ಬೆಂಗಳೂರು: ಲೋಕಸಭಾ ಚುನಾವಣೆ (Loksabha Election) ಸ್ಪರ್ದೆ ವಿಚಾರದಲ್ಲಿ ನನಗಂತೂ ಯಾವುದೇ ಆಸಕ್ತಿ ಇಲ್ಲ. ನನ್ನ ದೊಡ್ಡ ಮಗನಿಗೆ ಆಸಕ್ತಿ ಇದೆ ಎಂದು ಸರ್ಕಾರದ ದೆಹಲಿ ಪ್ರತಿನಿಧಿ ಹಾಗೂ ಶಾಸಕ ಟಿ.ಬಿ ಜಯಚಂದ್ರ (TB Jayachandra) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ ರಾಜಕೀಯವಾಗಿ ಸಮುದಾಯಗಳನ್ನ ಓಲೈಕೆ ಮಾಡಬೇಕಾಗುತ್ತೆ. ತುಮಕೂರಿನಲ್ಲಿ ಕುಂಚಿಟಿಗ ಸಮುದಾಯಕ್ಕೆ ಪ್ರಾತಿನಿಧ್ಯ ಕೊಡೋದು ಸೂಕ್ತ ಮುದ್ದು ಹನುಮೇಗೌಡ, ಸೋಮಣ್ಣ ಬಗ್ಗೆ ಊಹಾಪೋಹ ಮಾತುಗಳು ಬರುತ್ತವೆ ಎಂದಿದ್ದಾರೆ. ಇದನ್ನೂ ಓದಿ: MBA ಓದಲು ಇಟಲಿಗೆ ತೆರಳಿದ್ದ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆ
ಅವರು ಬಿಜೆಪಿ ಪಕ್ಷದಲ್ಲೇ ಇದ್ದಾರೆ. ತುಮಕೂರು ಬಗ್ಗೆ ಚರ್ಚೆ ಆಗಿಲ್ಲ, ಚಿತ್ರದುರ್ಗದ ಬಗ್ಗೆ ಚರ್ಚೆ ಆಗಿದೆ. ಮುದ್ದಹನುಮೇಗೌಡ ಕಾಂಗ್ರೆಸ್ಗೆ ಖಂಡಿತಾ ಅನಿವಾರ್ಯವಲ್ಲ. ಅವರನ್ನ ವಾಪಸ್ ಕರೆದುಕೊಂಡು ಬರೋದು ಅಷ್ಟು ಸಮಂಜಸವಲ್ಲ. ವಿ.ಸೋಮಣ್ಣ, ಮುದ್ದಹನುಮೇಗೌಡ ಇಬ್ಬರೂ ಬಿಜೆಪಿಯಲ್ಲೇ ಇದ್ದಾರೆ. ಅವರು ಅಲ್ಲಿರುವಾಗ ನಮ್ಮಲ್ಲೇಕೆ ಚರ್ಚೆ ಎಂದಿದ್ದಾರೆ.