ನಯನತಾರಾ ಮದುವೆಯಾಗಿ ಇನ್ನೂ ಒಂದು ವಾರ ಕೂಡ ಕಳೆದಿಲ್ಲ. ಮದುವೆಯ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ ಲೇಡಿ ಸೂಪರ್ ಸ್ಟಾರ್. ಮದುವೆಯ ನಂತರ ನಟನೆಗೆ ಸಂಬಂಧಿಸಿದಂತೆ ಅವರು ಕೆಲವು ನಿರ್ಧಾರಗಳನ್ನು ತಗೆದುಕೊಂಡಿದ್ದು, ಅದರಿಂದಾಗಿ ಅಭಿಮಾನಿಗಳಿಗೆ ಖಂಡಿತಾ ನಿರಾಸೆ ಆಗದೇ ಇರದು. ಅಲ್ಲದೇ, ಈ ನಿರ್ಧಾರ ತಗೆದುಕೊಂಡಿದ್ದು ಯಾಕೆ ಎಂದು ತಮಿಳು ಸಿನಿಮಾ ರಂಗ ತಲೆ ಕೆಡಿಸಿಕೊಂಡು ಕೂತಿದೆ.
ಮದುವೆಯ ಮಾರನೇ ದಿನವೇ ಅವರು ತಿರುಪತಿ ದರ್ಶನಕ್ಕೆ ಹೋಗಿ ಎಡವಟ್ಟು ಮಾಡಿಕೊಂಡರು. ಚಪ್ಪಲಿ ಧರಿಸಿ ದೇವಸ್ಥಾನದ ಆವರಣದಲ್ಲಿ ಓಡಾಡಿದ್ದಕ್ಕಾಗಿ ತಿಮ್ಮಪ್ಪನ ಭಕ್ತರ ಕೋಪಕ್ಕೆ ಕಾರಣವಾದರು. ಅಲ್ಲದೇ, ದೇವಸ್ಥಾನದ ಅಧಿಕಾರಿಗಳಿ ನೋಟಿಸ್ ಗೆ ಅವರು ಉತ್ತರ ಕೊಡಬೇಕಾಗಿ ಬಂತು. ಇದರ ಬೆನ್ನಲ್ಲೇ ಅವರು ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದು, ಅದರಿಂದಾಗಿ ಅಭಿಮಾನಿಗಳಿಗೆ ಕೊಂಚ ನಿರಾಸೆ ಆಗದೇ ಇರದು. ಇದನ್ನೂ ಓದಿ:ರಾಜಮೌಳಿ ಮುಂದಿನ ಚಿತ್ರಕ್ಕೆ ಐಶ್ವರ್ಯ ರೈ ನಾಯಕಿ?
ನಯನತಾರಾ ಲೇಡಿ ಸೂಪರ್ ಸ್ಟಾರ್. ಪವರ್ ಫುಲ್ ಪಾತ್ರಗಳಿಗೂ ಸೈ, ರೊಮ್ಯಾಂಟಿಕ್ ದೃಶ್ಯಗಳಿಗೂ ಜೈ ಎನ್ನುತ್ತಿದ್ದರು. ಅದರಲ್ಲೂ ಇಂಟಿಮೇಟ್ ದೃಶ್ಯಗಳು ಇದ್ದಾಗ, ಆ ಪಾತ್ರದೊಳಗೆ ತಲ್ಲೀಣರಾಗುತ್ತಿದ್ದರು. ಇನ್ಮುಂದೆ ಅವರು ಈ ರೀತಿಯ ಪಾತ್ರಗಳಲ್ಲಿ ಮತ್ತು ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದಾರಂತೆ. ಹಾಗಂತ ಅಲ್ಲಿನ ನಿರ್ಮಾಪಕರಿಗೆ ಸಂದೇಶ ಕಳುಹಿಸಿರುವುದಾಗಿ ಅಲ್ಲಿನ ಮಾಧ್ಯಮಗಳು ಸುದ್ದಿ ಮಾಡಿವೆ. ಇದನ್ನು ಕೇಳಿದ ನಯನತಾರಾ ಅಭಿಮಾನಿಗಳಿಗೆ ಕೊಂಚ ನಿರಾಸೆಯೂ ಆಗಿದೆ ಎಂದೂ ಸುದ್ದಿಯಾಗಿದೆ.