ಚಿಕ್ಕಬಳ್ಳಾಪುರ: ಹಾಲಿನ ಪ್ಯಾಕೆಟ್ಗೆ ಹಣ ನೀಡದ ವಿಚಾರದಲ್ಲಿ ಗ್ರಾಹಕ (Customer) ಹಾಗೂ ಹಾಲಿನ ಅಂಗಡಿ ಮಾಲೀಕನ ನಡುವೆ ಗಲಾಟೆ ನಡೆದು, ಗ್ರಾಹಕನ ಮೇಲೆ ಹಾಲಿನ ಅಂಗಡಿ ಮಾಲೀಕ ಹಾಗೂ ಆತನ ಸಂಬಂಧಿಕರು ಮನಸ್ಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಬಾಗೇಪಲ್ಲಿಯಲ್ಲಿ (Bagepalli) ನಡೆದಿದೆ.
ಬಾಗೇಪಲ್ಲಿ ನಗರದ ಎರಡನೇ ವಾರ್ಡ್ ನಿವಾಸಿ ನರಸಿಂಹಮೂರ್ತಿ ಎಂಬಾತ ಹಲ್ಲೆಗೊಳಗಾದ ಗ್ರಾಹಕ. ನರಸಿಂಹ ಮೂರ್ತಿ , ಶಿವರಾಜ್ ಎಂಬಾತನ ಅಂಗಡಿಗೆ ಬಂದಿದ್ದ. ಈ ವೇಳೆ ಹಾಲಿನ ಪ್ಯಾಕೆಟ್ ಖರೀದಿ ಮಾಡುವಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಅಂಗಡಿ ಮಾಲೀಕ (Shop Owner) ಶಿವರಾಜ್ ತಕ್ಷಣ ತನ್ನ ಸಂಬಂಧಿಕರನ್ನು ಕರೆಸಿದ್ದಾನೆ. ಅದಾದ ಬಳಿಕ ಅವರೆಲ್ಲರೂ ಸೇರಿ ಗ್ರಾಹಕ ನರಸಿಂಹಮೂರ್ತಿ ಮೇಲೆ ಮನಸ್ಸೋ ಇಚ್ಚೆ ಬಾಸುಂಡೆಗಳು ಬರುವ ಹಾಗೆ ಬಾರಿಸಿದ್ದಾರೆ. ಇದನ್ನೂ ಓದಿ: ಕೊಯಮತ್ತೂರು ಸಿಲಿಂಡರ್ ಸ್ಫೋಟ ಕೇಸ್ – ತನಿಖೆ ವಹಿಸಿಕೊಂಡ NIA
ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ನರಸಿಂಹಮೂರ್ತಿ ಪತ್ನಿ ನಂದಿನಿ ದೂರು ದಾಖಲಿಸಿದ್ದಾರೆ. ಅಲ್ಲಿನ ಪೊಲೀಸರು ಹಾಲಿನ ಅಂಗಡಿ ಮಾಲೀಕ ಶಿವರಾಜ್ ಹಾಗೂ ಸಂಬಂಧಿಕರಾದ ಆನಂದ್, ಕಮಲಕಾರರೆಡ್ಡಿ, ಗೋಪಾಲರೆಡ್ಡಿ, ಸುನೀಲ್, ಲೋಕೇಶ್ ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಶಿಕ್ಷಣ ಇಲಾಖೆ ಎಡವಟ್ಟು – ಆಮಂತ್ರಣ ಪತ್ರಿಕೆಯಲ್ಲಿ ವಿಶೇಷ ಆಹ್ವಾನಿತರಾಗಿ ದಿ.ಆನಂದ್ ಮಾಮನಿ ಹೆಸರು