ್ವಂಸಗೊಂಡಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. (ಬ್ಲೂಂಬರ್ಗ್) ಟಿವಿ ಸಂದರ್ಶನವೊಂದರಲ್ಲಿ ಮಾತಾಡಿರುವ ಅನಿಲ್ ಚೌಹಾಣ್, ಪಾಕಿಸ್ತಾನವು ‘6 ಭಾರತದ ಯುದ್ಧವಿಮಾನಗಳನ್ನು ಹೊಡೆದಿದ್ದೇವೆ’ ಅಂತ ಹೇಳಿಕೊಳ್ತಿರೋದು ಖಂಡಿತವಾಗಿಯೂ ಸರಿಯಲ್ಲ. ಆದರೆ, ಎಷ್ಟು ಜೆಟ್ಗಳು ಪತನಗೊಂಡಿವೆ ಅನ್ನೋದನ್ನು ಹೇಳಿಲ್ಲ. ಆದರೆ, ಎಷ್ಟು ಜೆಟ್ಗಳು ಪತನ ಆಗಿದೆ ಎನ್ನುವ ನಂಬರ್ಗಳು ಮುಖ್ಯವಲ್ಲ. ಅವು ಏಕೆ ಪತನಗೊಂಡವು? ನಾವೇನು ತಪ್ಪು ಮಾಡಿದ್ದೇವೆ ಅನ್ನೋದು ಮುಖ್ಯ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಗುಂಡಿಗೆ ಫಿರಂಗಿ ಗುಂಡುಗಳಿಂದಲೇ ಉತ್ತರ – ಭಯೋತ್ಪಾದಕರಿಗೆ ಮೋದಿ ಮತ್ತೆ ವಾರ್ನಿಂಗ್
ಯುದ್ಧತಂತ್ರದ ತಪ್ಪುಗಳನ್ನು ಅರ್ಥೈಸಿಕೊಂಡಿದ್ದೇವೆ. ಪತ್ತೆಹಚ್ಚಿ ಪರಿಹಾರವನ್ನೂ ಕಂಡುಕೊಂಡಿದ್ದೇವೆ. 2 ದಿನಗಳ ಬಳಿಕ ಮತ್ತೆ ನಮ್ಮ ಜೆಟ್ಗಳು ಲಾಂಗ್ರೇಂಜ್ ಟಾರ್ಗೆಟ್ ಮಾಡಿ ಹಾರಿವೆ ಎಂದಿದ್ದಾರೆ.
ಇದೇ ವೇಳೆ, 4 ದಿನಗಳ ಸಂಘರ್ಷವು ಎಂದಿಗೂ ನ್ಯೂಕ್ಲಿಯರ್ ವಾರ್ ಹಂತಕ್ಕೆ ತಲುಪಿರಲಿಲ್ಲ ಅಂತ ಸಿಡಿಎಸ್ ಅನಿಲ್ ಚೌಹಾಣ್ ತಿಳಿಸಿದ್ದಾರೆ. ಇದನ್ನೂ ಓದಿ: ‘ಆಪರೇಷನ್ ಸಿಂಧೂರ’ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ – ಪುಣೆ ಕಾನೂನು ವಿದ್ಯಾರ್ಥಿನಿ ಬಂಧನ