‘ನೋ ಕ್ಯಾಶ್’ ಬೋರ್ಡ್ ಹಾಕಿರುವ ATMಗಳ ತಿಥಿ ಮಾಡಿದ ಜನರು

Public TV
1 Min Read
RCR ATM Thiti

ರಾಯಚೂರು: ಒಂದು ತಿಂಗಳಿಂದ ಸರಿಯಾಗಿ ಕೆಲಸ ಮಾಡದೇ ನೋ ಕ್ಯಾಶ್ ಬೋರ್ಡ್ ಹಾಕಿರುವ ಎಟಿಂಎಂಗಳು ಸತ್ತಿವೆ ಅಂತಾ ರಾಯಚೂರಿನಲ್ಲಿ ಸಾರ್ವಜನಿಕರು ತಿಥಿ ಕಾರ್ಯ ಮಾಡುವ ಮೂಲಕ ಆಕ್ರೋಶವನ್ನು ಹೊರ ಹಾಕಿದ್ದಾರೆ.

ನಗರದ ಅಂಬೇಡ್ಕರ್ ವೃತ್ತದ ಬಳಿಯಿರುವ ವಿವಿಧ ಬ್ಯಾಂಕ್ ಎಟಿಎಂಗಳ ಮುಂದೆ ಜನಾಂದೋಲನ ಮಹಾಮೈತ್ರಿ ಸಂಘಟನೆ ತಿಥಿ ಕಾರ್ಯ ಮಾಡಿದೆ. ಸಾರ್ವಜನಿಕರು ಒಂದು ತಿಂಗಳಿಂದ ಎಟಿಂಎಂ ನಲ್ಲಿ ಹಣವಿಲ್ಲದೆ ಇರುವದರಿಂದ ಪರದಾಡುವಂತಾಗಿದೆ. ಕೇಂದ್ರ ಸರ್ಕಾರದ ನಿಲುವುಗಳಿಂದಾಗಿ ಕಾರ್ಪೋರೇಟ್ ಸಂಸ್ಥೆಗಳು ಹಣ ಲೂಟಿ ಮಾಡುತ್ತಿವೆ, ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಜನಸಂಗ್ರಾಮ ಪರಿಷತ್ ಮುಖಂಡ ಡಾ.ವಿ.ಎ.ಮಾಲೀಪಾಟೀಲ್ ಆರೋಪಿಸಿದ್ರು.

RCR ATM thiti 1

ಕೇಂದ್ರ ಸರ್ಕಾರವು ಸುಮಾರು 2 ಲಕ್ಷ ಕೋಟಿ ರೂ. ಕಾರ್ಪೋರೇಟ್ ಸಾಲವನ್ನು ಮನ್ನಾ ಮಾಡಿದ್ದು, ಅದರ ಜೊತೆಗೆ ಲಲಿತ್ ಮಹಲ್ 6 ಸಾವಿರ ಕೋಟಿ ರೂ., ವಿಜಯ್ ಮಲ್ಯ 9 ಸಾವಿರ ಕೋಟಿ ರೂ. ಮತ್ತು ನೀರವ್ ಮೋದಿ 11 ಸಾವಿರದ 700 ಕೋಟಿ ರೂ. ಸಾಲವನ್ನ ತೆಗೆದುಕೊಂಡು ದೇಶದಿಂದ ಓಡಿಹೋಗಿದ್ದಾರೆ. ಆದ್ದರಿಂದ ಬ್ಯಾಂಕ್ ನಲ್ಲಿ ಹಣ ಕಡಿಮೆಯಾಗಿ ಈ ರೀತಿ ಸಮಸ್ಯೆಯಾಗುತ್ತಿದೆ ಅಂತಾ ಮಾಲೀಪಾಟೀಲ್ ಹೇಳಿದ್ರು.

ಕೇಂದ್ರ ಸರ್ಕಾರ ಜನಸಾಮಾನ್ಯರು ದುಡಿದ ಶ್ರಮದ ಹಣವನ್ನು ಬ್ಯಾಂಕ್ ಗೆ ಕಟ್ಟಿಸಿಕೊಂಡು ಅದನ್ನು ದೊಡ್ಡ ಜನರಿಗೆ ನೀಡುತ್ತದೆ. ಆದ್ರೆ ಅವರು ತಪ್ಪಿಸಿಕೊಂಡು ವಿದೇಶಕ್ಕೆ ಓಡಿಹೋಗುತ್ತಾರೆ. ಇದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗಿತ್ತಿದೆ. ನೋಟು ರದ್ದತಿಯಾದಾಗಲೂ ಎಟಿಎಂನಲ್ಲಿ ಹಣ ಇರಲಿಲ್ಲ, ಈಗಲೂ ಹಣವಿಲ್ಲದೆ ಬಾಗಿಲು ಮುಚ್ಚಿವೆ. ಅದಕ್ಕೆ ಈ ಸಮಸ್ಯೆಯನ್ನು ಸರ್ಕಾರಕ್ಕೆ ತಿಳಿಸಬೇಕೆಂದು ತಿಥಿ ಕಾರ್ಯ ಮಾಡಿದ್ದೇವೆಂದು ಅಂತಾ ಮಹಾಮೈತ್ರೆದ ಸಂಚಾಲಕ ಎಂ.ಆರ್.ಭೇರಿ ತಿಳಿಸಿದ್ರು.

https://www.youtube.com/watch?v=f394ewblo58

RCR ATM thiti 2

Share This Article
Leave a Comment

Leave a Reply

Your email address will not be published. Required fields are marked *