ರಾಯಚೂರು: ರಾಜಕರಾಣಿಗಳು ಲೋಕಸಮರದಲ್ಲಿ ಬ್ಯುಸಿಯಾದ್ರೆ, ಇತ್ತ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಪರದಾಟ ಅನುಭವಿಸುತ್ತಿದ್ದಾರೆ.
ಹೌದು. ರಾಯಚೂರಿನ ಲಿಂಗಸುಗೂರಿನ ತಾಲೂಕಾಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಇಲ್ಲಿ ಒಳರೋಗಿಗಳಿಗೆ ಊಟ ಮಾಡಲು ಕನಿಷ್ಠ ತಟ್ಟೆಯ ವ್ಯವಸ್ಥೆಯೂ ಇಲ್ಲದಿರುವುದು ವಿಪರ್ಯಾಸ.
ಆಸ್ಪತ್ರೆಯಲ್ಲಿ ಒಳರೋಗಿಯೊಬ್ಬ ತಟ್ಟೆಯಿಲ್ಲದೆ ಟವೆಲ್ ಮೇಲೆ ಅನ್ನ-ಸಾರು ಹಾಕಿಕೊಂಡು ಊಟ ಮಾಡಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಊಟ ನೀಡಬೇಕು. ಊಟ ನೀಡುವಾಗ ತಟ್ಟೆ ವ್ಯವಸ್ಥೆ ಇಲ್ಲವೆ ಉಪಯೋಗಿಸಿ ಬೀಸಾಡುವ ತಟ್ಟೆಯನ್ನಾದರೂ ನೀಡಬೇಕು. ಆದ್ರೆ ಈ ಆಸ್ಪತ್ರೆಯಲ್ಲಿ ಯಾವುದೇ ವ್ಯವಸ್ಥೆಗಳಿಲ್ಲ. ಹೀಗಾಗಿ ರೋಗಿಗಳು ತಮ್ಮ ಟವೆಲ್ ನಲ್ಲಿಯೇ ಊಟ ಮಾಡಬೇಕಾದ ಪರಸ್ಥಿತಿ ಬಂದೊದಗಿದೆ.