ಬಾಲಿವುಡ್ ನಟಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ (Raghav Chadha) ಸೆ.24ರಂದು ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟರು. ನವಜೋಡಿ ಹನಿಮೂನ್ ಎಲ್ಲಿಗೆ ಹೋಗುತ್ತಾರೆ ಎಂದು ಕುತೂಹಲದಿಂದ ಕಾಯುತ್ತಿದ್ದವರಿಗೆ ಅಚ್ಚರಿ ಮೂಡಿಸಿದೆ. ಮದುವೆಯಾಗಿ 6 ದಿನಕ್ಕೆ ಪರಿಣಿತಿ ದಂಪತಿ ಹನಿಮೂನ್ ಕ್ಯಾನ್ಸಲ್ ಆಗಿದ್ದೇಕೆ? ಮುಂದೂಡಿಕೆಗೆ ಹಿಂದಿನ ಕಾರಣವೇನು? ಇಲ್ಲಿದೆ ಮಾಹಿತಿ.
ನಟಿ ಪರಿಣಿತಿ- ರಾಘವ್ ಹಲವು ವರ್ಷಗಳು ಪ್ರೀತಿಸಿ ಗುರುಹಿರಿಯರ ಸಮ್ಮುಖದಲ್ಲಿ ಸೆ.24ರಂದು ರಾಜಸ್ಥಾನದಲ್ಲಿ ಮದುವೆಯಾದರು. ನವಜೋಡಿಯ ಹನಿಮೂನ್ ಕ್ಯಾನ್ಸಲ್ ಆಗಿದ್ಯಾಕೆ? ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಸದ್ಯ ನವಜೋಡಿ ದೆಹಲಿಯಲ್ಲಿದ್ದಾರೆ. ತಮ್ಮ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ.
ನವದಂಪತಿಗೆ ಇಬ್ಬರ ಕುಟುಂಬದ ಜೊತೆ ಬಾಂದವ್ಯ ಬೆಸೆಯುವ ಸಲುವಾಗಿ ತಮ್ಮ ಸಮಯ ಮೀಸಲಿಡುತ್ತಿದ್ದಾರೆ. ಫ್ಯಾಮಿಲಿ ಜೊತೆ ಪರಿಣಿತಿ ದಂಪತಿ ಟೈಂ ಪಾಸ್ ಮಾಡುತ್ತಾ ಎಂಜಾಯ್ ಮಾಡ್ತಿದ್ದಾರೆ.
ಅಕ್ಟೋಬರ್ 6ರಂದು ಅಕ್ಷಯ್ ಕುಮಾರ್ (Akshay Kumar) ಜೊತೆಗಿನ ‘ಮಿಷನ್ ರಾಣಿಗಂಜ್’ ಸಿನಿಮಾ ರಿಲೀಸ್ಗೆ ರೆಡಿಯಿದ್ದು, ಅದರ ಪ್ರಚಾರ ಕಾರ್ಯ ಸದ್ಯದಲ್ಲೇ ಶುರುವಾಗಲಿದೆ. ಪರಿಣಿತಿ ಚೋಪ್ರಾ (Parineeti Chopra) ಅವರು ಈ ಚಿತ್ರಕ್ಕೆ ಸಮಯ ನೀಡಬೇಕಿದೆ. ಇದನ್ನೂ ಓದಿ:‘ಹ್ಯಾರಿ ಪಾಟರ್’ ಖ್ಯಾತಿಯ ಮೈಕೆಲ್ ಗ್ಯಾಂಬೊನ್ ನಿಧನ
ಇತ್ತ ರಾಘವ್ ಚಡ್ಡಾ ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್, ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ ಇದೆ. ಹಾಗಾಗಿ ಪರಿಣಿತಿ-ರಾಘವ್ ಇಬ್ಬರು ಸಿನಿಮಾ, ರಾಜಕೀಯ (Politics) ಕೆಲಸದಲ್ಲಿ ಬ್ಯುಸಿಯಿರುವ ಕಾರಣ ಹನಿಮೂನ್ ಪ್ಲ್ಯಾನ್ ಮುಂದೂಡಲಾಗಿದೆ. ಸದ್ಯ ತಮ್ಮ ಸಮಯವನ್ನ ಕುಟುಂಬದ ಜೊತೆ ಕಳೆಯುತ್ತಿದ್ದಾರೆ.